ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಗೇರಿ: ಗರ್ಭಿಣಿಯರಿಗೆ ಬಾಗಿನ

Last Updated 4 ಸೆಪ್ಟೆಂಬರ್ 2022, 22:56 IST
ಅಕ್ಷರ ಗಾತ್ರ

ಕೆಂಗೇರಿ: ‘ತಾಯ್ತನ ಮಹಿಳೆಯರ ಬಾಳಿನಲ್ಲಿ ಅತ್ಯಂತ ಸಂತೋಷ ಹಾಗೂ ಮಹತ್ವಪೂರ್ಣವಾದ ಘಟ್ಟ. ಆರೋಗ್ಯ ಪೂರ್ಣ ಮಗುವಿನ ಜನನಕ್ಕೆ ಈ ಅವಧಿಯು ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ವಿವಿಧ ಪಂಚಾಯಿತಿಗಳ ವತಿಯಿಂದ ಆಯೋಜಿಸಿದ್ದ ‘ಸೀಮಂತಸಂಭ್ರಮ’ದಲ್ಲಿ ಅವರು ಮಾತನಾಡಿ
ದರು. ‘ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಸೀಮಂತ ಸಂಭ್ರಮದಂತಹ ಕಾರ್ಯಕ್ರಮಗಳನ್ನು ಕ್ಷೇತ್ರದಾದ್ಯಂತ ಹಮ್ಮಿಕೊಳ್ಳಲಾಗಿದೆ’ ಎಂದರು.

ಬಿಜೆಪಿ ಮುಖಂಡ ಚಿಕ್ಕರಾಜು ಮಾತನಾಡಿ, ‘ಪ್ರಸವಪೂರ್ವ ಅವಧಿಯಲ್ಲಿ ಗರ್ಭಿಣಿಯರಿಗೆ ಅಗತ್ಯವಾದ ಪೋಷಕಾಂಶಯುಕ್ತ ಆಹಾರವನ್ನು ಪಂಚಾಯಿತಿ ವತಿಯಿಂದ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

ಸುಮಾರು 900ಕ್ಕೂ ಹೆಚ್ಚು ಗರ್ಭಿಣಿಯರಿಗೆ ಬಾಗಿನ ನೀಡಲಾಯಿತು.

ಮುಖಂಡರಾದ ಭೀಮನಕುಪ್ಪೆ ಮಹೇಶ್, ರಾಮೋಹಳ್ಳಿ ವೇಣುಗೋಪಾಲ್, ಶೋಭಾ ತಿಮ್ಮೇಗೌಡ, ಚೇತನ್, ವಿಜಯ್ ಕುಮಾರ್, ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT