ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಮೃತ ಚಾಲಕನ ಕುಟುಂಬಕ್ಕೆ ₹3 ಲಕ್ಷ ಪರಿಹಾರ

Last Updated 10 ಜುಲೈ 2020, 11:25 IST
ಅಕ್ಷರ ಗಾತ್ರ

ಹೊಸಪೇಟೆ: ಅನಾರೋಗ್ಯದಿಂದ ಮೃತಪಟ್ಟಿರುವ ಸಂಡೂರು ಘಟಕದ ಚಾಲಕ/ನಿರ್ವಾಹಕ ಕೆ. ಬಸವರಾಜ (56) ಅವರ ಪತ್ನಿ ಅಕ್ಕಮಹಾದೇವಿ ಅವರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರು ಶುಕ್ರವಾರ ₹3 ಲಕ್ಷ ಮೊತ್ತದ ಪರಿಹಾರದ ಚೆಕ್‌ ವಿತರಿಸಿದರು.

‘ಸಂಸ್ಥೆಯ ನಿಯಮದ ಪ್ರಕಾರ, ಸಿಬ್ಬಂದಿ ಮೃತರಾದಲ್ಲಿ ಅವರ ಅವಲಂಬಿತರಿಗೆ ಆಂತರಿಕ ಗುಂಪು ವಿಮಾ ಯೋಜನೆಯ ಅಡಿಯಲ್ಲಿ ₹3 ಲಕ್ಷ ಪರಿಹಾರ ನೀಡಲಾಗುತ್ತದೆ. ಅದರಂತೆ ಬಸವರಾಜ ಅವರ ಪತ್ನಿ ಅಕ್ಕಮಹಾದೇವಿ ಅವರಿಗೆ ಪರಿಹಾರದ ಚೆಕ್‌ ನೀಡಲಾಗಿದೆ’ ಎಂದು ಶೀನಯ್ಯ ತಿಳಿಸಿದ್ದಾರೆ.

ಸಂಸ್ಥೆಯ ಕಾರ್ಮಿಕ ಕಲ್ಯಾಣ ಅಧಿಕಾರಿ ಎಚ್‌. ಚಂದ್ರಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT