<p><strong>ಸಿರುಗುಪ್ಪ:</strong> 'ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮುಚ್ಚುವ ಪರಿಸ್ಥಿತಿ ಬಂದಿದೆ. ಇದರಿಂದ ಕನ್ನಡ ಭಾಷೆ ನಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಶಿವಕುಮಾರ ಬಳಿಗಾರ ಆತಂಕ ವ್ಯಕ್ತಪಡಿಸಿದರು.</p> <p>ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದ ಸಂಗೀತ ವಿದ್ವಾಂಸ ಶ್ರೀದೊಡ್ಡಬಸವಾರ್ಯ ಗವಾಯಿಗಳ ವೇದಿಕೆಯಲ್ಲಿ ಶನಿವಾರ ನಡೆದ ಸಿರುಗುಪ್ಪ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕರ ಭಾಷಣದಲ್ಲಿ ವೇದಿಕೆ ಉದ್ದೇಶಿಸಿ ಮಾತನಾಡಿದರು.</p> <p>'ಭಾಷೆಯ ಬಗ್ಗೆ ಅರಿವಿರಬೇಕು. ಬಹುಭಾಷೆಗಳ ಪ್ರಭಾವದಿಂದಾಗಿ ಕನ್ನಡತನವನ್ನು ಕಳೆದುಕೊಳುತ್ತಿದ್ದೇವೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ಹೊರಬನ್ನಿ' ಎಂದು ಕಿವಿಮಾತು ಹೇಳಿದರು</p> <p>ಸರ್ಕಾರಿ ನೌಕರರೆಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸೇರಿಸಬೇಕು. ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಎಂಬಂತಾಗಬೇಕು. ಕನ್ನಡಿಗರು ಕನ್ನಡಕ್ಕೆ ನಾನೇನು ಮಾಡಿದೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಿ' ಎಂದು ತಿಳಿಸಿದರು.</p> <p>'ಸಮಕಾಲೀನ ಪ್ರಪಂಚದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಿಸಿ ಉಳಿಸಬೇಕಾದ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಆದ್ದರಿಂದ ವಿಜ್ಞಾನ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಕನ್ನಡ ಭಾಷಾಭಿವೃದ್ಧಿಗೆ ತಂತ್ರಜ್ಞಾನ ರೂಪಿಸಬೇಕು' ಎಂದು ಆಗ್ರಹಿಸಿದರು.</p> <p>'ಸಿರುಗುಪ್ಪ ಗಡಿನಾಡಾಗಿ, ಭತ್ತದ ಕಣಜವಾಗಿ, ಸಜ್ಜನರ ನೆಲೆನಾಡಾಗಿ ಹಾಗೂ ವರ ಸಿರಿ, ಜ್ಞಾನ ಸಿರಿ, ಭಕ್ತಿಸಿರಿ , ಕಲಾಸಿರಿ, ನುಡಿಸಿರಿಗಳ 'ಸಿರಿಯ ಕುಪ್ಪೆ' ಆಗಿದೆ' ಎಂದು ಬಣ್ಣಿಸಿದರು. </p> <p>ಸಿರುಗುಪ್ಪ ತಾಲ್ಲೂಕಿನ ಸಾಹಿತ್ಯಕ, ಕಲೆ ವಾಸ್ತುಶಿಲ್ಪ, ಸಂಗೀತ ಪನಾಟಕ, ಬಯಲಾಟ ಹಾಗೂ ಗಡಿನಾಡಿನ ಹೋರಾಟಗಾರರ ಕೊಡುಗೆಯನ್ನು ಸ್ಮರಿಸಿದರು. </p> <p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಧುಸೂಧನ್ ಕಾರಿಗನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಎಚ್ ವಿಶ್ವನಾಥ 'ಸಿರಿ ಸೌರಭ' ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ಅಖಂಡ ಬಳ್ಳಾರಿ ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿದರು. </p> <p>ತಾಲ್ಲೂಕು ಇ ಒ ಪವನ್ ಕುಮಾರ್, ವೃತ್ತ ನಿರೀಕ್ಷಕ ಹನುಮಂತಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್, ಬಸವಭೂಷಣ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ತಾಲ್ಲೂಕು ಆರೋಗ್ಯಾಧಿಕಾರಿ ದಮ್ಮೂರು ಬಸವರಾಜ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ಹುಚ್ಚೀರಪ್ಪ ಇದ್ದರು.</p>.<h2>ಕನ್ನಡಕ್ಕೆ 5ಸಾವಿರ ವರ್ಷಗಳ ಇತಿಹಾಸವಿದೆ : ನಾ ಸೋಮೇಶ್ವರ</h2>.<p>'ಕನ್ನಡ ಮತ್ತು ಕನ್ನಡಿಗರಿಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಸಿಂಧೂ ಸರಸ್ವತಿ ಸಂಸ್ಕೃತಿಯ ಕಟ್ಟಿದ ಮಹಾನುಭಾವರು ಕನ್ನಡಿಗರು' ಎಂದು ಚಂದನ ವಾಹಿನಿಯ ಖ್ಯಾತ ನಿರೂಪಕ ಡಾ.ನಾ.ಸೋಮೇಶ್ವರ ತಿಳಿಸಿದರು.</p><p>ಸಿಂಧೂ ಸರಸ್ವತಿ ಸಂಸ್ಕೃತಿಯ ಉತ್ಖನನದ ಸಂದರ್ಭದಲ್ಲಿ ದೊರೆತ ಚಿನ್ನಾಭರಣೆಗಲ್ಲಿ ಶೇ 11ರಷ್ಟು ಬೆಳ್ಳಿಯ ಅಂಶವಿತ್ತು. ಇದು ಕೋಲಾರದ ಹಟ್ಟಿ ಚಿನ್ನದ ಗಣಿಯಿಂದ ದೊರೆತ ಇತಿಹಾಸವಿದೆ' ಎಂದು ವಿಶ್ಲೇಷಿಸಿದರು. </p><p> ಮಹಾಭಾರತದ ರಾಜಸೂಯ ಯಾಗದ ಸಂದರ್ಭದಲ್ಲಿ ಭೀಷ್ಮ ದಕ್ಷಿಣದ ರಾಜ್ಯಗಳಾದ ಮಹಿಷಕ(ಮೈಸೂರು), ಕುಂತಳ (ಬಳ್ಳಾರಿ), ವನವಾಸಿಕ ( ಬನವಾಸಿ) ಹಾಗೂ ಕರ್ನಾಟಕ (ಉಡುಪಿ) ಗೆಲ್ಲಲು ಯುಧಿಷ್ಠಿರನಿಗೆ ತಿಳಿಸುತ್ತಾನೆ ಎಂದು ಕರ್ನಾಟಕದ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.</p><p>ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಪ್ರೇಮ ಉಕ್ಕಿಸಿದ 'ವಂದೇ ಮಾತರಂ' ಗೀತೆ ದೇಶವನ್ನು ದೇವಿಯನ್ನಾಗಿ ಮೂರ್ತಿಕರಿಸಿತು. ಇದರಿಂದ ಕುವೆಂಪು ನಾಡಗೀತೆ ರಚಿಸಿ 'ಜಯ ಭಾರತ ಜನನಿಯ ತನುಜಾತೆ' ಎಂದು ಕನ್ನಡ ಇತಿಹಾಸ ಪರಂಪರೆಯ ಸಮೃದ್ಧತೆಯನ್ನು ಕೊಂಡಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ:</strong> 'ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮುಚ್ಚುವ ಪರಿಸ್ಥಿತಿ ಬಂದಿದೆ. ಇದರಿಂದ ಕನ್ನಡ ಭಾಷೆ ನಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಶಿವಕುಮಾರ ಬಳಿಗಾರ ಆತಂಕ ವ್ಯಕ್ತಪಡಿಸಿದರು.</p> <p>ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದ ಸಂಗೀತ ವಿದ್ವಾಂಸ ಶ್ರೀದೊಡ್ಡಬಸವಾರ್ಯ ಗವಾಯಿಗಳ ವೇದಿಕೆಯಲ್ಲಿ ಶನಿವಾರ ನಡೆದ ಸಿರುಗುಪ್ಪ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕರ ಭಾಷಣದಲ್ಲಿ ವೇದಿಕೆ ಉದ್ದೇಶಿಸಿ ಮಾತನಾಡಿದರು.</p> <p>'ಭಾಷೆಯ ಬಗ್ಗೆ ಅರಿವಿರಬೇಕು. ಬಹುಭಾಷೆಗಳ ಪ್ರಭಾವದಿಂದಾಗಿ ಕನ್ನಡತನವನ್ನು ಕಳೆದುಕೊಳುತ್ತಿದ್ದೇವೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ಹೊರಬನ್ನಿ' ಎಂದು ಕಿವಿಮಾತು ಹೇಳಿದರು</p> <p>ಸರ್ಕಾರಿ ನೌಕರರೆಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸೇರಿಸಬೇಕು. ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಎಂಬಂತಾಗಬೇಕು. ಕನ್ನಡಿಗರು ಕನ್ನಡಕ್ಕೆ ನಾನೇನು ಮಾಡಿದೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಿ' ಎಂದು ತಿಳಿಸಿದರು.</p> <p>'ಸಮಕಾಲೀನ ಪ್ರಪಂಚದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಿಸಿ ಉಳಿಸಬೇಕಾದ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಆದ್ದರಿಂದ ವಿಜ್ಞಾನ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಕನ್ನಡ ಭಾಷಾಭಿವೃದ್ಧಿಗೆ ತಂತ್ರಜ್ಞಾನ ರೂಪಿಸಬೇಕು' ಎಂದು ಆಗ್ರಹಿಸಿದರು.</p> <p>'ಸಿರುಗುಪ್ಪ ಗಡಿನಾಡಾಗಿ, ಭತ್ತದ ಕಣಜವಾಗಿ, ಸಜ್ಜನರ ನೆಲೆನಾಡಾಗಿ ಹಾಗೂ ವರ ಸಿರಿ, ಜ್ಞಾನ ಸಿರಿ, ಭಕ್ತಿಸಿರಿ , ಕಲಾಸಿರಿ, ನುಡಿಸಿರಿಗಳ 'ಸಿರಿಯ ಕುಪ್ಪೆ' ಆಗಿದೆ' ಎಂದು ಬಣ್ಣಿಸಿದರು. </p> <p>ಸಿರುಗುಪ್ಪ ತಾಲ್ಲೂಕಿನ ಸಾಹಿತ್ಯಕ, ಕಲೆ ವಾಸ್ತುಶಿಲ್ಪ, ಸಂಗೀತ ಪನಾಟಕ, ಬಯಲಾಟ ಹಾಗೂ ಗಡಿನಾಡಿನ ಹೋರಾಟಗಾರರ ಕೊಡುಗೆಯನ್ನು ಸ್ಮರಿಸಿದರು. </p> <p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಧುಸೂಧನ್ ಕಾರಿಗನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಎಚ್ ವಿಶ್ವನಾಥ 'ಸಿರಿ ಸೌರಭ' ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು. ಅಖಂಡ ಬಳ್ಳಾರಿ ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿದರು. </p> <p>ತಾಲ್ಲೂಕು ಇ ಒ ಪವನ್ ಕುಮಾರ್, ವೃತ್ತ ನಿರೀಕ್ಷಕ ಹನುಮಂತಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್, ಬಸವಭೂಷಣ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ತಾಲ್ಲೂಕು ಆರೋಗ್ಯಾಧಿಕಾರಿ ದಮ್ಮೂರು ಬಸವರಾಜ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ಹುಚ್ಚೀರಪ್ಪ ಇದ್ದರು.</p>.<h2>ಕನ್ನಡಕ್ಕೆ 5ಸಾವಿರ ವರ್ಷಗಳ ಇತಿಹಾಸವಿದೆ : ನಾ ಸೋಮೇಶ್ವರ</h2>.<p>'ಕನ್ನಡ ಮತ್ತು ಕನ್ನಡಿಗರಿಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಸಿಂಧೂ ಸರಸ್ವತಿ ಸಂಸ್ಕೃತಿಯ ಕಟ್ಟಿದ ಮಹಾನುಭಾವರು ಕನ್ನಡಿಗರು' ಎಂದು ಚಂದನ ವಾಹಿನಿಯ ಖ್ಯಾತ ನಿರೂಪಕ ಡಾ.ನಾ.ಸೋಮೇಶ್ವರ ತಿಳಿಸಿದರು.</p><p>ಸಿಂಧೂ ಸರಸ್ವತಿ ಸಂಸ್ಕೃತಿಯ ಉತ್ಖನನದ ಸಂದರ್ಭದಲ್ಲಿ ದೊರೆತ ಚಿನ್ನಾಭರಣೆಗಲ್ಲಿ ಶೇ 11ರಷ್ಟು ಬೆಳ್ಳಿಯ ಅಂಶವಿತ್ತು. ಇದು ಕೋಲಾರದ ಹಟ್ಟಿ ಚಿನ್ನದ ಗಣಿಯಿಂದ ದೊರೆತ ಇತಿಹಾಸವಿದೆ' ಎಂದು ವಿಶ್ಲೇಷಿಸಿದರು. </p><p> ಮಹಾಭಾರತದ ರಾಜಸೂಯ ಯಾಗದ ಸಂದರ್ಭದಲ್ಲಿ ಭೀಷ್ಮ ದಕ್ಷಿಣದ ರಾಜ್ಯಗಳಾದ ಮಹಿಷಕ(ಮೈಸೂರು), ಕುಂತಳ (ಬಳ್ಳಾರಿ), ವನವಾಸಿಕ ( ಬನವಾಸಿ) ಹಾಗೂ ಕರ್ನಾಟಕ (ಉಡುಪಿ) ಗೆಲ್ಲಲು ಯುಧಿಷ್ಠಿರನಿಗೆ ತಿಳಿಸುತ್ತಾನೆ ಎಂದು ಕರ್ನಾಟಕದ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.</p><p>ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಪ್ರೇಮ ಉಕ್ಕಿಸಿದ 'ವಂದೇ ಮಾತರಂ' ಗೀತೆ ದೇಶವನ್ನು ದೇವಿಯನ್ನಾಗಿ ಮೂರ್ತಿಕರಿಸಿತು. ಇದರಿಂದ ಕುವೆಂಪು ನಾಡಗೀತೆ ರಚಿಸಿ 'ಜಯ ಭಾರತ ಜನನಿಯ ತನುಜಾತೆ' ಎಂದು ಕನ್ನಡ ಇತಿಹಾಸ ಪರಂಪರೆಯ ಸಮೃದ್ಧತೆಯನ್ನು ಕೊಂಡಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>