<p><strong>ಗುಳೇದಗುಡ್ಡ:</strong> ತಾಲ್ಲೂಕಿನ ಬೂದಿನಗಡದಿಂದ ಕಮತಗಿವರೆಗಿನ ರಸ್ತೆ ಕಾಮಗಾರಿಯನ್ನು ಜುಲೈ 18ರೊಳಗೆ ಪೂರ್ಣಗೊಳಿಸುವಂತೆ ಬಾಗಲಕೋಟೆಯ ಪಿಎಂಜಿಎಸ್ವೈ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಬಸವ ಕಿರಗಿ ಹಾಗೂ ಸೆಕ್ಷನ್ ಎಂಜಿನಿಯರ್ ಅನಿಲ ಜಾಧವ ಅವರು ಗುತ್ತಿಗೆದಾರರಿಗೆ ಸೂಚಿಸಿದರು.</p>.<p>ಮೇ 27ರಂದು ‘ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸವಾರರ ಆಗ್ರಹ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಶುಕ್ರವಾರ ರಸ್ತೆ ಕಾಮಗಾರಿ ವೀಕ್ಷಿಸಿದರು. ‘ಮಳೆಯಿಂದ ಕಾಮಗಾರಿ ಕಳಪೆಯಾಗದಂತೆ ಕ್ರಮ ವಹಿಸಿ’ ಎಂದೂ ಹೇಳಿದರು.</p>.<p>ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಹಂತ-3ರಡಿ ಅಂದಾಜು ₹1.97 ಕೋಟಿ ಮೊತ್ತದ, 3 ಕಿ.ಮೀ.ವರೆಗಿನ ಕಾಮಗಾರಿ ಜುಲೈ 18ಕ್ಕೆ ಮುಗಿಯಬೇಕಿದೆ. ಮಳೆಗಾಲ ಆರಂಭವಾದರೂ, ಶೇ 20ರಷ್ಟು ಕಾಮಗಾರಿ ಬಾಕಿ ಉಳಿಸಿದ್ದರಿಂದ ಬಾಗಲಕೋಟೆ, ಶಿರೂರ, ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ, ಕಮತಗಿ ಮೊದಲಾದ ಗ್ರಾಮದವರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ತಾಲ್ಲೂಕಿನ ಬೂದಿನಗಡದಿಂದ ಕಮತಗಿವರೆಗಿನ ರಸ್ತೆ ಕಾಮಗಾರಿಯನ್ನು ಜುಲೈ 18ರೊಳಗೆ ಪೂರ್ಣಗೊಳಿಸುವಂತೆ ಬಾಗಲಕೋಟೆಯ ಪಿಎಂಜಿಎಸ್ವೈ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಬಸವ ಕಿರಗಿ ಹಾಗೂ ಸೆಕ್ಷನ್ ಎಂಜಿನಿಯರ್ ಅನಿಲ ಜಾಧವ ಅವರು ಗುತ್ತಿಗೆದಾರರಿಗೆ ಸೂಚಿಸಿದರು.</p>.<p>ಮೇ 27ರಂದು ‘ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸವಾರರ ಆಗ್ರಹ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಶುಕ್ರವಾರ ರಸ್ತೆ ಕಾಮಗಾರಿ ವೀಕ್ಷಿಸಿದರು. ‘ಮಳೆಯಿಂದ ಕಾಮಗಾರಿ ಕಳಪೆಯಾಗದಂತೆ ಕ್ರಮ ವಹಿಸಿ’ ಎಂದೂ ಹೇಳಿದರು.</p>.<p>ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಹಂತ-3ರಡಿ ಅಂದಾಜು ₹1.97 ಕೋಟಿ ಮೊತ್ತದ, 3 ಕಿ.ಮೀ.ವರೆಗಿನ ಕಾಮಗಾರಿ ಜುಲೈ 18ಕ್ಕೆ ಮುಗಿಯಬೇಕಿದೆ. ಮಳೆಗಾಲ ಆರಂಭವಾದರೂ, ಶೇ 20ರಷ್ಟು ಕಾಮಗಾರಿ ಬಾಕಿ ಉಳಿಸಿದ್ದರಿಂದ ಬಾಗಲಕೋಟೆ, ಶಿರೂರ, ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ, ಕಮತಗಿ ಮೊದಲಾದ ಗ್ರಾಮದವರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>