<p><strong>ಬಳ್ಳಾರಿ:</strong> ಆಯುಧ ಪೂಜೆ ಹಾಗೂ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಮಂಗಳವಾರ ಜೋರಾಗಿತ್ತು.</p>.<p>ಆಯುಧ ಪೂಜೆ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿತ್ತಾದರೂ ಜನರು ಮುಗಿಬಿದ್ದು ಖರೀದಿ ಮಾಡಿದರು.</p>.<p>ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲೂ ಹೂವು, ಬೂದುಕುಂಬಳ, ಬಾಳೆ ಕಂಬಕ್ಕೆ ಮಾರಾಟ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.</p>.<p>ವಿಜಯದಶಮಿ ಹಬ್ಬದ ಮುನ್ನಾದಿನ ಆಯುಧ ಪೂಜೆ ಇದ್ದು, ಮನೆಗಳಲ್ಲಿನ ವೃತ್ತಿ ಸಂಬಂಧಿತ ಪರಿಕರಗಳು, ವಸ್ತುಗಳು, ವಾಹನಗಳು ಇತರ ಸಲಕರಣೆಗಳನ್ನು ಆಯುಧಗಳೆಂದೇ ಭಾವಿಸಿ, ಪೂಜೆ ಸಲ್ಲಿಸಲು ಜನರ ಸಿದ್ಧತೆಯಲ್ಲಿ ತೊಡಗಿದ್ದಾರೆ. </p>.<p>ಚಂಡು ಹೂ ಸಾಮಾನ್ಯವಾಗಿ ಕೆ.ಜಿಗೆ ₹60 ರಿಂದ 70 ಇರುತ್ತದೆ. ಹಬ್ಬದ ಹಿನ್ನೆಲೆ ₹100 ದಾಟಿತ್ತು. ಬಾಳೆ ದಿಂಡು ದೊಡ್ಡ ಗಾತ್ರದ್ದಾರೆ ಜೋಡಿ ₹100, ಚಿಕ್ಕದಾದರೆ ₹50 ಎಂದು ವ್ಯಾಪಾರಸ್ತರು ಹೇಳುತ್ತಿದ್ದರು. ಸೇಬು ₹120–150, ಮೂಸಂಬಿ ₹100–120, ಬಾಳೆಹಣ್ಣು ₹100–120 ಇತ್ತು. </p>.<h2>ಹೂವು, ಹಣ್ಣು ದುಬಾರಿ</h2>.<p>ಹೊಸಪೇಟೆ (ವಿಜಯನಗರ): ನಗರದ ಏಳು ಕೇರಿಗಳ ಅಮ್ಮಂದಿರ ಜತೆಗೆ ಇತರ ಕಡೆಗಳಲ್ಲಿ ಸಹ ದಸರಾ ಹಬ್ಬದ ರಂಗು ಜೋರಾಗಿಯೇ ಇದ್ದು, ಮಹಾನವಮಿ, ಆಯುಧ ಪೂಜೆಯ ಖರೀದಿ ಭರಾಟೆಗೆ ಮಳೆ ಅಡ್ಡಿ ಉಂಟುಮಾಡದ ಕಾರಣ ಮಾರುಕಟ್ಟೆಯಲ್ಲಿ ರಂಗೇರಿತ್ತು.</p>.<p>ಮಂಗಳವಾರ ಬೆಳಿಗ್ಗೆಯಿಂದಲೇ ಜನ ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳತ್ತ ತೆರಳಿ ತಮಗೆ ಅಗತ್ಯವಿರುವ ಹೂ, ಹಣ್ಣು, ಬಾಳೆಕಂಬ, ಕುಂಬಳಕಾಯಿ ಖರೀದಿಯಲ್ಲಿ ತೊಡಗಿದರು.</p>.<p>‘ಹಣ್ಣುಗಳ ದರ ಈ ಬಾರಿ ಅಷ್ಟೇನೂ ಹೆಚ್ಚಾಗಿಲ್ಲ, ಸೇಬು ಕಿಲೋಗೆ ₹130, ಮೂಸಂಬಿ ₹60ರಿಂದ 70, ಉತ್ತಮ ಗುಣಮಟ್ಟದ ದಾಳಿಂಬೆಗೆ ₹200 ಧಾರಣೆ ಇದೆ’ ಎಂದು ಹಣ್ಣಿನ ವ್ಯಾಪಾರಿ ಮಲ್ಲಪ್ಪ ಹೇಳಿದರು. </p>.<p><strong>ಹೂ ಧಾರಣೆ:</strong> ‘ಮಲ್ಲಿಗೆ ಕೆ.ಜಿ.ಗೆ ₹1000ಕ್ಕೆ ಮಾರಾಟವಾಗುತ್ತಿತ್ತು. ಮಲ್ಲಿಗೆ ಮಾರಿಗೆ ₹200, ಮಳಕ್ಕೆ ₹50, ಕನಕಾಂಬರ ಸಹ ₹200ಕ್ಕೆ ಮಾರಾಟವಾಯಿತು. ಕುಂಬಳಕಾಯಿ ಒಂದಕ್ಕೆ ₹120ರಿಂದ 250ರವರೆಗೆ ದರ ಇತ್ತು. ಬಾಳೆ ಕಂಬ ಚಿಕ್ಕದು ಜೋಡಿಗೆ ₹50, ದೊಡ್ಡದು ಜೋಡಿಗೆ ₹80ರಿಂದ 100ಕ್ಕೆ ಮಾರಾಟವಾಯಿತು.</p>.<p>ಕಳೆದ ಎರಡು, ಮೂರು ದಿನಗಳಿಂದ ಆಗಾಗ ಮಳೆ ಸುರಿಯುತ್ತಲೇ ಇತ್ತು, ಹೀಗಾಗಿ ವ್ಯಾಪಾರ ವಹಿವಾಟಿಗೆ ಸ್ವಲ್ಪ ಧಕ್ಕೆ ಉಂಟಾಗಿತ್ತು, ಮಹಾನವಮಿಗೆ ಸಿದ್ಧತೆಯಲ್ಲಿದ್ದ ಜನರಿಗೆ ಮಳೆ ಬಿಡುವು ಕೊಟ್ಟಿದ್ದರಿಂದ ಜನರಿಗೆ ಖುಷಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಆಯುಧ ಪೂಜೆ ಹಾಗೂ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಮಂಗಳವಾರ ಜೋರಾಗಿತ್ತು.</p>.<p>ಆಯುಧ ಪೂಜೆ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿತ್ತಾದರೂ ಜನರು ಮುಗಿಬಿದ್ದು ಖರೀದಿ ಮಾಡಿದರು.</p>.<p>ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲೂ ಹೂವು, ಬೂದುಕುಂಬಳ, ಬಾಳೆ ಕಂಬಕ್ಕೆ ಮಾರಾಟ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.</p>.<p>ವಿಜಯದಶಮಿ ಹಬ್ಬದ ಮುನ್ನಾದಿನ ಆಯುಧ ಪೂಜೆ ಇದ್ದು, ಮನೆಗಳಲ್ಲಿನ ವೃತ್ತಿ ಸಂಬಂಧಿತ ಪರಿಕರಗಳು, ವಸ್ತುಗಳು, ವಾಹನಗಳು ಇತರ ಸಲಕರಣೆಗಳನ್ನು ಆಯುಧಗಳೆಂದೇ ಭಾವಿಸಿ, ಪೂಜೆ ಸಲ್ಲಿಸಲು ಜನರ ಸಿದ್ಧತೆಯಲ್ಲಿ ತೊಡಗಿದ್ದಾರೆ. </p>.<p>ಚಂಡು ಹೂ ಸಾಮಾನ್ಯವಾಗಿ ಕೆ.ಜಿಗೆ ₹60 ರಿಂದ 70 ಇರುತ್ತದೆ. ಹಬ್ಬದ ಹಿನ್ನೆಲೆ ₹100 ದಾಟಿತ್ತು. ಬಾಳೆ ದಿಂಡು ದೊಡ್ಡ ಗಾತ್ರದ್ದಾರೆ ಜೋಡಿ ₹100, ಚಿಕ್ಕದಾದರೆ ₹50 ಎಂದು ವ್ಯಾಪಾರಸ್ತರು ಹೇಳುತ್ತಿದ್ದರು. ಸೇಬು ₹120–150, ಮೂಸಂಬಿ ₹100–120, ಬಾಳೆಹಣ್ಣು ₹100–120 ಇತ್ತು. </p>.<h2>ಹೂವು, ಹಣ್ಣು ದುಬಾರಿ</h2>.<p>ಹೊಸಪೇಟೆ (ವಿಜಯನಗರ): ನಗರದ ಏಳು ಕೇರಿಗಳ ಅಮ್ಮಂದಿರ ಜತೆಗೆ ಇತರ ಕಡೆಗಳಲ್ಲಿ ಸಹ ದಸರಾ ಹಬ್ಬದ ರಂಗು ಜೋರಾಗಿಯೇ ಇದ್ದು, ಮಹಾನವಮಿ, ಆಯುಧ ಪೂಜೆಯ ಖರೀದಿ ಭರಾಟೆಗೆ ಮಳೆ ಅಡ್ಡಿ ಉಂಟುಮಾಡದ ಕಾರಣ ಮಾರುಕಟ್ಟೆಯಲ್ಲಿ ರಂಗೇರಿತ್ತು.</p>.<p>ಮಂಗಳವಾರ ಬೆಳಿಗ್ಗೆಯಿಂದಲೇ ಜನ ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳತ್ತ ತೆರಳಿ ತಮಗೆ ಅಗತ್ಯವಿರುವ ಹೂ, ಹಣ್ಣು, ಬಾಳೆಕಂಬ, ಕುಂಬಳಕಾಯಿ ಖರೀದಿಯಲ್ಲಿ ತೊಡಗಿದರು.</p>.<p>‘ಹಣ್ಣುಗಳ ದರ ಈ ಬಾರಿ ಅಷ್ಟೇನೂ ಹೆಚ್ಚಾಗಿಲ್ಲ, ಸೇಬು ಕಿಲೋಗೆ ₹130, ಮೂಸಂಬಿ ₹60ರಿಂದ 70, ಉತ್ತಮ ಗುಣಮಟ್ಟದ ದಾಳಿಂಬೆಗೆ ₹200 ಧಾರಣೆ ಇದೆ’ ಎಂದು ಹಣ್ಣಿನ ವ್ಯಾಪಾರಿ ಮಲ್ಲಪ್ಪ ಹೇಳಿದರು. </p>.<p><strong>ಹೂ ಧಾರಣೆ:</strong> ‘ಮಲ್ಲಿಗೆ ಕೆ.ಜಿ.ಗೆ ₹1000ಕ್ಕೆ ಮಾರಾಟವಾಗುತ್ತಿತ್ತು. ಮಲ್ಲಿಗೆ ಮಾರಿಗೆ ₹200, ಮಳಕ್ಕೆ ₹50, ಕನಕಾಂಬರ ಸಹ ₹200ಕ್ಕೆ ಮಾರಾಟವಾಯಿತು. ಕುಂಬಳಕಾಯಿ ಒಂದಕ್ಕೆ ₹120ರಿಂದ 250ರವರೆಗೆ ದರ ಇತ್ತು. ಬಾಳೆ ಕಂಬ ಚಿಕ್ಕದು ಜೋಡಿಗೆ ₹50, ದೊಡ್ಡದು ಜೋಡಿಗೆ ₹80ರಿಂದ 100ಕ್ಕೆ ಮಾರಾಟವಾಯಿತು.</p>.<p>ಕಳೆದ ಎರಡು, ಮೂರು ದಿನಗಳಿಂದ ಆಗಾಗ ಮಳೆ ಸುರಿಯುತ್ತಲೇ ಇತ್ತು, ಹೀಗಾಗಿ ವ್ಯಾಪಾರ ವಹಿವಾಟಿಗೆ ಸ್ವಲ್ಪ ಧಕ್ಕೆ ಉಂಟಾಗಿತ್ತು, ಮಹಾನವಮಿಗೆ ಸಿದ್ಧತೆಯಲ್ಲಿದ್ದ ಜನರಿಗೆ ಮಳೆ ಬಿಡುವು ಕೊಟ್ಟಿದ್ದರಿಂದ ಜನರಿಗೆ ಖುಷಿಯಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>