’ಚಾಮುಂಡೇಶ್ವರಿಯಲ್ಲಿ ಅಷ್ಟೊಂದು ಕೆಲಸ ಮಾಡಿದೆ. ಆದರೂಅವರು ಕೈಬಿಟ್ಟರು. ಸಂಕಷ್ಟದ ಸಂದರ್ಭದಲ್ಲಿ ಬಾದಾಮಿ ಜನ ಕೈ ಹಿಡಿದರು. ಹೀಗಾಗಿ ಅವರ ಋಣ ತೀರಿಸುವೆ. ಇನ್ನೂ ಮೂರು ವರ್ಷ ಅವಧಿ ಇದ್ದು, ಏನೆಲ್ಲಾ ಸಾಧ್ಯವೋ ಅಷ್ಟು ಅಭಿವೃದ್ಧಿ ಕೆಲಸ ಮಾಡುವೆ’ ಎಂದು ಭರವಸೆ ನೀಡಿದರು.ಆಗ ನೆರೆದವರಿಂದ ಚಪ್ಪಾಳೆ–ಶಿಳ್ಳೆಯ ಸುರಿಮಳೆಯೊಂದಿಗೆ ‘ಹೌದ್ದ ಹುಲಿಯಾ’ ಘೋಷಣೆ ಸದ್ದು ಜೋರಾಗಿ ಕೇಳಿಬಂದಿತು.