ಬಳ್ಳಾರಿ ವಿಮಾನ ನಿಲ್ದಾಣ ಕರ್ನಾಟಕದ ಮೊಟ್ಟಮೊದಲ ವಿಮಾನ ನಿಲ್ದಾಣ. ಬ್ರಿಟಿಷ್ ಆಳ್ವಿಕೆಯಲ್ಲಿ ಬಳ್ಳಾರಿಗೆ ವ್ಯೂಹಾತ್ಮಕ (ಸ್ಟ್ರ್ಯಾಟಜಿಕಲ್ ಪಾಯಿಂಟ್) ಪ್ರಾಮುಖ್ಯತೆ ಇತ್ತು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬಳ್ಳಾರಿಯ ವಿಮಾನ ನಿಲ್ದಾಣ ಏರ್ ಸ್ಟ್ರಿಪ್ ಆಗಿ ಕಾರ್ಯನಿರ್ವಹಿಸಿತ್ತು. 1932ರಲ್ಲಿ ಉದ್ಯಮಿ ಜೆ.ಆರ್.ಡಿ ಟಾಟಾ ಅವರು ಲಾಹೋರ್-ಬಾಂಬೆ-ಬಳ್ಳಾರಿ ಮೂಲಕ ಮದ್ರಾಸ್ಗೆ ವೈಮಾನಿಕ ಯಾನ ಕೈಗೊಂಡಿದ್ದರು. ಜಿಂದಾಲ್ ವಿಮಾನ ನಿಲ್ದಾಣಕ್ಕೆ ಅನುಮತಿ ಸಿಕ್ಕ ಬಳಿಕ ಬಳ್ಳಾರಿ ವಿಮಾನ ನಿಲ್ದಾಣ ತನ್ನ ಮಹತ್ವವನ್ನು ಕಳೆದುಕೊಂಡಿದೆ. ಟಾಟಾ ಏರ್ಲೈನ್ಸ್ ಮತ್ತು ವಾಯುದೂತ್ ವಿಮಾನಗಳು ಇಲ್ಲಿ ಸೇವೆ ನೀಡಿವೆ.
ಏನು ಹೇಳಿದ್ದಾರೆ ವೆಂಕಟ್ನಾಗ್?:
1931ರಲ್ಲಿ ಸ್ಥಾಪನೆಯಾದ ಬಳ್ಳಾರಿಯ ಹಳೆಯ ವಿಮಾನ ನಿಲ್ದಾಣವು ಭಾರತದ ಮೊದಲ ನಾಗರಿಕ ವಿಮಾನ ಯಾನಕ್ಕೆ ಸಾಕ್ಷಿಯಾಗಿತ್ತು. ಉದ್ಯಮಿ ಜೆ. ಆರ್. ಡಿ ಟಾಟಾ ಅವರು ಲಾಹೋರ್-ಬಾಂಬೆ-ಬಳ್ಳಾರಿ ಮೂಲಕ ಮದ್ರಾಸ್ಗೆ ವೈಮಾನಿಕ ಯಾನ ಕೈಗೊಂಡಿದ್ದರು. ಐತಿಹಾಸಿಕ ವಿಮಾನ ನಿಲ್ದಾಣವನ್ನು ಇಂದು ಕೇವಲ ವಾಯು ಸಂಚಾರ ನಿಯಂತ್ರಣಕ್ಕಾಗಿ ಬಳಸಲಾಗುತ್ತಿದೆ. ವಿಮಾನ ನಿಲ್ದಾಣದ ರನ್ ವೇ ಚಿಕ್ಕದಾಗಿದ್ದರೂ ಸಿಂಗಲ್ ಇಂಜಿನ್ ಜೆಟ್ಗಳ ಹಾರಾಟಕ್ಕೆ ಬಳಸಿಕೊಳ್ಳಬಹುದಾಗಿದೆ. ಭಾರತೀಯ ವಾಯುಯಾನ ಕ್ಷೇತ್ರದ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಈ ವಿಮಾನ ನಿಲ್ದಾಣವನ್ನು ಪೈಲಟ್ ತರಬೇತಿ ಶಾಲೆಯಾಗಿ ಮಾಡಲು ಅವಕಾಶವಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.