<p><strong>ಬಳ್ಳಾರಿ</strong>: ‘ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರರ ಮಾಡುವ, ಕ್ರೈಸ್ತ ಮಿಷನರಿಗಳ ಮತಾಂತರ ಪ್ರಕ್ರಿಯೆಗೆ ಬೆಂಬಲ ನೀಡುವ ಭಾಗವಾಗಿ ಸರ್ಕಾರ ಜಾತಿ ಗಣತಿ ಮಾಡುತ್ತಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.</p>.<p>ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಜಾತಿಗಳ ಮುಂದಿರುವ ಕ್ರೈಸ್ತ ಎಂಬ ಹೆಸರಿನ ಪಟ್ಟಿಯನ್ನು ಕೈಬಿಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೂ, ಪ್ರತ್ಯೇಕ ಕಾಲಂ ನೀಡುತ್ತಿದೆ. ಸಮೀಕ್ಷೆಗೆ ಹೋದವರು ಜನರನ್ನು ಪ್ರೇರೇಪಿಸಿ ಮತಾಂತರ ಮಾಡುವ ಸಾಧ್ಯತೆಗಳು ಇವೆ’ ಎಂದು ದೂರಿದರು. </p>.<p>‘ಬ್ರಾಹ್ಮಣ ಮುಸ್ಲಿಂ, ಜೈನ ಮುಸ್ಲಿಂ ಎಂಬ ಹೆಸರುಗಳಿಗೆ ದಿನೇಶ್ ಗುಂಡೂರಾವ್ ಅವರೇ ವಿರೋಧಿಸಿದ್ದಾರೆ. ಒಕ್ಕಲಿಗ ಸಮುದಾಯದವರು ಸಮೀಕ್ಷೆ ಮುಂದೂಡಬೇಕು ಎಂದು ಹೇಳಿದ್ದಾರೆ. ಸಮೀಕ್ಷೆ ಕೈಬಿಡಬೇಕು ಎಂದು ಬಿಜೆಪಿಯೂ ಆಗ್ರಹಿಸುತ್ತದೆ’ ಎಂದರು. </p>.<p><span class="bold"><strong>ನಷ್ಟ ವಸೂಲಿ ಜೋಕ್:</strong></span> ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯಕ್ಕೆ ಆಗಿರುವ ಸಾವಿರಾರು ಕೋಟಿಗಳ ನಷ್ಟ ವಸೂಲಿಗಾಗಿ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಜೋಕ್ ಎಂದು ವ್ಯಂಗ್ಯವಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ‘ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರರ ಮಾಡುವ, ಕ್ರೈಸ್ತ ಮಿಷನರಿಗಳ ಮತಾಂತರ ಪ್ರಕ್ರಿಯೆಗೆ ಬೆಂಬಲ ನೀಡುವ ಭಾಗವಾಗಿ ಸರ್ಕಾರ ಜಾತಿ ಗಣತಿ ಮಾಡುತ್ತಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.</p>.<p>ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಜಾತಿಗಳ ಮುಂದಿರುವ ಕ್ರೈಸ್ತ ಎಂಬ ಹೆಸರಿನ ಪಟ್ಟಿಯನ್ನು ಕೈಬಿಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೂ, ಪ್ರತ್ಯೇಕ ಕಾಲಂ ನೀಡುತ್ತಿದೆ. ಸಮೀಕ್ಷೆಗೆ ಹೋದವರು ಜನರನ್ನು ಪ್ರೇರೇಪಿಸಿ ಮತಾಂತರ ಮಾಡುವ ಸಾಧ್ಯತೆಗಳು ಇವೆ’ ಎಂದು ದೂರಿದರು. </p>.<p>‘ಬ್ರಾಹ್ಮಣ ಮುಸ್ಲಿಂ, ಜೈನ ಮುಸ್ಲಿಂ ಎಂಬ ಹೆಸರುಗಳಿಗೆ ದಿನೇಶ್ ಗುಂಡೂರಾವ್ ಅವರೇ ವಿರೋಧಿಸಿದ್ದಾರೆ. ಒಕ್ಕಲಿಗ ಸಮುದಾಯದವರು ಸಮೀಕ್ಷೆ ಮುಂದೂಡಬೇಕು ಎಂದು ಹೇಳಿದ್ದಾರೆ. ಸಮೀಕ್ಷೆ ಕೈಬಿಡಬೇಕು ಎಂದು ಬಿಜೆಪಿಯೂ ಆಗ್ರಹಿಸುತ್ತದೆ’ ಎಂದರು. </p>.<p><span class="bold"><strong>ನಷ್ಟ ವಸೂಲಿ ಜೋಕ್:</strong></span> ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯಕ್ಕೆ ಆಗಿರುವ ಸಾವಿರಾರು ಕೋಟಿಗಳ ನಷ್ಟ ವಸೂಲಿಗಾಗಿ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಜೋಕ್ ಎಂದು ವ್ಯಂಗ್ಯವಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>