<p><strong>ಬೆಂಗಳೂರು</strong>: ಝಗಮಗ ಬೆಳಗುವ ವಿದ್ಯುದೀಪಗಳ ಬೆಳಕಿನಲ್ಲಿ ಟೆನಿಸ್ ಕ್ರೀಡೆಯ ‘ನಾರಿಶಕ್ತಿ’ ವಿಜೃಂಭಿಸಿತು. 60ರ ದಶಕದಲ್ಲಿ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ ಟೆನಿಸ್ ಅಂಗಳಕ್ಕಿಳಿದು ಇತಿಹಾಸ ರಚಿಸಿದ ವನಿತೆಯರು ಅಲ್ಲಿದ್ದರು. ಅವರ ಹಿಂದೆಯೇ ಈಗಿನ ಆಟಗಾರ್ತಿಯರ ದಂಡು ನಿಂತಿತ್ತು. </p><p>ಬಿಲ್ಲೀ ಜೀನ್ ಕಿಂಗ್ ಕಪ್ ಟೆನಿಸ್ ಟೂರ್ನಿಯ ಆತಿಥ್ಯ ವಹಿಸುತ್ತಿರುವ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯು (ಕೆಎಸ್ಎಲ್ಟಿಎ) ಬುಧವಾರ ಆಯೋಜಿಸಿದ್ದ ‘ತಂಡಗಳ ಸ್ವಾಗತ ಔತಣಕೂಟ’ದಲ್ಲಿ ಕಂಡ ದೃಶ್ಯ ಇದು. </p><p>60ರ ದಶಕದಲ್ಲಿಯೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವನಿತೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ವ್ಹೀಲ್ಚೇರ್ ಟೆನಿಸ್ ಆಟಗಾರ್ತಿ ಶಿಲ್ಪಾ ಪುಟ್ಟರಾಜು ಅವರನ್ನೂ ಗೌರವಿಸಲಾಯಿತು. </p><p>ಇದೇ ಸಂದರ್ಭದಲ್ಲಿ ಬಿಲ್ಲೀ ಜೀನ್ ಕಿಂಗ್ ಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರ್ತಿಯರು ತಮ್ಮ ಹಸ್ತಾಕ್ಷರ ಇರುವ ಜೆರ್ಸಿಯನ್ನು ಕೆಎಸ್ಎಲ್ಟಿಎಗೆ ಕಾಣಿಕೆ ನೀಡಿದರು. ಸ್ಲೊವೇನಿಯಾ ಮತ್ತು ನೆದರ್ಲೆಂಡ್ಸ್ ಆಟಗಾರ್ತಿಯರು ಸೀರೆಯುಟ್ಟು ಬಂದಿದ್ದರು. ಭಾರತೀಯ ಖಾದ್ಯಗಳನ್ನು ಸವಿಯುತ್ತ ಸಂಭ್ರಮಿಸಿದರು. </p><p>ಕಾರ್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ. ಗೋವಿಂದರಾಜ್, ಕೆಎಸ್ಎಲ್ಟಿಎ ಪದಾಧಿಕಾರಿಗಳಾದ ಎಂ. ಲಕ್ಷ್ಮೀನಾರಾಯಣ, ಎಂ.ಬಿ. ದ್ಯಾಬೇರಿ, ಮಹೇಶ್ವರ್ ರಾವ್, ಸುನೀಲ್ ಯಜಮಾನ್ ಅವರು ಹಾಜರಿದ್ದರು. </p><p>ಟೂರ್ನಿಯು ಇದೇ 14 ರಿಂದ 16ರವರೆಗೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಝಗಮಗ ಬೆಳಗುವ ವಿದ್ಯುದೀಪಗಳ ಬೆಳಕಿನಲ್ಲಿ ಟೆನಿಸ್ ಕ್ರೀಡೆಯ ‘ನಾರಿಶಕ್ತಿ’ ವಿಜೃಂಭಿಸಿತು. 60ರ ದಶಕದಲ್ಲಿ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ ಟೆನಿಸ್ ಅಂಗಳಕ್ಕಿಳಿದು ಇತಿಹಾಸ ರಚಿಸಿದ ವನಿತೆಯರು ಅಲ್ಲಿದ್ದರು. ಅವರ ಹಿಂದೆಯೇ ಈಗಿನ ಆಟಗಾರ್ತಿಯರ ದಂಡು ನಿಂತಿತ್ತು. </p><p>ಬಿಲ್ಲೀ ಜೀನ್ ಕಿಂಗ್ ಕಪ್ ಟೆನಿಸ್ ಟೂರ್ನಿಯ ಆತಿಥ್ಯ ವಹಿಸುತ್ತಿರುವ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯು (ಕೆಎಸ್ಎಲ್ಟಿಎ) ಬುಧವಾರ ಆಯೋಜಿಸಿದ್ದ ‘ತಂಡಗಳ ಸ್ವಾಗತ ಔತಣಕೂಟ’ದಲ್ಲಿ ಕಂಡ ದೃಶ್ಯ ಇದು. </p><p>60ರ ದಶಕದಲ್ಲಿಯೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವನಿತೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ವ್ಹೀಲ್ಚೇರ್ ಟೆನಿಸ್ ಆಟಗಾರ್ತಿ ಶಿಲ್ಪಾ ಪುಟ್ಟರಾಜು ಅವರನ್ನೂ ಗೌರವಿಸಲಾಯಿತು. </p><p>ಇದೇ ಸಂದರ್ಭದಲ್ಲಿ ಬಿಲ್ಲೀ ಜೀನ್ ಕಿಂಗ್ ಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರ್ತಿಯರು ತಮ್ಮ ಹಸ್ತಾಕ್ಷರ ಇರುವ ಜೆರ್ಸಿಯನ್ನು ಕೆಎಸ್ಎಲ್ಟಿಎಗೆ ಕಾಣಿಕೆ ನೀಡಿದರು. ಸ್ಲೊವೇನಿಯಾ ಮತ್ತು ನೆದರ್ಲೆಂಡ್ಸ್ ಆಟಗಾರ್ತಿಯರು ಸೀರೆಯುಟ್ಟು ಬಂದಿದ್ದರು. ಭಾರತೀಯ ಖಾದ್ಯಗಳನ್ನು ಸವಿಯುತ್ತ ಸಂಭ್ರಮಿಸಿದರು. </p><p>ಕಾರ್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ. ಗೋವಿಂದರಾಜ್, ಕೆಎಸ್ಎಲ್ಟಿಎ ಪದಾಧಿಕಾರಿಗಳಾದ ಎಂ. ಲಕ್ಷ್ಮೀನಾರಾಯಣ, ಎಂ.ಬಿ. ದ್ಯಾಬೇರಿ, ಮಹೇಶ್ವರ್ ರಾವ್, ಸುನೀಲ್ ಯಜಮಾನ್ ಅವರು ಹಾಜರಿದ್ದರು. </p><p>ಟೂರ್ನಿಯು ಇದೇ 14 ರಿಂದ 16ರವರೆಗೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>