ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಹಂತ-3ರಡಿ ಅಂದಾಜು ₹1.97 ಕೋಟಿ ಮೊತ್ತದ, 3 ಕಿ.ಮೀ.ವರೆಗಿನ ಕಾಮಗಾರಿ ಜುಲೈ 18ಕ್ಕೆ ಮುಗಿಯಬೇಕಿದೆ. ಮಳೆಗಾಲ ಆರಂಭವಾದರೂ, ಶೇ 20ರಷ್ಟು ಕಾಮಗಾರಿ ಬಾಕಿ ಉಳಿಸಿದ್ದರಿಂದ ಬಾಗಲಕೋಟೆ, ಶಿರೂರ, ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ, ಕಮತಗಿ ಮೊದಲಾದ ಗ್ರಾಮದವರು ಬೇಸರ ವ್ಯಕ್ತಪಡಿಸಿದರು.