<p><strong>ಜಮಖಂಡಿ</strong>: ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ರೈತರು ಬೆಳೆದ ಕಬ್ಬು ಸಕಾಲದಲ್ಲಿ ಕಾರ್ಖಾನೆಗಳಿಗೆ ಕಳಿಸಲು ವಿಳಂಬವಾಗುತ್ತಿರುವ ಕಾರಣ ಕಬ್ಬು ಗರಿ ತೆಗೆಯುತ್ತಿದ್ದು ಇದರಿಂದ ಇಳುವರಿ ಕುಂಠಿತವಾಗುತ್ತಿದ್ದು ರೈತರು ನಷ್ಟದ ಭೀತಿಯಲ್ಲಿದ್ದಾರೆ.</p>.<p>ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಾ ನದಿ ಎಡ ಮತ್ತು ಬಲ ಹಾಗೂ ಸಾವಳಗಿ ಭಾಗದಲ್ಲಿ ಹೆಚ್ಚಿನ ನೀರು ಇರುವದರಿಂದ ರೈತರು ಕಬ್ಬು ಬೆಳೆಯುತ್ತಾರೆ. ಅದರ ಪೈಕಿ ಶೇ.60-70 ರಷ್ಟು ಕಬ್ಬು ಬೆಳೆಯುತ್ತಾರೆ, ಮೊದಲು 11-12 ತಿಂಗಳಿಗೆ ಗರಿ ತೆಗೆಯುತ್ತಿತ್ತು, ಆದರೆ ಇತ್ತೀಚೆಗೆ ರಸಾಯನಿಕ ಅಧಿಕ ಬಳಕೆ ಹಾಗೂ ವಾತಾವರಣದ ಪರಿಣಾಮವಾಗಿ 8-9 ತಿಂಗಳಲ್ಲಿಯೇ ಗರಿ ತೆಗೆಯುತ್ತಿದೆ.</p>.<p>ಕಬ್ಬು ಗರಿ ತೆಗೆಯಲು ಪ್ರಾರಂಭವಾದ ನಂತರ ಎಲೆ ಬೀಡುವದನ್ನು ನಿಲ್ಲಿಸುತ್ತದೆ, ಎಲೆ ಬೀಡುವದನ್ನು ನೀಲಿಸಿದರೆ ಕಬ್ಬಿಗೆ ಪೂರೈಕೆಯಾಗುವ ಆಹಾರ ನಿಂತು ಹೋಗುತ್ತದೆ, ಆಹಾರ ನಿಂತ ತಕ್ಷಣ ಕಬ್ಬಿನಲ್ಲಿ ಬೆಂಡು ಒಡೆದು ಇಳುವರಿ ಕಡಿಮೆಯಾಗುತ್ತದೆ.</p>.<p>ಈ ಭಾರಿ ರೈತರ ಪ್ರತಿಭಟನೆಯಿಂದ 15 ದಿನಗಳ ಕಾಲ ಕಾರ್ಖಾನೆಗಳು ಪ್ರಾರಂಭವಾಗಲು ವಿಳಂಬವಾಯಿತು, ವಿಳಂಬದ ಕಾರಣದಿಂದ ರೈತರು ಕಬ್ಬು ಕಡಿಸಲು ಪರದಾಡಬೇಕಾಗಿದೆ, ಕಬ್ಬು ಕಟಾವು ಮಾಡುವವರು ಸಿಗದ ಕಾರಣ ಸಕಾಲಕ್ಕೆ ಸಾಗಣೆಯಾಗದ ಕಾರಣ ಆಳೆತ್ತರಕ್ಕೆ ಬೆಳೆದ ಕಬ್ಬಿಗೆ ಗರಿ ಮೂಡುತ್ತಿದೆ.</p>.<p>ಕಬ್ಬಿಗೆ ಗರಿ ಮೂಡಿದರೆ ಎಕರೆಗೆ 50-60 ಟನ್ ತೂಕ ಬರುವ ರೈತನಿಗೆ 35-40 ಟನ್ ಮಾತ್ರ ತೂಟ್ ಬರುತ್ತದೆ, ಕೆಳಗಿನಿಂದ ಮೇಲಿನವರೆಗೆ ಕಬ್ಬಿನಲ್ಲಿ ಬೆಂಡು ಒಡೆದು ಕಬ್ಬಿನಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ತೂಕದಲ್ಲಿ ಭಾರಿ ವ್ಯತ್ಯಾಸ ಕಂಡು ಬರುತ್ತದೆ.</p>.<p>ರೈತರು ಬೇಗನೆ ಕಬ್ಬು ಕಾರ್ಖಾನೆಗೆ ಸಾಗಿಸಬೇಕೆಂದು ಕಬ್ಬು ಕಟಾವು ಮಾಡುವ ಗ್ಯಾಂಗಗಳಿಗೆ ಅಧಿಕ ಲಗಾನಿ ನೀಡಿ ಕಬ್ಬು ಕಟಾವು ಮಾಡಿಸುತ್ತಿದ್ದಾರೆ, ಗ್ಯಾಂಗನವರು ಒಂದು ಟ್ರಪ ಕಬ್ಬಿಗೆ 3-4ಸಾವಿರ ಹಣ ಕೇಳುತ್ತಿದ್ದಾರೆ, ಇದು ಕಬ್ಬು ಬೆಳೆಗಾರರಿಗೆ ಆರ್ಥಿಕವಾಗಿ ಹೊರೆ ಹೆಚ್ಚಾಗುತ್ತಿದೆ.</p>.<p>ಲೋಡ್ ಮಾಡಿದ ಕಬ್ಬಿನ ಟ್ರ್ಯಾಕ್ಟರ್ ಜಮೀನಿನಲ್ಲಿ ಸಿಕ್ಕರೆ ಅದನ್ನು ಹೊರತೆಗೆಯಲು ಜೆಸಿಬಿ ತರಬೇಕು ಅದಕ್ಕೆ ಒಂದು ಸಾವಿರ ನೀಡಬೇಕು, ಕಬ್ಬಿಗೆ ಗೊಣ್ಣೆ ಹುಳು ಬಾಧೆ ಸೇರಿದಂತೆ ರೈತರಿಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ.</p>.<p>’ಈ ವರ್ಷ ಕಬ್ಬು ಹೆಚ್ಚಿನ ಗರಿ ತೆಗೆದಿದೆ ಗರಿ ತೆಗೆಯಲು ಮುಖ್ಯ ಕಾರಣ ಬಿಸಿಲಿನ ಕೊರತೆ, ಹೆಚ್ಚು ಬಿಸಿಲು ಉಪಯೋಗ ಮಾಡುವ ಬೆಳೆ ಕಬ್ಬು, ಈ ವರ್ಷ ಮಳೆ ಹೆಚ್ಚಾಗಿರುವದರಿಂದ ಬಿಸಿಲು ಕಡಿಮೆ ಆಗಿರುವದರಿಂದ ಕಬ್ಬು ಗರಿ ತೆಗೆದಿದೆ, ಗರಿ ತೆಗೆದ ತಕ್ಷಣ ಕಬ್ಬು ಕಟಾವು ಮಾಡಿದರೆ ಬಹಳ ವ್ಯತ್ಯಾಸ ಆಗುವದಿಲ್ಲ, ದಿನಗಳು ಕಳೆದಂತೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ’ ಎನ್ನುತ್ತಾರೆ ಕೃಷಿ ತಜ್ಞ ಬಸವರಾಜ ಗಿರಗಾಂವಿ</p>.<p>ಕೆಲ ಕಬ್ಬಿನ ತಳಿಗಳು ಗರಿ ತೆಗೆಯುತ್ತವೆ. ಗರಿ ತೆಗೆಯುವ ಕಬ್ಬಿನ ತಳಿಗಳು ಹಳೆಯ ತಳಿಗಳು, ಇತ್ತೀಚೆಗೆ ಗರಿ ತೆಗೆಯದಂತಹ ಹಲವಾರು ತಳಿಗಳನ್ನು ಸಂಶೋದನೆ ಮಾಡಲಾಗಿದೆ ಅವುಗಳನ್ನು ರೈತರು ಬಳಸಬೇಕು</p>.<p>ಸಿದ್ದಪ್ಪ ಪಟ್ಟಿಹಳ್ಳ, ಸಹಾಯಕ ಕೃಷಿ ನಿರ್ದೇಶಕ, ಜಮಖಂಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ರೈತರು ಬೆಳೆದ ಕಬ್ಬು ಸಕಾಲದಲ್ಲಿ ಕಾರ್ಖಾನೆಗಳಿಗೆ ಕಳಿಸಲು ವಿಳಂಬವಾಗುತ್ತಿರುವ ಕಾರಣ ಕಬ್ಬು ಗರಿ ತೆಗೆಯುತ್ತಿದ್ದು ಇದರಿಂದ ಇಳುವರಿ ಕುಂಠಿತವಾಗುತ್ತಿದ್ದು ರೈತರು ನಷ್ಟದ ಭೀತಿಯಲ್ಲಿದ್ದಾರೆ.</p>.<p>ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಾ ನದಿ ಎಡ ಮತ್ತು ಬಲ ಹಾಗೂ ಸಾವಳಗಿ ಭಾಗದಲ್ಲಿ ಹೆಚ್ಚಿನ ನೀರು ಇರುವದರಿಂದ ರೈತರು ಕಬ್ಬು ಬೆಳೆಯುತ್ತಾರೆ. ಅದರ ಪೈಕಿ ಶೇ.60-70 ರಷ್ಟು ಕಬ್ಬು ಬೆಳೆಯುತ್ತಾರೆ, ಮೊದಲು 11-12 ತಿಂಗಳಿಗೆ ಗರಿ ತೆಗೆಯುತ್ತಿತ್ತು, ಆದರೆ ಇತ್ತೀಚೆಗೆ ರಸಾಯನಿಕ ಅಧಿಕ ಬಳಕೆ ಹಾಗೂ ವಾತಾವರಣದ ಪರಿಣಾಮವಾಗಿ 8-9 ತಿಂಗಳಲ್ಲಿಯೇ ಗರಿ ತೆಗೆಯುತ್ತಿದೆ.</p>.<p>ಕಬ್ಬು ಗರಿ ತೆಗೆಯಲು ಪ್ರಾರಂಭವಾದ ನಂತರ ಎಲೆ ಬೀಡುವದನ್ನು ನಿಲ್ಲಿಸುತ್ತದೆ, ಎಲೆ ಬೀಡುವದನ್ನು ನೀಲಿಸಿದರೆ ಕಬ್ಬಿಗೆ ಪೂರೈಕೆಯಾಗುವ ಆಹಾರ ನಿಂತು ಹೋಗುತ್ತದೆ, ಆಹಾರ ನಿಂತ ತಕ್ಷಣ ಕಬ್ಬಿನಲ್ಲಿ ಬೆಂಡು ಒಡೆದು ಇಳುವರಿ ಕಡಿಮೆಯಾಗುತ್ತದೆ.</p>.<p>ಈ ಭಾರಿ ರೈತರ ಪ್ರತಿಭಟನೆಯಿಂದ 15 ದಿನಗಳ ಕಾಲ ಕಾರ್ಖಾನೆಗಳು ಪ್ರಾರಂಭವಾಗಲು ವಿಳಂಬವಾಯಿತು, ವಿಳಂಬದ ಕಾರಣದಿಂದ ರೈತರು ಕಬ್ಬು ಕಡಿಸಲು ಪರದಾಡಬೇಕಾಗಿದೆ, ಕಬ್ಬು ಕಟಾವು ಮಾಡುವವರು ಸಿಗದ ಕಾರಣ ಸಕಾಲಕ್ಕೆ ಸಾಗಣೆಯಾಗದ ಕಾರಣ ಆಳೆತ್ತರಕ್ಕೆ ಬೆಳೆದ ಕಬ್ಬಿಗೆ ಗರಿ ಮೂಡುತ್ತಿದೆ.</p>.<p>ಕಬ್ಬಿಗೆ ಗರಿ ಮೂಡಿದರೆ ಎಕರೆಗೆ 50-60 ಟನ್ ತೂಕ ಬರುವ ರೈತನಿಗೆ 35-40 ಟನ್ ಮಾತ್ರ ತೂಟ್ ಬರುತ್ತದೆ, ಕೆಳಗಿನಿಂದ ಮೇಲಿನವರೆಗೆ ಕಬ್ಬಿನಲ್ಲಿ ಬೆಂಡು ಒಡೆದು ಕಬ್ಬಿನಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ತೂಕದಲ್ಲಿ ಭಾರಿ ವ್ಯತ್ಯಾಸ ಕಂಡು ಬರುತ್ತದೆ.</p>.<p>ರೈತರು ಬೇಗನೆ ಕಬ್ಬು ಕಾರ್ಖಾನೆಗೆ ಸಾಗಿಸಬೇಕೆಂದು ಕಬ್ಬು ಕಟಾವು ಮಾಡುವ ಗ್ಯಾಂಗಗಳಿಗೆ ಅಧಿಕ ಲಗಾನಿ ನೀಡಿ ಕಬ್ಬು ಕಟಾವು ಮಾಡಿಸುತ್ತಿದ್ದಾರೆ, ಗ್ಯಾಂಗನವರು ಒಂದು ಟ್ರಪ ಕಬ್ಬಿಗೆ 3-4ಸಾವಿರ ಹಣ ಕೇಳುತ್ತಿದ್ದಾರೆ, ಇದು ಕಬ್ಬು ಬೆಳೆಗಾರರಿಗೆ ಆರ್ಥಿಕವಾಗಿ ಹೊರೆ ಹೆಚ್ಚಾಗುತ್ತಿದೆ.</p>.<p>ಲೋಡ್ ಮಾಡಿದ ಕಬ್ಬಿನ ಟ್ರ್ಯಾಕ್ಟರ್ ಜಮೀನಿನಲ್ಲಿ ಸಿಕ್ಕರೆ ಅದನ್ನು ಹೊರತೆಗೆಯಲು ಜೆಸಿಬಿ ತರಬೇಕು ಅದಕ್ಕೆ ಒಂದು ಸಾವಿರ ನೀಡಬೇಕು, ಕಬ್ಬಿಗೆ ಗೊಣ್ಣೆ ಹುಳು ಬಾಧೆ ಸೇರಿದಂತೆ ರೈತರಿಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ.</p>.<p>’ಈ ವರ್ಷ ಕಬ್ಬು ಹೆಚ್ಚಿನ ಗರಿ ತೆಗೆದಿದೆ ಗರಿ ತೆಗೆಯಲು ಮುಖ್ಯ ಕಾರಣ ಬಿಸಿಲಿನ ಕೊರತೆ, ಹೆಚ್ಚು ಬಿಸಿಲು ಉಪಯೋಗ ಮಾಡುವ ಬೆಳೆ ಕಬ್ಬು, ಈ ವರ್ಷ ಮಳೆ ಹೆಚ್ಚಾಗಿರುವದರಿಂದ ಬಿಸಿಲು ಕಡಿಮೆ ಆಗಿರುವದರಿಂದ ಕಬ್ಬು ಗರಿ ತೆಗೆದಿದೆ, ಗರಿ ತೆಗೆದ ತಕ್ಷಣ ಕಬ್ಬು ಕಟಾವು ಮಾಡಿದರೆ ಬಹಳ ವ್ಯತ್ಯಾಸ ಆಗುವದಿಲ್ಲ, ದಿನಗಳು ಕಳೆದಂತೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ’ ಎನ್ನುತ್ತಾರೆ ಕೃಷಿ ತಜ್ಞ ಬಸವರಾಜ ಗಿರಗಾಂವಿ</p>.<p>ಕೆಲ ಕಬ್ಬಿನ ತಳಿಗಳು ಗರಿ ತೆಗೆಯುತ್ತವೆ. ಗರಿ ತೆಗೆಯುವ ಕಬ್ಬಿನ ತಳಿಗಳು ಹಳೆಯ ತಳಿಗಳು, ಇತ್ತೀಚೆಗೆ ಗರಿ ತೆಗೆಯದಂತಹ ಹಲವಾರು ತಳಿಗಳನ್ನು ಸಂಶೋದನೆ ಮಾಡಲಾಗಿದೆ ಅವುಗಳನ್ನು ರೈತರು ಬಳಸಬೇಕು</p>.<p>ಸಿದ್ದಪ್ಪ ಪಟ್ಟಿಹಳ್ಳ, ಸಹಾಯಕ ಕೃಷಿ ನಿರ್ದೇಶಕ, ಜಮಖಂಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>