<p><strong>ಜಮಖಂಡಿ</strong>: ಹಳೆಯ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಇಳುವರಿ ಆಧರಿಸಿ ಈ ವರ್ಷ ರಾಜ್ಯ ಸರ್ಕಾರ ನಿಗದಿಪಡಿಸಿರುವ ಬೆಲೆಗೆ ನಮ್ಮ ಒಪ್ಪಿಗೆಯಿಲ್ಲ. ಪ್ರತಿ ಟನ್ಗೆ ₹3,500 ನೀಡಬೇಕು ಹಾಗೂ 2024-25ನೇ ಸಾಲಿನ ಎರಡನೇ ಕಂತಿನ ಹಣ ಘೋಷಿಸಬೇಕು ಎಂದು ಆಗ್ರಹಿಸಿ ರೈತರು ಬುಧವಾರ ತಾಲ್ಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಜಮಖಂಡಿ ಮುಧೋಳ ರಾಜ್ಯ ಹೆದ್ದಾರಿ ಮೇಲೆ ಮುಳ್ಳಿನ ಕಂಟಿಗಳನ್ನು ಹಾಕಿ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡಿದರು.</p>.<p>ಮುಖಂಡ ಬಾಬು ಹಸರಡ್ಡಿ ಮಾತನಾಡಿ ರಿಕವರಿಯಲ್ಲಿ ಕಾರ್ಖಾನೆಗಳು ಮೋಸ ಮಾಡುತ್ತವೆ. ತೂಕದಲ್ಲಿ ಮೋಸ ಮಾಡುತ್ತಾರೆ. ಆದ್ದರಿಂದ ಕಬ್ಬಿನ ಇಳುವರಿ ಆಧಾರಿತ ದರ ಬೇಡ ಹಾಗೂ 2024-25ನೇ ಸಾಲಿನ ಹೆಚ್ಚುವರಿಯಾಗಿ ₹500 ಹಣ ಕೊಡಲು ಆಗ್ರಹಿಸಿದರು.</p>.<p>ಮುಖಂಡ ಕಲ್ಲಪ್ಪ ಬಿರಾದಾರ ಮಾತನಾಡಿಸಾವಿರಾರು ಕೋಟಿ ವಹಿವಾಟವಾಗುವ ಕಬ್ಬಿನ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು, ಸಕ್ಕರೆ ಕಾರ್ಖಾನೆಗೆ ಅಬಕಾರಿ ಇಲಾಖೆ ಅಧಿಕಾರಿಗಳನ್ನು ನೇಮಕ ಮಾಡಿದಂತೆ ತೂಕ ಚೆಕ್ ಮಾಡಲು ಹಾಗೂ ಇಳುವರಿ ತೆಗೆಯಲು ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.</p>.<p>ತಾಲ್ಲೂಕಿನ ಹುನ್ನೂರು ಗ್ರಾಮದಲ್ಲಿ ಹಾಗೂ ಹುಲ್ಯಾಳ ಗ್ರಾಮದಲ್ಲಿ ರೈತರು ಕೆಲ ಹೊತ್ತು ರಸ್ತೆ ತಡೆ ಮಾಡಿ ಕಬ್ಬಿನ ಬಿಲ್ ಗಾಗಿ ಒತ್ತಾಯಿಸಿದರು</p>.<p>ರೈತ ಮುಖಂಡರಾದ ರಾಜು ಬುರ್ಜಿ, ಹಣಮಂತ ಮಗದುಮ, ಬಸವರಾಜ ನ್ಯಾಮಗೌಡ,<br /> ರಾಜು ಕುಲಕಟ್ಟಿ, ಭೀಮಶಿ ಪಾಟೀಲ, ಗುರಪಾದಪ್ಪ ಮೇಲಿನಮನಿ, ಕರೆಪ್ಪ ಭೂಮಾರ ರೈತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ</strong>: ಹಳೆಯ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಇಳುವರಿ ಆಧರಿಸಿ ಈ ವರ್ಷ ರಾಜ್ಯ ಸರ್ಕಾರ ನಿಗದಿಪಡಿಸಿರುವ ಬೆಲೆಗೆ ನಮ್ಮ ಒಪ್ಪಿಗೆಯಿಲ್ಲ. ಪ್ರತಿ ಟನ್ಗೆ ₹3,500 ನೀಡಬೇಕು ಹಾಗೂ 2024-25ನೇ ಸಾಲಿನ ಎರಡನೇ ಕಂತಿನ ಹಣ ಘೋಷಿಸಬೇಕು ಎಂದು ಆಗ್ರಹಿಸಿ ರೈತರು ಬುಧವಾರ ತಾಲ್ಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಜಮಖಂಡಿ ಮುಧೋಳ ರಾಜ್ಯ ಹೆದ್ದಾರಿ ಮೇಲೆ ಮುಳ್ಳಿನ ಕಂಟಿಗಳನ್ನು ಹಾಕಿ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡಿದರು.</p>.<p>ಮುಖಂಡ ಬಾಬು ಹಸರಡ್ಡಿ ಮಾತನಾಡಿ ರಿಕವರಿಯಲ್ಲಿ ಕಾರ್ಖಾನೆಗಳು ಮೋಸ ಮಾಡುತ್ತವೆ. ತೂಕದಲ್ಲಿ ಮೋಸ ಮಾಡುತ್ತಾರೆ. ಆದ್ದರಿಂದ ಕಬ್ಬಿನ ಇಳುವರಿ ಆಧಾರಿತ ದರ ಬೇಡ ಹಾಗೂ 2024-25ನೇ ಸಾಲಿನ ಹೆಚ್ಚುವರಿಯಾಗಿ ₹500 ಹಣ ಕೊಡಲು ಆಗ್ರಹಿಸಿದರು.</p>.<p>ಮುಖಂಡ ಕಲ್ಲಪ್ಪ ಬಿರಾದಾರ ಮಾತನಾಡಿಸಾವಿರಾರು ಕೋಟಿ ವಹಿವಾಟವಾಗುವ ಕಬ್ಬಿನ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು, ಸಕ್ಕರೆ ಕಾರ್ಖಾನೆಗೆ ಅಬಕಾರಿ ಇಲಾಖೆ ಅಧಿಕಾರಿಗಳನ್ನು ನೇಮಕ ಮಾಡಿದಂತೆ ತೂಕ ಚೆಕ್ ಮಾಡಲು ಹಾಗೂ ಇಳುವರಿ ತೆಗೆಯಲು ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.</p>.<p>ತಾಲ್ಲೂಕಿನ ಹುನ್ನೂರು ಗ್ರಾಮದಲ್ಲಿ ಹಾಗೂ ಹುಲ್ಯಾಳ ಗ್ರಾಮದಲ್ಲಿ ರೈತರು ಕೆಲ ಹೊತ್ತು ರಸ್ತೆ ತಡೆ ಮಾಡಿ ಕಬ್ಬಿನ ಬಿಲ್ ಗಾಗಿ ಒತ್ತಾಯಿಸಿದರು</p>.<p>ರೈತ ಮುಖಂಡರಾದ ರಾಜು ಬುರ್ಜಿ, ಹಣಮಂತ ಮಗದುಮ, ಬಸವರಾಜ ನ್ಯಾಮಗೌಡ,<br /> ರಾಜು ಕುಲಕಟ್ಟಿ, ಭೀಮಶಿ ಪಾಟೀಲ, ಗುರಪಾದಪ್ಪ ಮೇಲಿನಮನಿ, ಕರೆಪ್ಪ ಭೂಮಾರ ರೈತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>