ಜಮಖಂಡಿ: ಇಲ್ಲಿನ ವೈನ್ಶಾಪ್ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಮಧುರಖಂಡಿ ಗ್ರಾಮದ ರಮೇಶ ಭೀಮಪ್ಪ ಕವಟಗಿ ಎಂಬುವರನ್ನು ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ನಗರದ ಹೊರವಲಯದಲ್ಲಿ ಶವ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಈರಯ್ಯ ಮಠಪತಿ, ಪಿಎಸ್ಐ ವಸಂತ ಬಂಡಗಾರ ಭೇಟಿ ನೀಡಿದರು.