ಜಮಖಂಡಿ: ‘ಲೋಕಸಭೆ ಚುಣಾವಣೆ ಟಿಕೆಟ್ಗಾಗಿ ನಾನು ಅರ್ಜಿ ಹಾಕಿರಲಿಲ್ಲ, ಲೋಕಸಭೆ ಚುಣಾವಣೆ ಮೇಲೆ ನನಗೆ ಆಸಕ್ತಿ ಇಲ್ಲ, ಬಾಗಲಕೋಟೆ ಮುಖಂಡರು ನಾನು ಸೂಕ್ತ ಅಭ್ಯರ್ಥಿಯಾಗುತ್ತೇನೆಡ ಎಂದು ನಾಯಕರಿಗೆ ಹೇಳಿದ ಪರಿಣಾಮ ರಾಜ್ಯ ಮತ್ತು ರಾಷ್ಟ್ರ ನಾಯಕರು ಚುಣಾವಣೆಗೆ ತಯಾರಾಗಲು ಒತ್ತಾಯ ಮಾಡಿದ್ದರು. ಹಲವು ಬಾರಿ ಕರೆಯಿಸಿ ಮಾತನಾಡಿದ್ದಾರೆ. ಆದರೆ ನಾನು ನಿರಾಕರಿಸಿದ್ದೇನೆ’ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.