<p><strong>ಕುರುಗೋಡು:</strong> ಗುತ್ತಿಗನೂರು ಸರ್ಕಾರಿ ಪೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಾಜೀದ್ ಮತ್ತು ಗೆಣಿಕೆಹಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗೌಸಿಯಾಬೇಗಂ ಶುಕ್ರವಾರ ಒಂದುದಿನದ ಮಟ್ಟಿಗೆ ಶ್ಯಾಡೊ ತಹಶೀಲ್ದಾರ್ ಹುದ್ದೆ ಅಲಂಕರಿಸಿದರು. </p>.<p>ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸಿದ ತಹಶೀಲ್ದಾರ್ ನರಸಪ್ಪ ಈ ಮೂಲಕ ವಿಶೇಷವಾಗಿ ಮಕ್ಕಳ ದಿನ ಆಚರಿಸಿದರು. </p>.<p>ತಹಶೀಲ್ದಾರ್ ಹುದ್ದೆ ಅಲಂಕಸಿದ ವಿದ್ಯಾರ್ಥಿಗಳು ಕಚೇರಿಯ ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಕಚೇರಿಯ ಭೂ ಸುಧಾರಣೆ, ಭೂಮಿ ವಿಭಾಗದ ಸರ್ಕಾರಿ ಭೂಮಿ ಮತ್ತು ಕೆರೆ, ಹಳ್ಳ ಒತ್ತುವರಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು.</p>.<p>ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ ಇವರು ಕೂಡಲೇ ಮಂಜೂರು ಮಾಡಿ ಫಲಾನುಭವಿಗಳಿಗೆ ಆದೇಶ ಪ್ರತಿ ನೀಡುವಂತೆ ಸೂಚಿಸಿದರು. 371ಜೆ ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳ ವಿವರ ಪಡೆದು, ಪ್ರಮಾಣ ಪತ್ರ ನೀಡುವಂತೆ ಸೂಚಿಸಿದರು. </p>.<p>ಪ್ರಕೃತಿ ವಿಕೋಪದಿಂದ ಬೆಳೆನಷ್ಟ ಉಂಟಾದ ಮಾಹಿತಿ ಪಡೆದ ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ವರದಿ ಸಿದ್ದಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು. </p>.<p>ತಹಶೀಲ್ದಾರ್ ನರಸಪ್ಪ ಜತೆ, ತಾಲ್ಲೂಕಿನ ಗೆಣಿಕೆಹಾಳು, ಬಾದನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ, ನ್ಯಾಯಬೆಲೆ ಅಂಗಡಿ, ರೈತರಿಗೆ ಭೂಸುಧಾರಣೆ ಕಾಯ್ದೆಯ ರೈತುವಾರಿಪಟ್ಟಾ ವಿತರಣೆ, ಸಾಗುವಳಿ ಕುರಿತು ಗ್ರಾಮಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಮತ್ತು ಉಪತಹಶೀಲ್ದಾರ್ ಅವರೊಂದಿಗೆ ವಿಚಾರಣೆ ನಡೆಸಿದರು.</p>.<p>ಕುರುಗೋಡು, ಬಾದನಹಟ್ಟಿಯ ಗ್ರಾಮಲೆಕ್ಕಾಧಿಕಾರಿ ಕಚೇರಿಗೆ ಭೇಟಿ ನೀಡಿ ಪೌತಿ ಆಂದೋಲನ ಪರಿಶೀಲಿಸಿದರು. ಗ್ರೇಡ್– 2 ತಹಶೀಲ್ದಾರ್ ಮಲ್ಲೇಶಪ್ಪ, ಉಪ ತಹಶೀಲ್ದಾರ್ ರಾಜಶೇಖರ್ ಮತ್ತು ರವೀಂದ್ರ ಬಾಬು, ಕಂದಾಯ ನಿರೀಕ್ಷಕ ಸುರೇಶ್ ಇದ್ದರು.</p>.<div><blockquote>ತಹಶೀಲ್ದಾರ್ ಆದರೆ ಬಡವರಿಗೆ ಸಹಾಯ ಮಾಡಬಹುದು ಎನ್ನುವ ವಿಷಯ ತಿಳಿಯಿತು. ಪದವಿ ನಂತರ ಕೆಪಿಎಸ್ಸಿ ಪರೀಕ್ಷೆ ಬರೆದು ತಹಶೀಲ್ದಾರ್ ಆಗುವ ಆಸೆ ನನ್ನಲ್ಲಿ ಚಿಗುರಿದೆ </blockquote><span class="attribution">ಗೌಸಿಯಾಬೇಗಂ 10ನೇ ತರಗತಿ ವಿದ್ಯಾರ್ಥಿನಿ ಗೆಣಿಕೆಹಾಳು</span></div>.<div><blockquote>ಒಂದು ದಿನ ಶ್ಯಾಡೊ ತಹಶೀಲ್ದಾರ್ ಕೆಲಸಮಾಡಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣ. ಮನೆಯಲ್ಲಿ ಬಡತನವಿದ್ದರೂ ಕಷ್ಟಪಟ್ಟು ಓದಿ ಸರ್ಕಾರದ ಉನ್ನತ ಹುದ್ದೆ ಅಲಂಕರಿಸುತ್ತೇನೆ </blockquote><span class="attribution">ಸಾಜೀದ್ 9ನೇ ತರಗತಿ ವಿದ್ಯಾರ್ಥಿ ಗುತ್ತಿಗನೂರು</span></div>.<p><strong>‘ಉನ್ನತ ಹುದ್ದೆ ಅಲಂಕರಿಸಲು ಸ್ಫೂರ್ತಿ ’</strong> </p><p>‘ಮಕ್ಕಳಲ್ಲಿ ಆತ್ಮಸ್ಥೈರ್ಯ ಮನೋಬಲ ನಾಯಕತ್ವಗುಣ ಬೆಳೆಸಲು ಒಂದು ದಿನದ ಅಧಿಕಾರ ಮಕ್ಕಳ ಜೀವನದಲ್ಲಿ ಸ್ಪೂರ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಅಧಿಕಾರ ನಡೆಸಲು ಅವಕಾಶ ನೀಡಿದ್ದು ಖುಷಿತಂದಿದೆ’ ಎಂದು ತಹಶೀಲ್ದಾರ್ ನರಸಪ್ಪ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು:</strong> ಗುತ್ತಿಗನೂರು ಸರ್ಕಾರಿ ಪೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಾಜೀದ್ ಮತ್ತು ಗೆಣಿಕೆಹಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗೌಸಿಯಾಬೇಗಂ ಶುಕ್ರವಾರ ಒಂದುದಿನದ ಮಟ್ಟಿಗೆ ಶ್ಯಾಡೊ ತಹಶೀಲ್ದಾರ್ ಹುದ್ದೆ ಅಲಂಕರಿಸಿದರು. </p>.<p>ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸಿದ ತಹಶೀಲ್ದಾರ್ ನರಸಪ್ಪ ಈ ಮೂಲಕ ವಿಶೇಷವಾಗಿ ಮಕ್ಕಳ ದಿನ ಆಚರಿಸಿದರು. </p>.<p>ತಹಶೀಲ್ದಾರ್ ಹುದ್ದೆ ಅಲಂಕಸಿದ ವಿದ್ಯಾರ್ಥಿಗಳು ಕಚೇರಿಯ ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಕಚೇರಿಯ ಭೂ ಸುಧಾರಣೆ, ಭೂಮಿ ವಿಭಾಗದ ಸರ್ಕಾರಿ ಭೂಮಿ ಮತ್ತು ಕೆರೆ, ಹಳ್ಳ ಒತ್ತುವರಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು.</p>.<p>ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ ಇವರು ಕೂಡಲೇ ಮಂಜೂರು ಮಾಡಿ ಫಲಾನುಭವಿಗಳಿಗೆ ಆದೇಶ ಪ್ರತಿ ನೀಡುವಂತೆ ಸೂಚಿಸಿದರು. 371ಜೆ ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳ ವಿವರ ಪಡೆದು, ಪ್ರಮಾಣ ಪತ್ರ ನೀಡುವಂತೆ ಸೂಚಿಸಿದರು. </p>.<p>ಪ್ರಕೃತಿ ವಿಕೋಪದಿಂದ ಬೆಳೆನಷ್ಟ ಉಂಟಾದ ಮಾಹಿತಿ ಪಡೆದ ಅವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ವರದಿ ಸಿದ್ದಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು. </p>.<p>ತಹಶೀಲ್ದಾರ್ ನರಸಪ್ಪ ಜತೆ, ತಾಲ್ಲೂಕಿನ ಗೆಣಿಕೆಹಾಳು, ಬಾದನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ, ನ್ಯಾಯಬೆಲೆ ಅಂಗಡಿ, ರೈತರಿಗೆ ಭೂಸುಧಾರಣೆ ಕಾಯ್ದೆಯ ರೈತುವಾರಿಪಟ್ಟಾ ವಿತರಣೆ, ಸಾಗುವಳಿ ಕುರಿತು ಗ್ರಾಮಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಮತ್ತು ಉಪತಹಶೀಲ್ದಾರ್ ಅವರೊಂದಿಗೆ ವಿಚಾರಣೆ ನಡೆಸಿದರು.</p>.<p>ಕುರುಗೋಡು, ಬಾದನಹಟ್ಟಿಯ ಗ್ರಾಮಲೆಕ್ಕಾಧಿಕಾರಿ ಕಚೇರಿಗೆ ಭೇಟಿ ನೀಡಿ ಪೌತಿ ಆಂದೋಲನ ಪರಿಶೀಲಿಸಿದರು. ಗ್ರೇಡ್– 2 ತಹಶೀಲ್ದಾರ್ ಮಲ್ಲೇಶಪ್ಪ, ಉಪ ತಹಶೀಲ್ದಾರ್ ರಾಜಶೇಖರ್ ಮತ್ತು ರವೀಂದ್ರ ಬಾಬು, ಕಂದಾಯ ನಿರೀಕ್ಷಕ ಸುರೇಶ್ ಇದ್ದರು.</p>.<div><blockquote>ತಹಶೀಲ್ದಾರ್ ಆದರೆ ಬಡವರಿಗೆ ಸಹಾಯ ಮಾಡಬಹುದು ಎನ್ನುವ ವಿಷಯ ತಿಳಿಯಿತು. ಪದವಿ ನಂತರ ಕೆಪಿಎಸ್ಸಿ ಪರೀಕ್ಷೆ ಬರೆದು ತಹಶೀಲ್ದಾರ್ ಆಗುವ ಆಸೆ ನನ್ನಲ್ಲಿ ಚಿಗುರಿದೆ </blockquote><span class="attribution">ಗೌಸಿಯಾಬೇಗಂ 10ನೇ ತರಗತಿ ವಿದ್ಯಾರ್ಥಿನಿ ಗೆಣಿಕೆಹಾಳು</span></div>.<div><blockquote>ಒಂದು ದಿನ ಶ್ಯಾಡೊ ತಹಶೀಲ್ದಾರ್ ಕೆಲಸಮಾಡಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣ. ಮನೆಯಲ್ಲಿ ಬಡತನವಿದ್ದರೂ ಕಷ್ಟಪಟ್ಟು ಓದಿ ಸರ್ಕಾರದ ಉನ್ನತ ಹುದ್ದೆ ಅಲಂಕರಿಸುತ್ತೇನೆ </blockquote><span class="attribution">ಸಾಜೀದ್ 9ನೇ ತರಗತಿ ವಿದ್ಯಾರ್ಥಿ ಗುತ್ತಿಗನೂರು</span></div>.<p><strong>‘ಉನ್ನತ ಹುದ್ದೆ ಅಲಂಕರಿಸಲು ಸ್ಫೂರ್ತಿ ’</strong> </p><p>‘ಮಕ್ಕಳಲ್ಲಿ ಆತ್ಮಸ್ಥೈರ್ಯ ಮನೋಬಲ ನಾಯಕತ್ವಗುಣ ಬೆಳೆಸಲು ಒಂದು ದಿನದ ಅಧಿಕಾರ ಮಕ್ಕಳ ಜೀವನದಲ್ಲಿ ಸ್ಪೂರ್ತಿಯಾಗಲಿದೆ. ವಿದ್ಯಾರ್ಥಿಗಳಿಗೆ ಅಧಿಕಾರ ನಡೆಸಲು ಅವಕಾಶ ನೀಡಿದ್ದು ಖುಷಿತಂದಿದೆ’ ಎಂದು ತಹಶೀಲ್ದಾರ್ ನರಸಪ್ಪ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>