ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಮಹಿಳೆಯರ ಅಭಿಪ್ರಾಯ

Published 2 ಜೂನ್ 2023, 16:33 IST
Last Updated 2 ಜೂನ್ 2023, 16:33 IST
ಅಕ್ಷರ ಗಾತ್ರ

ಭಾಗ್ಯಗಳ ಹರಿಕಾರ

ಬಡ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳಷ್ಟು ಅನುಕೂಲವಾಗಲಿದೆ. ಎಷ್ಟೋ ಬಡ ಕಾರ್ಮಿಕರು ಕೆಲಸಕ್ಕಾಗಿ ಬೇರೆ ಊರುಗಳಿಗೆ ಹೋಗುತ್ತಿದ್ದರು. ಅವರ ದುಡಿಮೆಯ ಕೆಲ ಭಾಗ ಬಸ್‌ ಚಾರ್ಜ್‌ಗೆ ಹೋಗುತ್ತಿತ್ತು. ಈಗ ಅದು ಉಳಿತಾಯವಾಗಲಿದೆ. ಗೃಹಲಕ್ಷ್ಮಿಯಡಿ ₹ 2ಸಾವಿರದಿಂದ ಅನುಕೂಲವಾಗಲಿದೆ. ಭಾಗ್ಯಗಳ ಹರಿಕಾರ ಎನ್ನುವುದನ್ನು ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ.

– ರೇಣುಕಾ ಮಡ್ಡಿಮನಿ, ಮಹಾಲಿಂಗಪುರ

ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ

ದುಡಿಯಲಿಕ್ಕೆ ಆಗದ ವಯಸ್ಸಿನಲ್ಲಿರುವವರಿಗೆ ಬಹಳ ಅನುಕೂಲ ಆಗಲಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವತಂತ್ರವಾಗಲಿದ್ದಾರೆ. ಕುಟುಂಬ ನಿರ್ವಹಣೆ ಸರಳವಾಗಲಿದೆ. ಬಸ್ ಪ್ರಯಾಣ ಉಚಿತ ಮಾಡಿರುವುದರಿಂದಲೂ ಅನುಕೂಲವಾಗಲಿದೆ.

– ಗೌರವ ತುಂಬರಮಟ್ಟಿ, ನವನಗರ

ನುಡಿದಂತೆ ನಡೆದ ಸರ್ಕಾರ

ಬಡ, ಮಧ್ಯಮ ವರ್ಗಗಳ ಜನರಿಗೆ ಬಹಳ ಅನುಕೂಲವಾಗಲಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಇದನ್ನು ಸಹಿಸದ ಕೆಲವರು ಬಿಟ್ಟಿ ಭಾಗ್ಯಗಳೆಂದು ಟೀಕೆ ಮಾಡುತ್ತಿದ್ದಾರೆ. ಅವರೊಮ್ಮೆ ಬಡವರ ಜೀವನವನ್ನು ನೋಡಬೇಕು. ಆಗ ಅವರಿಗೆ ಬಡವರ ಸಂಕಷ್ಟ ಅರ್ಥವಾಗುತ್ತದೆ

-ರಕ್ಷಿತಾ ಈಟಿ ಜಿಲ್ಲಾ ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್

ಗೌರವ್ವ ತುಂಬರಮಟ್ಟಿ
ಗೌರವ್ವ ತುಂಬರಮಟ್ಟಿ
ರಕ್ಷಿತಾ ಈಟಿ
ರಕ್ಷಿತಾ ಈಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT