<p><strong>ಬಳ್ಳಾರಿ:</strong> ಜಿಲ್ಲೆಯ ಜಿಂದಾಲ್ನಲ್ಲಿಕೊರೊನಾ ಸೋಂಕಿತರ ಸಂಖ್ಯೆ ದಿಢೀರನೆ ಹೆಚ್ಚಾಗಿದೆ. ಗುರುವಾರ ದೃಢಪಟ್ಟ 34 ಪ್ರಕರಣಗಳಲ್ಲಿ ಜಿಂದಾಲ್ನವರು 27 ಮಂದಿ ಇದ್ದಾರೆ. ಉಳಿದ ಐವರು ಮಹಾರಾಷ್ಟ್ರದಿಂದ ಬಳ್ಳಾರಿಗೆ ವಾಪಸಾಗಿದ್ದರು.</p>.<p>ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 128ಕ್ಕೆ ಏರಿದೆ. ಬುಧವಾರ ಈ ಸಂಖ್ಯೆ 94ಕ್ಕೆ ನಿಂತಿತ್ತು.</p>.<p><strong>ಅಸಮಾಧಾನ:</strong> ಜಿಂದಾಲ್ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲಿ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p>.<p>ಲಾಕ್ಡೌನ್ ಆರಂಭದಿಂದಲೇ ಜಿಂದಾಲ್ನಲ್ಲಿಅದಿರು ಉತ್ಪಾದನೆಗೆ ತಡೆವೊಡ್ಡಬೇಕು ಎಂಬ ಜನಾಗ್ರಹವನ್ನು ಮೂಲೆಗೊತ್ತಿ ಉತ್ಪಾದನೆಗೆ ಅವಕಾಶ ನೀಡಿದ್ದೇ ಇಂದಿನ ಪರಿಸ್ಥಿತಿಗೆ ಕಾರಣ ಎಂಬ ಆಕ್ರೋಶವೂ ವಾಟ್ಸ್ಯಾಪ್ಗುಂಪುಗಳಲ್ಲಿ ಹರಿದಾಡಿದೆ.</p>.<p>ಅದಿರು ಉತ್ಪಾದನೆಗೆ ಅತಿ ಕಡಿಮೆ ಸಂಖ್ಯೆಯ ಸಿಬ್ಬಂದಿ ಬಳಸಲಾಗುವುದು ಎಂದು ಜಿಂದಾಲ್ ಹೇಳಿತ್ತು. ಆ ನಂತರವೂ ಅಂತರ ಕಾಪಾಡಿಕೊಳ್ಳದೇ ಜಿಂದಾಲ್ ಬಸ್ಗಳಲ್ಲಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಸ್ವತಃ ಸಿಬ್ಬಂದಿಯೇ ಭೀತಿ ವ್ಯಕ್ತಪಡಿಸಿದ್ದರೂ ಜಿಂದಾಲ್ನಲ್ಲಿ ಚಟುವಟಿಕೆಗಳು ನಿಂತಿರಲಿಲ್ಲ.</p>.<p>ಜಿಂದಾಲ್ನಲ್ಲಿ 30 ಸಾವಿರ ಕಾರ್ಮಿಕರಿದ್ದಾರೆ. ಈಗ ಅವರಲ್ಲಿ,ಅವರ ಕುಟುಂಬಗಳ ಸದಸ್ಯರಲ್ಲಿ ಮತ್ತುಅವರು ವಾಸಿಸುವ ಪ್ರದೇಶಗಳ ಸುತ್ತಮುತ್ತಲ ಜನರಲ್ಲಿ ಆತಂಕ ಹೆಚ್ಚಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಜಿಲ್ಲೆಯ ಜಿಂದಾಲ್ನಲ್ಲಿಕೊರೊನಾ ಸೋಂಕಿತರ ಸಂಖ್ಯೆ ದಿಢೀರನೆ ಹೆಚ್ಚಾಗಿದೆ. ಗುರುವಾರ ದೃಢಪಟ್ಟ 34 ಪ್ರಕರಣಗಳಲ್ಲಿ ಜಿಂದಾಲ್ನವರು 27 ಮಂದಿ ಇದ್ದಾರೆ. ಉಳಿದ ಐವರು ಮಹಾರಾಷ್ಟ್ರದಿಂದ ಬಳ್ಳಾರಿಗೆ ವಾಪಸಾಗಿದ್ದರು.</p>.<p>ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 128ಕ್ಕೆ ಏರಿದೆ. ಬುಧವಾರ ಈ ಸಂಖ್ಯೆ 94ಕ್ಕೆ ನಿಂತಿತ್ತು.</p>.<p><strong>ಅಸಮಾಧಾನ:</strong> ಜಿಂದಾಲ್ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲಿ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.</p>.<p>ಲಾಕ್ಡೌನ್ ಆರಂಭದಿಂದಲೇ ಜಿಂದಾಲ್ನಲ್ಲಿಅದಿರು ಉತ್ಪಾದನೆಗೆ ತಡೆವೊಡ್ಡಬೇಕು ಎಂಬ ಜನಾಗ್ರಹವನ್ನು ಮೂಲೆಗೊತ್ತಿ ಉತ್ಪಾದನೆಗೆ ಅವಕಾಶ ನೀಡಿದ್ದೇ ಇಂದಿನ ಪರಿಸ್ಥಿತಿಗೆ ಕಾರಣ ಎಂಬ ಆಕ್ರೋಶವೂ ವಾಟ್ಸ್ಯಾಪ್ಗುಂಪುಗಳಲ್ಲಿ ಹರಿದಾಡಿದೆ.</p>.<p>ಅದಿರು ಉತ್ಪಾದನೆಗೆ ಅತಿ ಕಡಿಮೆ ಸಂಖ್ಯೆಯ ಸಿಬ್ಬಂದಿ ಬಳಸಲಾಗುವುದು ಎಂದು ಜಿಂದಾಲ್ ಹೇಳಿತ್ತು. ಆ ನಂತರವೂ ಅಂತರ ಕಾಪಾಡಿಕೊಳ್ಳದೇ ಜಿಂದಾಲ್ ಬಸ್ಗಳಲ್ಲಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಸ್ವತಃ ಸಿಬ್ಬಂದಿಯೇ ಭೀತಿ ವ್ಯಕ್ತಪಡಿಸಿದ್ದರೂ ಜಿಂದಾಲ್ನಲ್ಲಿ ಚಟುವಟಿಕೆಗಳು ನಿಂತಿರಲಿಲ್ಲ.</p>.<p>ಜಿಂದಾಲ್ನಲ್ಲಿ 30 ಸಾವಿರ ಕಾರ್ಮಿಕರಿದ್ದಾರೆ. ಈಗ ಅವರಲ್ಲಿ,ಅವರ ಕುಟುಂಬಗಳ ಸದಸ್ಯರಲ್ಲಿ ಮತ್ತುಅವರು ವಾಸಿಸುವ ಪ್ರದೇಶಗಳ ಸುತ್ತಮುತ್ತಲ ಜನರಲ್ಲಿ ಆತಂಕ ಹೆಚ್ಚಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>