<p><strong>ಬಾಗಲಕೋಟೆ:</strong> ಹುನಗುಂದ ತಾಲ್ಲೂಕಿನ ಧನ್ನೂರು ಬಳಿ ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವ ಹುಡುಕಲು ಹೋಗಿದ್ದ ಮೂವರು ಗುರುವಾರ ಬೋಟ್ ಮುಗುಚಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.</p>.<p>ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಹರನಾಳ ಗ್ರಾಮದ ಶರಣಪ್ಪ, ಯಮನಪ್ಪ ಹಾಗೂ ಬೋಟ್ ಚಲಾಯಿಸುತ್ತಿದ್ದ ಕೂಡಲಸಂಗಮ ಗ್ರಾಮದ ಪರಸಪ್ಪ ಮೃತಪಟ್ಟವರು.</p>.<p>ಎರಡು ದಿನಗಳ ಹಿಂದೆ ಹರನಾಳದ ವೃದ್ಧ ಶಿವಪ್ಪ ಎಂಬುವವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವ ಹುಡುಕಲು ಮೂವರು ಬೋಟ್ ನಲ್ಲಿ ತೆರಳಿದ್ದು, ನದಿಯಲ್ಲಿ ಕಳೆ ಬಳ್ಳಿಗಳ ನಡುವೆ ಸಿಲುಕಿದ ಬೋಟ್ ಮುಗುಚಿದ್ದು, ಈ ವೇಳೆ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.</p>.<p>ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳ ಹುಡುಕಾಟ ನಡೆಸಿದ್ದು, ನದಿ ದಂಡೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಹುನಗುಂದ ತಾಲ್ಲೂಕಿನ ಧನ್ನೂರು ಬಳಿ ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಶವ ಹುಡುಕಲು ಹೋಗಿದ್ದ ಮೂವರು ಗುರುವಾರ ಬೋಟ್ ಮುಗುಚಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.</p>.<p>ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಹರನಾಳ ಗ್ರಾಮದ ಶರಣಪ್ಪ, ಯಮನಪ್ಪ ಹಾಗೂ ಬೋಟ್ ಚಲಾಯಿಸುತ್ತಿದ್ದ ಕೂಡಲಸಂಗಮ ಗ್ರಾಮದ ಪರಸಪ್ಪ ಮೃತಪಟ್ಟವರು.</p>.<p>ಎರಡು ದಿನಗಳ ಹಿಂದೆ ಹರನಾಳದ ವೃದ್ಧ ಶಿವಪ್ಪ ಎಂಬುವವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವ ಹುಡುಕಲು ಮೂವರು ಬೋಟ್ ನಲ್ಲಿ ತೆರಳಿದ್ದು, ನದಿಯಲ್ಲಿ ಕಳೆ ಬಳ್ಳಿಗಳ ನಡುವೆ ಸಿಲುಕಿದ ಬೋಟ್ ಮುಗುಚಿದ್ದು, ಈ ವೇಳೆ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.</p>.<p>ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳ ಹುಡುಕಾಟ ನಡೆಸಿದ್ದು, ನದಿ ದಂಡೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>