ತೊಟ್ಟಿಲೋತ್ಸವ ಪಲ್ಲಕ್ಕಿ ಮೆರವಣಿಗೆ
ರಾಂಪುರ: ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಮೇ.10ರಂದು ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಿಸಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಲ್ಲಮ್ಮಳ ಮೂರ್ತಿಗೆ ಅಭಿಷೇಕ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆಯಲಿದ್ದು ನಂತರ ಮಲ್ಲಮ್ಮಳ ತೊಟ್ಟಿಲೋತ್ಸವ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಹೇಮರಡ್ಡಿ ಮಲ್ಲಮ್ಮಳ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಮಧ್ಯಾಹ್ನ 1ಕ್ಕೆ ಹನಮಂತ ಗೆಣ್ಣೂರ ಅವರಿಂದ ಪ್ರಸಾದ ಸೇವೆ ಜರುಗಲಿದೆ. ಜ್ಞಾನ ದಾಸೋಹ ಇಂದು: ಮೇ.9ರಂದು ಸಂಜೆ 6ಕ್ಕೆ ಜ್ಞಾನ ದಾಸೋಹ (ಸತ್ಸಂಗ) ಕಾರ್ಯಕ್ರಮ ನಡೆಯಲಿದೆ. ಕೊಣ್ಣೂರಿನ ಹೊರಗಿನ ಮಠದ ವಿಶ್ವಪ್ರಭುದೇವರು ಸಾನ್ನಿಧ್ಯ ವಹಿಸಲಿದ್ದು ಬಾಗಲಕೋಟೆಯ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಉಪನ್ಯಾಸ ನೀಡುವರು ಎಂದು ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.