ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ರಾಂಪುರ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ ನಾಳೆ

Published : 9 ಮೇ 2024, 6:31 IST
Last Updated : 9 ಮೇ 2024, 6:31 IST
ಫಾಲೋ ಮಾಡಿ
Comments
ಹೇಮರಡ್ಡಿ ಮಲ್ಲಮ್ಮ
ಹೇಮರಡ್ಡಿ ಮಲ್ಲಮ್ಮ
ತೊಟ್ಟಿಲೋತ್ಸವ ಪ‍ಲ್ಲಕ್ಕಿ ಮೆರವಣಿಗೆ
ರಾಂಪುರ: ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಮೇ.10ರಂದು ಹೇಮರಡ್ಡಿ ಮಲ್ಲಮ್ಮಳ ಜಯಂತಿ ಆಚರಿಸಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಲ್ಲಮ್ಮಳ ಮೂರ್ತಿಗೆ ಅಭಿಷೇಕ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆಯಲಿದ್ದು ನಂತರ ಮಲ್ಲಮ್ಮಳ ತೊಟ್ಟಿಲೋತ್ಸವ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಹೇಮರಡ್ಡಿ ಮಲ್ಲಮ್ಮಳ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಮಧ್ಯಾಹ್ನ 1ಕ್ಕೆ ಹನಮಂತ ಗೆಣ್ಣೂರ ಅವರಿಂದ ಪ್ರಸಾದ ಸೇವೆ ಜರುಗಲಿದೆ. ಜ್ಞಾನ ದಾಸೋಹ ಇಂದು: ಮೇ.9ರಂದು ಸಂಜೆ 6ಕ್ಕೆ ಜ್ಞಾನ ದಾಸೋಹ (ಸತ್ಸಂಗ) ಕಾರ್ಯಕ್ರಮ ನಡೆಯಲಿದೆ. ಕೊಣ್ಣೂರಿನ ಹೊರಗಿನ ಮಠದ ವಿಶ್ವಪ್ರಭುದೇವರು ಸಾನ್ನಿಧ್ಯ ವಹಿಸಲಿದ್ದು ಬಾಗಲಕೋಟೆಯ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಉಪನ್ಯಾಸ ನೀಡುವರು ಎಂದು ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT