<p><strong>ಕೆರೂರ:</strong> ‘ಕೆರೂರ ಪಟ್ಟಣವು ಅತಿ ಹೆಚ್ಚು ಕಲಾವಿದರನ್ನು ಹೊಂದಿದ ಜಾನಪದ ಕಲೆಗಳ ತವರೂರಾಗಿದೆ. ಅದಕ್ಕೆ ಕೆರೂರ ಉತ್ಸವದಂತಹ ವೇದಿಕೆ ಸಾಕ್ಷಿಯಾಗಿದೆ’ ಎಂದು ಜಾನಪದ ಕಲಾವಿದ ಶಬ್ಬೀರ ಢಾಂಗೆ ಹೇಳಿದರು.</p>.<p>ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಶಿರೂರ ಪ್ರತಿಷ್ಠಾನ ಹಾಗೂ ಗಳೆಯರ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ಕೆರೂರ ಉತ್ಸವ - ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ, ಬೆಳೆಸುವುದು ಇಂದಿನ ಪೀಳಿಗೆಗೆ ಬಹುದೊಡ್ಡ ಜವಾಬ್ದಾರಿಯಾಗಿದೆ. ವೆಂಕಟೇಶ ಮೂರ್ತಿ ಶಿರೂರ ಅವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಹುಟ್ಟುರಿನ ಕಲಾವಿದರನ್ನು ಗುರುತಿಸುವಂತಹ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.</p>.<p>‘ದಶಕದ ಹೊಸ್ತಿಲಲ್ಲಿರುವ ಶಿರೂರ ಪ್ರತಿಷ್ಠಾನವು ಪ್ರತಿವರ್ಷ ಕಲಾವಿದರ ಪರಿವಾರವನ್ನು ಹಾಗೂ ಗೆಳೆಯರ ಬಳಗವನ್ನು ಒಂದೇ ವೇದಿಕೆಯಲ್ಲಿ ಬೆರೆಯುವಂತೆ ಮಾಡಿರುವುದು ಸಂತೋಷಕರ ಸಂಗತಿ’ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಾಂತಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಕಲಾವಿದರ ಸಂಗೀತ ಮತ್ತು ಜ್ಯೂನಿಯರ್ ವಿಷ್ಣುವರ್ಧನ ಅವರ ನಟನೆ ಪ್ರೇಕ್ಷಕರನ್ನು ರಂಜಿಸಿತು.</p>.<p>ಪ್ರಾಣೇಶಾಚಾರ್ಯ ಕೆರೂರ, ಶಿರೂರ ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಶ ಮೂರ್ತಿ ಶಿರೂರ, ನಿವೃತ್ತ ಶಿಕ್ಷಕರಾದ ಡಿ.ಪಿ.ಅಮಲಝರಿ, ಆರ್.ಆರ್.ಶೆಟ್ಟರ, ಎಂ.ಜಿ.ಕಿತ್ತಲಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ, ಮಾಂತೇಶ ಮೇಣಸಗಿ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ:</strong> ‘ಕೆರೂರ ಪಟ್ಟಣವು ಅತಿ ಹೆಚ್ಚು ಕಲಾವಿದರನ್ನು ಹೊಂದಿದ ಜಾನಪದ ಕಲೆಗಳ ತವರೂರಾಗಿದೆ. ಅದಕ್ಕೆ ಕೆರೂರ ಉತ್ಸವದಂತಹ ವೇದಿಕೆ ಸಾಕ್ಷಿಯಾಗಿದೆ’ ಎಂದು ಜಾನಪದ ಕಲಾವಿದ ಶಬ್ಬೀರ ಢಾಂಗೆ ಹೇಳಿದರು.</p>.<p>ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಶಿರೂರ ಪ್ರತಿಷ್ಠಾನ ಹಾಗೂ ಗಳೆಯರ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ಕೆರೂರ ಉತ್ಸವ - ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>‘ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ, ಬೆಳೆಸುವುದು ಇಂದಿನ ಪೀಳಿಗೆಗೆ ಬಹುದೊಡ್ಡ ಜವಾಬ್ದಾರಿಯಾಗಿದೆ. ವೆಂಕಟೇಶ ಮೂರ್ತಿ ಶಿರೂರ ಅವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಹುಟ್ಟುರಿನ ಕಲಾವಿದರನ್ನು ಗುರುತಿಸುವಂತಹ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.</p>.<p>‘ದಶಕದ ಹೊಸ್ತಿಲಲ್ಲಿರುವ ಶಿರೂರ ಪ್ರತಿಷ್ಠಾನವು ಪ್ರತಿವರ್ಷ ಕಲಾವಿದರ ಪರಿವಾರವನ್ನು ಹಾಗೂ ಗೆಳೆಯರ ಬಳಗವನ್ನು ಒಂದೇ ವೇದಿಕೆಯಲ್ಲಿ ಬೆರೆಯುವಂತೆ ಮಾಡಿರುವುದು ಸಂತೋಷಕರ ಸಂಗತಿ’ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಾಂತಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಕಲಾವಿದರ ಸಂಗೀತ ಮತ್ತು ಜ್ಯೂನಿಯರ್ ವಿಷ್ಣುವರ್ಧನ ಅವರ ನಟನೆ ಪ್ರೇಕ್ಷಕರನ್ನು ರಂಜಿಸಿತು.</p>.<p>ಪ್ರಾಣೇಶಾಚಾರ್ಯ ಕೆರೂರ, ಶಿರೂರ ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಶ ಮೂರ್ತಿ ಶಿರೂರ, ನಿವೃತ್ತ ಶಿಕ್ಷಕರಾದ ಡಿ.ಪಿ.ಅಮಲಝರಿ, ಆರ್.ಆರ್.ಶೆಟ್ಟರ, ಎಂ.ಜಿ.ಕಿತ್ತಲಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ, ಮಾಂತೇಶ ಮೇಣಸಗಿ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>