<p><strong>ಸಿರುಗುಪ್ಪ (ಬಳ್ಳಾರಿ): ‘</strong>ಎಐ ಬಳಸಲು ನಿನಗೆ ಗೊತ್ತೇ?, ಅದನ್ನು ಬಳಸಿದರೆ ನಿನ್ನ ಅಮ್ಮ ಬಯ್ಯುವಳೇ’ ಹೀಗೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಾಗೇವಾಡಿ ಗ್ರಾಮದ ಅರಿವು ಕೇಂದ್ರದಲ್ಲಿ ಕಂಪ್ಯೂಟರ್ ಬಳಸುತ್ತಿದ್ದ ಆರನೇ ತರಗತಿ ವಿದ್ಯಾರ್ಥಿ ತರುಣ್ ಎಂಬಾತನನ್ನು ಪ್ರಶ್ನಿಸಿದರು. </p>.<p>ಇದಕ್ಕೆ ಉತ್ತರಿಸಿದ ತರುಣ್, ‘ಹಾಗೇನಿಲ್ಲ. ನನ್ನ ಅಮ್ಮ ಬಯ್ಯಲಾರಳು’ ಎಂದು ಉತ್ತರಿಸಿದ. </p>.<p>ಬಾಗೇವಾಡಿ ಗ್ರಾಮದ ‘ಅರಿವು ಕೇಂದ್ರ’ವು ಮಾದರಿ ಗ್ರಂಥಾಲಯವಾಗಿದ್ದು, ಡಿಜಿಟಲ್ ಸಲಕರಣೆಗಳ ಬಳಕೆಗೂ ಅವಕಾಶವಿದೆ. ‘ಅರಿವು ಕೇಂದ್ರ’ಕ್ಕೆ ಸಚಿವೆ ನಿರ್ಮಲಾ ಗುರುವಾರ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿ ತರುಣ್ ಕಂಪ್ಯೂಟರ್ನಲ್ಲಿ ತಲ್ಲೀನನಾಗಿದ್ದ. ಕುತೂಹಲದಿಂದ ಆತನನ್ನು ಮಾತನಾಡಿಸಿದ ಅವರು ಅವನ ಉತ್ತರ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿನ ಮಕ್ಕಳ ಇಂಗ್ಲಿಷ್ ಸಂವಹನ ಕೌಶಲ ಕುರಿತು ಅಚ್ಚರಿ ವ್ಯಕ್ತಪಡಿದಿರು. </p>.<p>ಬಳಿಕ ಮಾತನಾಡಿದ ಅವರು, ‘ಎ.ಐ ತಂತ್ರಜ್ಞಾನ ಬಳಕೆ ಕುರಿತು ಪೋಷಕರು, ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರೆ ಅವರು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಗ್ರಂಥಾಲಯದಲ್ಲಿ ವಿಷಯವಾರು ಅಧ್ಯಯನ ಹಾಗೂ ವಿಷಯಗಳ ಕುರಿತು ಚರ್ಚೆಗೂ ಅವಕಾಶ ಕಲ್ಪಿಸಿಕೊಡಬೇಕು’ ಎಂದರು. </p>.<p>ಶಾಸಕ ಬಿ.ಎಂ.ನಾಗರಾಜ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ (ಬಳ್ಳಾರಿ): ‘</strong>ಎಐ ಬಳಸಲು ನಿನಗೆ ಗೊತ್ತೇ?, ಅದನ್ನು ಬಳಸಿದರೆ ನಿನ್ನ ಅಮ್ಮ ಬಯ್ಯುವಳೇ’ ಹೀಗೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಾಗೇವಾಡಿ ಗ್ರಾಮದ ಅರಿವು ಕೇಂದ್ರದಲ್ಲಿ ಕಂಪ್ಯೂಟರ್ ಬಳಸುತ್ತಿದ್ದ ಆರನೇ ತರಗತಿ ವಿದ್ಯಾರ್ಥಿ ತರುಣ್ ಎಂಬಾತನನ್ನು ಪ್ರಶ್ನಿಸಿದರು. </p>.<p>ಇದಕ್ಕೆ ಉತ್ತರಿಸಿದ ತರುಣ್, ‘ಹಾಗೇನಿಲ್ಲ. ನನ್ನ ಅಮ್ಮ ಬಯ್ಯಲಾರಳು’ ಎಂದು ಉತ್ತರಿಸಿದ. </p>.<p>ಬಾಗೇವಾಡಿ ಗ್ರಾಮದ ‘ಅರಿವು ಕೇಂದ್ರ’ವು ಮಾದರಿ ಗ್ರಂಥಾಲಯವಾಗಿದ್ದು, ಡಿಜಿಟಲ್ ಸಲಕರಣೆಗಳ ಬಳಕೆಗೂ ಅವಕಾಶವಿದೆ. ‘ಅರಿವು ಕೇಂದ್ರ’ಕ್ಕೆ ಸಚಿವೆ ನಿರ್ಮಲಾ ಗುರುವಾರ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿ ತರುಣ್ ಕಂಪ್ಯೂಟರ್ನಲ್ಲಿ ತಲ್ಲೀನನಾಗಿದ್ದ. ಕುತೂಹಲದಿಂದ ಆತನನ್ನು ಮಾತನಾಡಿಸಿದ ಅವರು ಅವನ ಉತ್ತರ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿನ ಮಕ್ಕಳ ಇಂಗ್ಲಿಷ್ ಸಂವಹನ ಕೌಶಲ ಕುರಿತು ಅಚ್ಚರಿ ವ್ಯಕ್ತಪಡಿದಿರು. </p>.<p>ಬಳಿಕ ಮಾತನಾಡಿದ ಅವರು, ‘ಎ.ಐ ತಂತ್ರಜ್ಞಾನ ಬಳಕೆ ಕುರಿತು ಪೋಷಕರು, ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರೆ ಅವರು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಗ್ರಂಥಾಲಯದಲ್ಲಿ ವಿಷಯವಾರು ಅಧ್ಯಯನ ಹಾಗೂ ವಿಷಯಗಳ ಕುರಿತು ಚರ್ಚೆಗೂ ಅವಕಾಶ ಕಲ್ಪಿಸಿಕೊಡಬೇಕು’ ಎಂದರು. </p>.<p>ಶಾಸಕ ಬಿ.ಎಂ.ನಾಗರಾಜ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>