<p><strong>ಬಳ್ಳಾರಿ:</strong> ಆಂಧ್ರದಿಂದ ಜಿಲ್ಲೆಗೆ ಬರಲು ಇದ್ದ ಎಲ್ಲ ದಾರಿಗಳನ್ನೂ ಈಗ ಮುಚ್ಚಲಾಗಿದೆ. ಚೆಕ್ಪೋಸ್ಟ್ಗಳೂ ಪೂರ್ಣ ಬಂದ್ ಆಗಿವೆ.</p>.<p>ಬರುವವರು ಯಾರೇ ಆಗಿದ್ದರೂ ಜೋಳದರಾಶಿಯಲ್ಲಿರುವ ಅಂತರರಾಜ್ಯ ಚೆಕ್ ಪೋಸ್ಟ್ ಮೂಲಕವೇ ಬರಬೇಕು. ಕರ್ನೂಲು ಮತ್ತು ಅನಂತಪುರದಿಂದ ಬರುವವರ ಸಂಖ್ಯೆ ಇದರಿಂದ ಗಣನೀಯವಾಗಿ ಕಡಿಮೆಯಾಗಿದೆ.</p>.<p>ರಾಜ್ಯ ಸರ್ಕಾರವು ಸೂಚನೆ ನೀಡಿದ ಬಳಿಕ ಜಿಲ್ಲಾಡಳಿತ ಎಲ್ಲ ಅಂತರರಾಜ್ಯ ಚೆಕ್ ಪೋಸ್ಟ್ಗಳನ್ನು ಮುಚ್ಚಿದ್ದು, ಜೋಳದರಾಶಿ ಚೆಕ್ಪೋಸ್ಟ್ನಲ್ಲೇ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ಗೆ ಕಳಿಸುತ್ತಿದೆ. ಸೇವಾ ಸಿಂಧುವಿನ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆದವರಿಗಷ್ಟೇ ಪ್ರವೇಶಕ್ಕೆ ಅನುವು ಮಾಡಲಾಗುತ್ತಿದೆ.</p>.<p>ಜಿಲ್ಲೆಯಲ್ಲಿ ಈ ಮುನ್ನ 14 ಅಂತರರಾಜ್ಯ ಚೆಕ್ ಪೋಸ್ಟ್ಗಳನ್ನು ಸ್ಥಾಪಸಲಾಗಿದ್ದು, ಲಾಕ್ಡೌನ್ ಸಡಿಲಿಕೆ ಬಳಿಕ ಅವುಗಳನ್ನು 11ಕ್ಕೆ ಇಳಿಸಲಾಗಿದೆ. ಈಗ ಈ ಜೋಳದರಾಶಿ ಚೆಕ್ ಪೋಸ್ಟ್ ಹೊರತುಪಡಿಸಿ ಮಿಕ್ಕೆಲ್ಲ ಚೆಕ್ಪೋಸ್ಟ್ಗಳ ಮೂಲಕ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.</p>.<p>ಆಂಧ್ರದ ಗಡಿಭಾಗದಲ್ಲಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸೇರಿದ ಚೇಳಗುರ್ಕಿ ಕ್ರಾಸ್, ಕಾರೇಕಲ್ಲು, ರೂಪನಗುಡಿ, ಹಲಕುಂದಿ, ಎತ್ತಿನ ಬೂದಿಹಾಳ್, ಸಿಂಧುವಾಳ ಕ್ರಾಸ್, ಬಿ.ಡಿ.ಹಳ್ಳಿ, ಗೋಡೆಹಾಳ್ ಕ್ರಾಸ್, ಸಿರುಗುಪ್ಪ ತಾಲ್ಲೂಕಿನ ವತ್ತುಮುರಣಿ, ಇಟಗಿಹಾಳ್ ಹಾಗೂ ಕೆ.ಬೆಳಗಲ್ನಲ್ಲಿ ಚೆಕ್ಪೋಸ್ಟ್ಗಳನ್ನು ಬಂದ್ ಆಗಿವೆ.</p>.<p>ಚೇಳಗುರ್ಕಿ ಕ್ರಾಸ್ನಲ್ಲಿರುವ ಜೋಳದರಾಶಿ ಚೆಕ್ಪೋಸ್ಟ್ನಲ್ಲಿ ಶುಕ್ರವಾರದಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೊರ<br />ರಾಜ್ಯಗಳಿಂದ ಜಿಲ್ಲೆಗೆ ಪಾಸ್ ಜೊತೆಗೆ ಬರುವ ಸ್ಥಳೀಯರ ಆರೋಗ್ಯ ತಪಾಸಣೆ ಮಾಡಿ, ಕಡ್ಡಾಯವಾಗಿ ಸಾಂಸ್ಥಿಕ<br />ಕ್ವಾರಂಟೈನ್ಗೆ ಕಳಿಸಲಾಗುತ್ತಿದೆ. ಚೆಕ್ಪೋಸ್ಟ್ ಬಳಿಕ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈಗಾಗಲೇ 130ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.</p>.<p><strong>ನಿಯಂತ್ರಣವೇ ಸವಾಲು:</strong> ಆಂಧ್ರ ಪ್ರದೇಶ ರಾಜ್ಯದ ಕರ್ನೂಲು ಮತ್ತು ಅನಂತಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿನ ಗಡಿಭಾಗದ ಜನ ಜಿಲ್ಲೆಗೆ ಅಡ್ಡದಾರಿಗಳಿಂದ ಬರುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಒಂದೇ ಚೆಕ್ಪೋಸ್ಟ್ ಮೂಲಕ ಬರುವ ಅವಕಾಶವಿರುವುದರಿಂದ ಸನ್ನಿವೇಶ ಈಗ ಸುಧಾರಿಸಿದೆ.</p>.<p><strong>ಏಳು ತಂಡ, ಮೂರು ಪಾಳಿ</strong><br /><strong>ಬಳ್ಳಾರಿ:</strong> ಚೆಕ್ಪೋಸ್ಟ್ನಲ್ಲಿ ಕಂದಾಯ ಇಲಾಖೆಯ ಏಳು ತಂಡಗಳ 45 ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಎರಡು ತಂಡಗಳ ಹತ್ತು ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರಿಗೂ ಶಾಲೆಯಲ್ಲೇ ಊಟ, ವಸತಿ ಸೌಕರ್ಯವನ್ನು ನೀಡಲಾಗಿದೆ.</p>.<p>ಶನಿವಾರ ಗುಂಟೂರು ಮತ್ತು ಚಿತ್ತೂರಿನಿಂದ ಬಂದ 130 ಮಂದಿಯನ್ನು ಶಾಲೆಯಲ್ಲೇ ಕ್ವಾರಂಟೈನ್ನಲ್ಲಿಡಲಾಗಿದೆ. ಸುಮಾರು 5 ಸಾವಿರ ಮಂದಿ ಜಿಲ್ಲೆಗೆ ವಾಪಸಾಗುವ ನಿರೀಕ್ಷೆ ಇದೆ’ ಎಂದು ಚೆಕ್ಪೋಸ್ಟ್ಗಳ ನೋಡಲ್ ಅಧಿಕಾರಿ ಈರಣ್ಣ ಬಿರಾದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಕ್ವಾರಂಟೈನ್ಗೆ ಹೆದರಿದ ದಂಪತಿ!</strong><br /><strong>ಬಳ್ಳಾರಿ:</strong> ಚೆಕ್ಪೋಸ್ಟ್ ಸಮೀಪದ ಚಾನಾಳ್ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ಹೋಗಲೆಂದು ಶನಿವಾರ ಬಂದಿದ್ದ ಕರ್ನೂಲ್ ಜಿಲ್ಲೆಯ ಧೋನ್ ಪಟ್ಟಣದ ಮಲ್ಲಪ್ಪ ದಂಪತಿ ವಾಪಸು ಹೋದರು.</p>.<p>ಕಾರಿನಲ್ಲಿ ಆಂಧ್ರದ ಪತ್ರಕರ್ತರೊಬ್ಬರ ಸಹಾಯದೊಂದಿಗೆ ಕಾರಿನಲ್ಲಿ ಬಂದಿದ್ದ ಅವರಿಗೆ ನೋಡಲ್ ಅಧಿಕಾರಿ ಈರಣ್ಣ ಬಿರಾದಾರ್, ‘ಕಡ್ಡಾಯವಾಗಿ 14 ದಿನ ಕ್ವಾರಂಟೈನ್ಗೆ ಕಳಿಸಲಾಗುವುದು. ಅದಕ್ಕೆ ಒಪ್ಪಿಗೆ ಇದ್ದರೆ ಮಾತ್ರ ಬನ್ನಿ’ ಎಂದು ಸ್ಪಷ್ಟಪಡಿಸಿದ್ದರು.</p>.<p>‘ಕ್ವಾರಂಟೈನ್ಗೆ ಕಳಿಸಬೇಡಿ’ ಎಂದು ದಂಪತಿ ಕೈಮುಗಿದು ಪರಿಪರಿಯಾಗಿ ಕೇಳಿದರೂ ಒಪ್ಪಲಿಲ್ಲ. ಹೀಗಾಗಿ‘ಕ್ವಾರಂಟೈನ್ ಬೇಡ. ನಾವು ನಮ್ಮೂರಿಗೆ ವಾಪಸು ಹೋಗುತ್ತೇವೆ’ ಎಂದು ದಂಪತಿ ಅಲ್ಲಿಂದ ತೆರಳಿದರು.</p>.<p>*<br />ಹೊರರಾಜ್ಯಗಳಿಂದ ಬರುವವರೆಲ್ಲರ ಆರೋಗ್ಯ ತಪಾಸಣೆ ಮಾಡಿ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿಡಲಾಗುತ್ತಿದೆ.<br /><em><strong>-ಈರಣ್ಣ ಬಿರಾದಾರ್, ಚೆಕ್ಪೋಸ್ಟ್ ನೋಡಲ್ ಅಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಆಂಧ್ರದಿಂದ ಜಿಲ್ಲೆಗೆ ಬರಲು ಇದ್ದ ಎಲ್ಲ ದಾರಿಗಳನ್ನೂ ಈಗ ಮುಚ್ಚಲಾಗಿದೆ. ಚೆಕ್ಪೋಸ್ಟ್ಗಳೂ ಪೂರ್ಣ ಬಂದ್ ಆಗಿವೆ.</p>.<p>ಬರುವವರು ಯಾರೇ ಆಗಿದ್ದರೂ ಜೋಳದರಾಶಿಯಲ್ಲಿರುವ ಅಂತರರಾಜ್ಯ ಚೆಕ್ ಪೋಸ್ಟ್ ಮೂಲಕವೇ ಬರಬೇಕು. ಕರ್ನೂಲು ಮತ್ತು ಅನಂತಪುರದಿಂದ ಬರುವವರ ಸಂಖ್ಯೆ ಇದರಿಂದ ಗಣನೀಯವಾಗಿ ಕಡಿಮೆಯಾಗಿದೆ.</p>.<p>ರಾಜ್ಯ ಸರ್ಕಾರವು ಸೂಚನೆ ನೀಡಿದ ಬಳಿಕ ಜಿಲ್ಲಾಡಳಿತ ಎಲ್ಲ ಅಂತರರಾಜ್ಯ ಚೆಕ್ ಪೋಸ್ಟ್ಗಳನ್ನು ಮುಚ್ಚಿದ್ದು, ಜೋಳದರಾಶಿ ಚೆಕ್ಪೋಸ್ಟ್ನಲ್ಲೇ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ಗೆ ಕಳಿಸುತ್ತಿದೆ. ಸೇವಾ ಸಿಂಧುವಿನ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆದವರಿಗಷ್ಟೇ ಪ್ರವೇಶಕ್ಕೆ ಅನುವು ಮಾಡಲಾಗುತ್ತಿದೆ.</p>.<p>ಜಿಲ್ಲೆಯಲ್ಲಿ ಈ ಮುನ್ನ 14 ಅಂತರರಾಜ್ಯ ಚೆಕ್ ಪೋಸ್ಟ್ಗಳನ್ನು ಸ್ಥಾಪಸಲಾಗಿದ್ದು, ಲಾಕ್ಡೌನ್ ಸಡಿಲಿಕೆ ಬಳಿಕ ಅವುಗಳನ್ನು 11ಕ್ಕೆ ಇಳಿಸಲಾಗಿದೆ. ಈಗ ಈ ಜೋಳದರಾಶಿ ಚೆಕ್ ಪೋಸ್ಟ್ ಹೊರತುಪಡಿಸಿ ಮಿಕ್ಕೆಲ್ಲ ಚೆಕ್ಪೋಸ್ಟ್ಗಳ ಮೂಲಕ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.</p>.<p>ಆಂಧ್ರದ ಗಡಿಭಾಗದಲ್ಲಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸೇರಿದ ಚೇಳಗುರ್ಕಿ ಕ್ರಾಸ್, ಕಾರೇಕಲ್ಲು, ರೂಪನಗುಡಿ, ಹಲಕುಂದಿ, ಎತ್ತಿನ ಬೂದಿಹಾಳ್, ಸಿಂಧುವಾಳ ಕ್ರಾಸ್, ಬಿ.ಡಿ.ಹಳ್ಳಿ, ಗೋಡೆಹಾಳ್ ಕ್ರಾಸ್, ಸಿರುಗುಪ್ಪ ತಾಲ್ಲೂಕಿನ ವತ್ತುಮುರಣಿ, ಇಟಗಿಹಾಳ್ ಹಾಗೂ ಕೆ.ಬೆಳಗಲ್ನಲ್ಲಿ ಚೆಕ್ಪೋಸ್ಟ್ಗಳನ್ನು ಬಂದ್ ಆಗಿವೆ.</p>.<p>ಚೇಳಗುರ್ಕಿ ಕ್ರಾಸ್ನಲ್ಲಿರುವ ಜೋಳದರಾಶಿ ಚೆಕ್ಪೋಸ್ಟ್ನಲ್ಲಿ ಶುಕ್ರವಾರದಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೊರ<br />ರಾಜ್ಯಗಳಿಂದ ಜಿಲ್ಲೆಗೆ ಪಾಸ್ ಜೊತೆಗೆ ಬರುವ ಸ್ಥಳೀಯರ ಆರೋಗ್ಯ ತಪಾಸಣೆ ಮಾಡಿ, ಕಡ್ಡಾಯವಾಗಿ ಸಾಂಸ್ಥಿಕ<br />ಕ್ವಾರಂಟೈನ್ಗೆ ಕಳಿಸಲಾಗುತ್ತಿದೆ. ಚೆಕ್ಪೋಸ್ಟ್ ಬಳಿಕ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈಗಾಗಲೇ 130ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.</p>.<p><strong>ನಿಯಂತ್ರಣವೇ ಸವಾಲು:</strong> ಆಂಧ್ರ ಪ್ರದೇಶ ರಾಜ್ಯದ ಕರ್ನೂಲು ಮತ್ತು ಅನಂತಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿನ ಗಡಿಭಾಗದ ಜನ ಜಿಲ್ಲೆಗೆ ಅಡ್ಡದಾರಿಗಳಿಂದ ಬರುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಒಂದೇ ಚೆಕ್ಪೋಸ್ಟ್ ಮೂಲಕ ಬರುವ ಅವಕಾಶವಿರುವುದರಿಂದ ಸನ್ನಿವೇಶ ಈಗ ಸುಧಾರಿಸಿದೆ.</p>.<p><strong>ಏಳು ತಂಡ, ಮೂರು ಪಾಳಿ</strong><br /><strong>ಬಳ್ಳಾರಿ:</strong> ಚೆಕ್ಪೋಸ್ಟ್ನಲ್ಲಿ ಕಂದಾಯ ಇಲಾಖೆಯ ಏಳು ತಂಡಗಳ 45 ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಎರಡು ತಂಡಗಳ ಹತ್ತು ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರಿಗೂ ಶಾಲೆಯಲ್ಲೇ ಊಟ, ವಸತಿ ಸೌಕರ್ಯವನ್ನು ನೀಡಲಾಗಿದೆ.</p>.<p>ಶನಿವಾರ ಗುಂಟೂರು ಮತ್ತು ಚಿತ್ತೂರಿನಿಂದ ಬಂದ 130 ಮಂದಿಯನ್ನು ಶಾಲೆಯಲ್ಲೇ ಕ್ವಾರಂಟೈನ್ನಲ್ಲಿಡಲಾಗಿದೆ. ಸುಮಾರು 5 ಸಾವಿರ ಮಂದಿ ಜಿಲ್ಲೆಗೆ ವಾಪಸಾಗುವ ನಿರೀಕ್ಷೆ ಇದೆ’ ಎಂದು ಚೆಕ್ಪೋಸ್ಟ್ಗಳ ನೋಡಲ್ ಅಧಿಕಾರಿ ಈರಣ್ಣ ಬಿರಾದಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಕ್ವಾರಂಟೈನ್ಗೆ ಹೆದರಿದ ದಂಪತಿ!</strong><br /><strong>ಬಳ್ಳಾರಿ:</strong> ಚೆಕ್ಪೋಸ್ಟ್ ಸಮೀಪದ ಚಾನಾಳ್ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ಹೋಗಲೆಂದು ಶನಿವಾರ ಬಂದಿದ್ದ ಕರ್ನೂಲ್ ಜಿಲ್ಲೆಯ ಧೋನ್ ಪಟ್ಟಣದ ಮಲ್ಲಪ್ಪ ದಂಪತಿ ವಾಪಸು ಹೋದರು.</p>.<p>ಕಾರಿನಲ್ಲಿ ಆಂಧ್ರದ ಪತ್ರಕರ್ತರೊಬ್ಬರ ಸಹಾಯದೊಂದಿಗೆ ಕಾರಿನಲ್ಲಿ ಬಂದಿದ್ದ ಅವರಿಗೆ ನೋಡಲ್ ಅಧಿಕಾರಿ ಈರಣ್ಣ ಬಿರಾದಾರ್, ‘ಕಡ್ಡಾಯವಾಗಿ 14 ದಿನ ಕ್ವಾರಂಟೈನ್ಗೆ ಕಳಿಸಲಾಗುವುದು. ಅದಕ್ಕೆ ಒಪ್ಪಿಗೆ ಇದ್ದರೆ ಮಾತ್ರ ಬನ್ನಿ’ ಎಂದು ಸ್ಪಷ್ಟಪಡಿಸಿದ್ದರು.</p>.<p>‘ಕ್ವಾರಂಟೈನ್ಗೆ ಕಳಿಸಬೇಡಿ’ ಎಂದು ದಂಪತಿ ಕೈಮುಗಿದು ಪರಿಪರಿಯಾಗಿ ಕೇಳಿದರೂ ಒಪ್ಪಲಿಲ್ಲ. ಹೀಗಾಗಿ‘ಕ್ವಾರಂಟೈನ್ ಬೇಡ. ನಾವು ನಮ್ಮೂರಿಗೆ ವಾಪಸು ಹೋಗುತ್ತೇವೆ’ ಎಂದು ದಂಪತಿ ಅಲ್ಲಿಂದ ತೆರಳಿದರು.</p>.<p>*<br />ಹೊರರಾಜ್ಯಗಳಿಂದ ಬರುವವರೆಲ್ಲರ ಆರೋಗ್ಯ ತಪಾಸಣೆ ಮಾಡಿ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿಡಲಾಗುತ್ತಿದೆ.<br /><em><strong>-ಈರಣ್ಣ ಬಿರಾದಾರ್, ಚೆಕ್ಪೋಸ್ಟ್ ನೋಡಲ್ ಅಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>