ಕುರುಬ ಸಮಾಜದ ಎಚ್. ವಿಶ್ವನಾಥ,ಎಂ.ಟಿ.ಬಿ ನಾಗರಾಜ ಹಾಗೂ ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಬಿಜೆಪಿ ಸಕಾ೯ರ ಬರುವಲ್ಲಿ ನಮ್ಮ ಸಮಾಜದ ನಾಲ್ವರು ಶಾಸಕರ ಪಾತ್ರ ಇದೆ. ಅವರು ಬಂದಿದ್ದರಿಂದ ಬಿಜೆಪಿ ಸಕಾ೯ರ ಬಂತು. ಹೀಗಾಗಿ ಮಾತು ಕೊಟ್ಟಂತೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆಯಬೇಕು. ಅವರು ಮಾತು ಉಳಿಸಿಕೊಳ್ಳಲಿದ್ದಾರೆ ಎನ್ನುವ ಭರವಸೆ ಇದೆ. ಎಚ್.ವಿಶ್ವನಾಥ, ಎಂ.ಟಿ.ಬಿ. ನಾಗರಾಜ, ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಏನು ಕ್ರಮ ಕೈಗೊಳ್ಳಬೇಕು ಎಂದು ನಿಧಾ೯ರ ಮಾಡಲಿದ್ದೇವೆ. ನ್ಯಾಯ ಸಿಗದೇ ಹೋದರೆ ಸಕಾ೯ರದಲ್ಲಿ ಮುಂದುವರೆಯುವ ಮತ್ತು ಬಿಡುವ ಬಗ್ಗೆ ಚಿಂತನೆ ಮಾಡಲಿದ್ದೇವೆ ಎಂದರು.