ಬಾಗಲಕೋಟೆ: ಈ ಬಾರಿಯ ಬಜೆಟ್ನಲ್ಲಿ ತಾವು ಪ್ರತಿನಿಧಿಸುವ ಬಾದಾಮಿ ವಿಧಾನಸಭಾ ಕ್ಷೇತ್ರದ 15 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಪತ್ರ ಬರೆದಿದ್ದಾರೆ.
ಇದರಲ್ಲಿ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ, ಕೆರೂರು ಏತನೀರಾವರಿ ಯೋಜನೆ, ಬಾದಾಮಿಯಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯ, ಟ್ರೀ ಪಾರ್ಕ್, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಗುಳೇದಗುಡ್ಡದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕ, ಜವಳಿ ಪಾರ್ಕ್, ಪಶುವೈದ್ಯಕೀಯ ಕಾಲೇಜು ಸ್ಥಾಪನೆಯ ಬೇಡಿಕೆ ಒಳಗೊಂಡಿದೆ.
ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ₹25 ಕೋಟಿ, ಕೆರೂರು ಏತ ನೀರಾವರಿ ಯೋಜನೆಗೆ ₹525 ಕೋಟಿ, ಜವಳಿ ಪಾರ್ಕ್ಗೆ ₹50 ಕೋಟಿ, ಟ್ರೀಪಾರ್ಕ್ಗೆ ₹100 ಕೋಟಿ, ಪ್ರವಾಸಿಗರಿಗೆ ಮೂಲ ಸೌಕರ್ಯಕ್ಕೆ ₹1000 ಕೋಟಿ, ಕೆರೆಗಳಿಗೆ ನೀರು ತುಂಬಿಸಲು ₹90 ಕೋಟಿ, ಬಹುಮಹಡಿ ವಾಣಿಜ್ಯ ಸಂಕೀರ್ಣಕ್ಕೆ ₹25 ಕೋಟಿ ಅನುದಾನ ಕಲ್ಪಿಸಲು ಬೇಡಿಕೆ ಸಲ್ಲಿಸಿದ್ದಾರೆ.