ಕೆರೂರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಾದಾಮಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಬಾಗಲಕೋಟೆ ನವನಗರದ ಮಹಮ್ಮದ ಗೌಸ ಹುನಗುಂದ ಮತ್ತು ಅನ್ನಿಸಾ ಅತ್ತಾರ ಬಂಧಿತರು. ₹ 14,865 ಬೆಲೆಯ 675 ಕ್ವಿಂಟಲ್ ಅಕ್ಕಿ ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ. ಪಡಿತರ ಅಕ್ಕಿ ಸಾಗಣೆ ಲೈಸೆನ್ಸ್ ಇದೆ ಎಂದು ಸ್ಥಳೀಯರನ್ನು ನಂಬಿಸಿ ಅವರು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು.
ಶಿರಸ್ತೇದಾರ್ ಗುರುಮೂರ್ತಿ ಸಬನಿಸ್ ಮತ್ತು ಮಂಜುನಾಥ ರೊಟ್ಟಿ ದಾಳಿ ನಡೆಸಿದ್ದಾರೆ.