<p><strong>ಕಂಪ್ಲಿ:</strong> ‘ಮಕ್ಕಳ ಸಾಹಿತ್ಯ ರಚನೆ ಸುಲಭವಲ್ಲ. ಮಗುವಿನ ಅಂತಃಕರಣ, ಕಲ್ಪನೆ, ಸಂತೋಷಗಳನ್ನು ಅರಿಯದೇ ಸಾಹಿತ್ಯ ರಚಿಸಲು ಆಗುವುದಿಲ್ಲ. ತಾನು ಮಗುವಾದಾಗ ಮಕ್ಕಳ ಸಾಹಿತಿಯಾಗಿ ರೂಪುಗೊಳ್ಳಲು ಸಾಧ್ಯ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೆ. ಶಿವಲಿಂಗಪ್ಪ ಹಂದಿಹಾಳು ತಿಳಿಸಿದರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶಿವಲಿಂಗಪ್ಪ ಹಂದಿಹಾಳು ಅವರ ಕೃತಿ ‘ನೋಟ್ ಬುಕ್’ ಕುರಿತು ಸಂವಾದದಲ್ಲಿ ಮಾತನಾಡಿದರು.</p>.<p>ಮಕ್ಕಳ ಬೆಳವಣಿಗೆಗೆ ಸಾಹಿತ್ಯ ಪೂರಕವಾಗಿರಬೇಕು. ಮಕ್ಕಳ ಸಾಹಿತ್ಯ ಮಕ್ಕಳತನ ಇರುವವರಿಗಾಗಿ ಬರೆದ ಸಾಹಿತ್ಯವಾಗಿದೆ. ಶಾಲೆ ಬಿಟ್ಟ, ಅನೌಪಚಾರಿಕ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಸೃಜನಶೀಲ ಹೆಪ್ಪುಗಟ್ಟಿದ್ದು, ಸೂಕ್ತ ವೇದಿಕೆ ಒದಗಿಸುವ ಕೆಲಸವಾಗಬೇಕು ಎಂದು ತಿಳಿಸಿದರು.</p>.<p>ಕನ್ನಡ ಹಿತರಕ್ಷಕ ಸಂಘದ ಗೌರವ ಅಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಮಕ್ಕಳ ಸಾಹಿತ್ಯವನ್ನು ಬದುಕಿನ ಪ್ರಮುಖ ಅಂಗವೆಂದು ಪರಿಗಣಿಸಬೇಕಿದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಕತೆಗಾರ ವೀರೇಂದ್ರ ರಾವಿಹಾಳ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ. ಶ್ರೀಧರಶ್ರೇಷ್ಠಿ ಮಾತನಾಡಿದರು.</p>.<p>ಸಂವಾದದಲ್ಲಿ ಗಂಗಾವತಿಯ ಮಕ್ಕಳ ಸಾಹಿತಿ ಸುರೇಶ್ ಜಿ.ಎಸ್. ಕಲಾಪ್ರಿಯ, ಎಸ್.ಎಂ. ಸಾವಿತ್ರಿ, ಬಿ. ಸುನಿಲ್, ಜಯಶ್ರೀ ಬೇರ್ಗಿ, ಚಂದ್ರಯ್ಯ ಸೊಪ್ಪಿಮಠ, ರಾಜು ಬಿಲಂಕರ್, ವೀರಮ್ಮ ನಾಗರಾಜ, ಮುದುಕಪ್ಪ ನೆಲಜೇರಿ, ಶಂಕರಮೂರ್ತಿ ಭಾಗವಹಿಸಿದ್ದರು.</p>.<p>ಕಸಾಪ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಬಡಿಗೇರ ಜಿಲಾನ್ಸಾಬ್, ಅಂಬಿಗರ ಮಂಜುನಾಥ, ಬಂಗಿ ದೊಡ್ಡ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಯು.ಎಂ. ವಿದ್ಯಾಶಂಕರ, ಶಾಮಸುಂದರರಾವ್, ಎಂ.ಎಸ್. ಮುನ್ನಾ, ಅಶೋಕ ಕುಕನೂರು, ಕಾಳಿಂಗವರ್ಧನ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ:</strong> ‘ಮಕ್ಕಳ ಸಾಹಿತ್ಯ ರಚನೆ ಸುಲಭವಲ್ಲ. ಮಗುವಿನ ಅಂತಃಕರಣ, ಕಲ್ಪನೆ, ಸಂತೋಷಗಳನ್ನು ಅರಿಯದೇ ಸಾಹಿತ್ಯ ರಚಿಸಲು ಆಗುವುದಿಲ್ಲ. ತಾನು ಮಗುವಾದಾಗ ಮಕ್ಕಳ ಸಾಹಿತಿಯಾಗಿ ರೂಪುಗೊಳ್ಳಲು ಸಾಧ್ಯ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೆ. ಶಿವಲಿಂಗಪ್ಪ ಹಂದಿಹಾಳು ತಿಳಿಸಿದರು.</p>.<p>ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶಿವಲಿಂಗಪ್ಪ ಹಂದಿಹಾಳು ಅವರ ಕೃತಿ ‘ನೋಟ್ ಬುಕ್’ ಕುರಿತು ಸಂವಾದದಲ್ಲಿ ಮಾತನಾಡಿದರು.</p>.<p>ಮಕ್ಕಳ ಬೆಳವಣಿಗೆಗೆ ಸಾಹಿತ್ಯ ಪೂರಕವಾಗಿರಬೇಕು. ಮಕ್ಕಳ ಸಾಹಿತ್ಯ ಮಕ್ಕಳತನ ಇರುವವರಿಗಾಗಿ ಬರೆದ ಸಾಹಿತ್ಯವಾಗಿದೆ. ಶಾಲೆ ಬಿಟ್ಟ, ಅನೌಪಚಾರಿಕ ಶಿಕ್ಷಣ ಪಡೆಯುವ ಮಕ್ಕಳಲ್ಲಿ ಸೃಜನಶೀಲ ಹೆಪ್ಪುಗಟ್ಟಿದ್ದು, ಸೂಕ್ತ ವೇದಿಕೆ ಒದಗಿಸುವ ಕೆಲಸವಾಗಬೇಕು ಎಂದು ತಿಳಿಸಿದರು.</p>.<p>ಕನ್ನಡ ಹಿತರಕ್ಷಕ ಸಂಘದ ಗೌರವ ಅಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಮಕ್ಕಳ ಸಾಹಿತ್ಯವನ್ನು ಬದುಕಿನ ಪ್ರಮುಖ ಅಂಗವೆಂದು ಪರಿಗಣಿಸಬೇಕಿದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಕತೆಗಾರ ವೀರೇಂದ್ರ ರಾವಿಹಾಳ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ. ಶ್ರೀಧರಶ್ರೇಷ್ಠಿ ಮಾತನಾಡಿದರು.</p>.<p>ಸಂವಾದದಲ್ಲಿ ಗಂಗಾವತಿಯ ಮಕ್ಕಳ ಸಾಹಿತಿ ಸುರೇಶ್ ಜಿ.ಎಸ್. ಕಲಾಪ್ರಿಯ, ಎಸ್.ಎಂ. ಸಾವಿತ್ರಿ, ಬಿ. ಸುನಿಲ್, ಜಯಶ್ರೀ ಬೇರ್ಗಿ, ಚಂದ್ರಯ್ಯ ಸೊಪ್ಪಿಮಠ, ರಾಜು ಬಿಲಂಕರ್, ವೀರಮ್ಮ ನಾಗರಾಜ, ಮುದುಕಪ್ಪ ನೆಲಜೇರಿ, ಶಂಕರಮೂರ್ತಿ ಭಾಗವಹಿಸಿದ್ದರು.</p>.<p>ಕಸಾಪ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಬಡಿಗೇರ ಜಿಲಾನ್ಸಾಬ್, ಅಂಬಿಗರ ಮಂಜುನಾಥ, ಬಂಗಿ ದೊಡ್ಡ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಯು.ಎಂ. ವಿದ್ಯಾಶಂಕರ, ಶಾಮಸುಂದರರಾವ್, ಎಂ.ಎಸ್. ಮುನ್ನಾ, ಅಶೋಕ ಕುಕನೂರು, ಕಾಳಿಂಗವರ್ಧನ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>