<p><strong>ಬಳ್ಳಾರಿ:</strong> ಮೃತರ ಹೆಸರಿನಲ್ಲಿರುವ ಕೃಷಿ ಜಮೀನುಗಳನ್ನು ಅವರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಮಾಡುವ ಇ–ಪೌತಿ ಖಾತೆ ಆಂದೋಲನಕ್ಕೆ ವೇಗ ನೀಡಲು ಮುಂದಾಗಿರುವ ಬಳ್ಳಾರಿ ಜಿಲ್ಲಾಡಳಿತ ಗ್ರಾಮಗಳ ದತ್ತು ಕಲ್ಪನೆಯನ್ನು ಪರಿಚಯಿಸಿದೆ. </p>.<p>ಜಿಲ್ಲೆಯಲ್ಲಿ ಜಮೀನು ದಾಖಲೆಗಳಿಗೆ ಆಧಾರ್ ಸಂಖ್ಯೆ ಹೊಂದಿಸಿದಾಗ (ಆಧಾರ್ ಸೀಡಿಂಗ್) 43,737 ಸ್ವತ್ತುಗಳು ಮೃತರ ಹೆಸರುಗಳಲ್ಲಿರುವುದು ಕಂಡು ಬಂದಿತ್ತು. ಇದು ಬಳ್ಳಾರಿ ಜಿಲ್ಲೆಯ ಸಂಖ್ಯೆಯಾದರೆ ರಾಜ್ಯದಲ್ಲಿ 4,13,8147 ಸ್ವತ್ತುಗಳು ಮೃತರ ಹೆಸರಲ್ಲಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇ–ಪೌತಿ ಖಾತೆ ಆಂದೋನ ನಡೆಸುವಂತೆ ಸರ್ಕಾರ 2024ರಲ್ಲಿ ಆದೇಶ ಹೊರಡಿಸಿತು.</p>.<p>ಎಲ್ಲ ಜಿಲ್ಲೆಗಳಲ್ಲೂ ಅತ್ಯಂತ ಕಟ್ಟುನಿಟ್ಟಾಗಿ ಆಂದೋಲನ ಕೈಗೊಳ್ಳಲಾಗಿದೆ. ಬಳ್ಳಾರಿಯಲ್ಲೂ ಅಂದೋಲನ ನಡೆಸಲಾಗುತ್ತಿದೆ. ಆದರೂ ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿಯಾನ ಹಲವು ಕಡೆಗಳಲ್ಲಿ ಕುಂಟುತ್ತಿದೆ. </p>.<p>ನಿಗದಿತ ಗುರಿ ತಲುಪವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿದ ಬಳ್ಳಾರಿ ಜಿಲ್ಲಾಧಿಕಾರಿ (ಡಿಸಿ), ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ), ಎಲ್ಲಿ ಆಭಿಯಾನ ಕುಂಟುತ್ತಿದೆಯೋ ಅದೇ ಹಳ್ಳಿಗಳನ್ನು ದತ್ತು ಪಡೆದು ಇ–ಪೌತಿ ಖಾತೆ ಆಂದೋಲನಕ್ಕೆ ವೇಗ ನೀಡಿದ್ದಾರೆ. </p>.<p><strong>ಯಾವ ಹಳ್ಳಿಗಳು ದತ್ತು:</strong> ಬಳ್ಳಾರಿ ತಾಲ್ಲೂಕಿನ ಮೋಕ, ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು, ಕುರುಗೋಡು ತಾಲ್ಲೂಕಿನ ದಮ್ಮೂರು, ಕೋಳೂರು, ಸಂಡೂರು ತಾಲ್ಲೂಕಿನ ದರೋಜಿ, ಸಿರುಗುಪ್ಪ ತಾಲ್ಲೂಕಿನ ಉಪ್ಪಾರ ಹೊಸಹಳ್ಳಿ, ಸಿರಿಗೇರಿ ಗ್ರಾಮಗಳನ್ನು ಇಬ್ಬರೂ ಅಧಿಕಾರಿಗಳು ದತ್ತು ಪಡೆದಿದ್ದಾರೆ. </p>.<p><strong>ಏನು ಮಾಡಬೇಕು:</strong> ಯಾವ ಜಮೀನುಗಳು ಮೃತರ ಹೆಸರಿನಲ್ಲಿದೆಯೋ ಅವರ ಕುಟುಂಬಸ್ಥರು ಇ–ಪೌತಿ ಖಾತೆ ಆಂದೋಲನದಲ್ಲಿ ಒಂದು ಅರ್ಜಿ ನೀಡಿದರೂ ಸಾಕು, ಲಭ್ಯ ದಾಖಲೆಗಳು, ಲಭ್ಯವಿಲ್ಲದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿರುವ ದಾಖಲೆಗಳನ್ನು ಸೃಜಿಸಿ ಜಿಲ್ಲಾಡಳಿತ ಹೆಸರು ಬದಲಾವಣೆ ಮಾಡಿ ಕೊಡುತ್ತದೆ. </p>.<p>ವಂಶವೃಕ್ಷ, ಮರಣ ಪ್ರಮಾಣ ಪತ್ರಗಳನ್ನು ಸ್ಥಳೀಯ ಮಟ್ಟದ ಅಧಿಕಾರಿಗಳೇ ಮುಂದೆ ನಿಂತು ಮಾಡಿಸಿಕೊಡುತ್ತಾರೆ. ಮರಣ ಪ್ರಮಾಣ ಪತ್ರ ಲಭ್ಯವಾಗದೇ ಹೋದರೆ ಸ್ಥಳೀಯ ಅಧಿಕಾರಿಗಳು ಪಂಚನಾಮೆ ನಡೆಸಿ, ದಾಖಲೆ ಒದಗಿಸಿ ಕೊಡಲಿದ್ದಾರೆ. </p>.<p><strong>ಏನು ಉಪಯೋಗ:</strong> ಜಮೀನು ಮೃತರ ಹೆಸರಿನಲ್ಲೇ ಇದ್ದರೆ ಮಾರಾಟ, ಖರೀದಿ, ಸಾಲ, ಕೃಷಿ ನಷ್ಟ ಪರಿಹಾರ ಪಡೆಯುವುದು ಅಸಾಧ್ಯ. ಒಂದು ಬಾರಿ ಖಾತೆ ಬದಲಾವಣೆಯಾದರೆ, ಈ ಕೆಲಸಗಳೆಲ್ಲವೂ ಸಲೀಸಲಾಗಲಿದೆ. </p>.<p>ಖಾತೆ ಬದಲಾವಣೆ ಮಾಡುವಾಗ ವಂಶವೃಕ್ಷದಲ್ಲಿನ ಪ್ರತಿಯೊಬ್ಬ ಸದಸ್ಯರ ಇ–ಕೆವೈಸಿ ಮಾಡಲಾಗುತ್ತದೆ. ಪ್ರತಿಯೊಬ್ಬರಿಂದಲೂ ಒಟಿಪಿ ಪಡೆದು ನಮೂದು ಮಾಡಲಾಗುತ್ತದೆ. ಹೆಣ್ಣುಮಕ್ಕಳನ್ನು ಆಸ್ತಿ ಹಕ್ಕಿನಿಂದ ಹೊರಗಿಡುವ ಹುನ್ನಾರಗಳು ಇದರಿಂದ ತಪ್ಪುತ್ತವೆ. ಅವರ ಆಸ್ತಿ ಹಕ್ಕು ರಕ್ಷಣೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಇನ್ನೊಂದು ಕಡೆ, ಜಿಲ್ಲಾಡಳಿತವೇ ಇ–ಪೌತಿ ಖಾತೆ ಅಭಿಯಾನ ಮಾಡುತ್ತಿರುವುದರಿಂದ ರೈತರು ಪ್ರತ್ಯೇಕವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅನಿವಾರ್ಯತೆ ದೂರವಾಗಿದೆ. ಜತೆಗೆ, ಲಂಚ ನೀಡಬೇಕಾದ ಸಂಕಷ್ಟವೂ ಇಲ್ಲವಾಗಿದೆ. </p>.<div><blockquote>ಇ–ಪೌತಿ ಆಂದೋಲನಕ್ಕೆ ವೇಗ ನೀಡುವುದು ಕೆಳ ಹಂತದ ಅಧಿಕಾರಿಗಳಲ್ಲಿ ಹುರುಪು ತುಂಬುವುದು ಗ್ರಾಮ ದತ್ತು ಕಾರ್ಯಕ್ರಮದ ಉದ್ದೇಶ. ಹೆಸರು ಬದಲಾವಣೆಗೆ ಕಾಯುತ್ತಿರುವ ಕುಟುಂಬಗಳು ಮುಂದೆ ಅರ್ಜಿ ಸಲ್ಲಿಸಿ ಆಂದೋಲನದ ಲಾಭ ಪಡೆಯಬೇಕು. </blockquote><span class="attribution">ಮೊಹಮದ್ ಝುಬೇರ ಹೆಚ್ಚುವರಿ ಜಿಲ್ಲಾಧಿಕಾರಿ ಬಳ್ಳಾರಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಮೃತರ ಹೆಸರಿನಲ್ಲಿರುವ ಕೃಷಿ ಜಮೀನುಗಳನ್ನು ಅವರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಮಾಡುವ ಇ–ಪೌತಿ ಖಾತೆ ಆಂದೋಲನಕ್ಕೆ ವೇಗ ನೀಡಲು ಮುಂದಾಗಿರುವ ಬಳ್ಳಾರಿ ಜಿಲ್ಲಾಡಳಿತ ಗ್ರಾಮಗಳ ದತ್ತು ಕಲ್ಪನೆಯನ್ನು ಪರಿಚಯಿಸಿದೆ. </p>.<p>ಜಿಲ್ಲೆಯಲ್ಲಿ ಜಮೀನು ದಾಖಲೆಗಳಿಗೆ ಆಧಾರ್ ಸಂಖ್ಯೆ ಹೊಂದಿಸಿದಾಗ (ಆಧಾರ್ ಸೀಡಿಂಗ್) 43,737 ಸ್ವತ್ತುಗಳು ಮೃತರ ಹೆಸರುಗಳಲ್ಲಿರುವುದು ಕಂಡು ಬಂದಿತ್ತು. ಇದು ಬಳ್ಳಾರಿ ಜಿಲ್ಲೆಯ ಸಂಖ್ಯೆಯಾದರೆ ರಾಜ್ಯದಲ್ಲಿ 4,13,8147 ಸ್ವತ್ತುಗಳು ಮೃತರ ಹೆಸರಲ್ಲಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇ–ಪೌತಿ ಖಾತೆ ಆಂದೋನ ನಡೆಸುವಂತೆ ಸರ್ಕಾರ 2024ರಲ್ಲಿ ಆದೇಶ ಹೊರಡಿಸಿತು.</p>.<p>ಎಲ್ಲ ಜಿಲ್ಲೆಗಳಲ್ಲೂ ಅತ್ಯಂತ ಕಟ್ಟುನಿಟ್ಟಾಗಿ ಆಂದೋಲನ ಕೈಗೊಳ್ಳಲಾಗಿದೆ. ಬಳ್ಳಾರಿಯಲ್ಲೂ ಅಂದೋಲನ ನಡೆಸಲಾಗುತ್ತಿದೆ. ಆದರೂ ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿಯಾನ ಹಲವು ಕಡೆಗಳಲ್ಲಿ ಕುಂಟುತ್ತಿದೆ. </p>.<p>ನಿಗದಿತ ಗುರಿ ತಲುಪವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿದ ಬಳ್ಳಾರಿ ಜಿಲ್ಲಾಧಿಕಾರಿ (ಡಿಸಿ), ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ), ಎಲ್ಲಿ ಆಭಿಯಾನ ಕುಂಟುತ್ತಿದೆಯೋ ಅದೇ ಹಳ್ಳಿಗಳನ್ನು ದತ್ತು ಪಡೆದು ಇ–ಪೌತಿ ಖಾತೆ ಆಂದೋಲನಕ್ಕೆ ವೇಗ ನೀಡಿದ್ದಾರೆ. </p>.<p><strong>ಯಾವ ಹಳ್ಳಿಗಳು ದತ್ತು:</strong> ಬಳ್ಳಾರಿ ತಾಲ್ಲೂಕಿನ ಮೋಕ, ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು, ಕುರುಗೋಡು ತಾಲ್ಲೂಕಿನ ದಮ್ಮೂರು, ಕೋಳೂರು, ಸಂಡೂರು ತಾಲ್ಲೂಕಿನ ದರೋಜಿ, ಸಿರುಗುಪ್ಪ ತಾಲ್ಲೂಕಿನ ಉಪ್ಪಾರ ಹೊಸಹಳ್ಳಿ, ಸಿರಿಗೇರಿ ಗ್ರಾಮಗಳನ್ನು ಇಬ್ಬರೂ ಅಧಿಕಾರಿಗಳು ದತ್ತು ಪಡೆದಿದ್ದಾರೆ. </p>.<p><strong>ಏನು ಮಾಡಬೇಕು:</strong> ಯಾವ ಜಮೀನುಗಳು ಮೃತರ ಹೆಸರಿನಲ್ಲಿದೆಯೋ ಅವರ ಕುಟುಂಬಸ್ಥರು ಇ–ಪೌತಿ ಖಾತೆ ಆಂದೋಲನದಲ್ಲಿ ಒಂದು ಅರ್ಜಿ ನೀಡಿದರೂ ಸಾಕು, ಲಭ್ಯ ದಾಖಲೆಗಳು, ಲಭ್ಯವಿಲ್ಲದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿರುವ ದಾಖಲೆಗಳನ್ನು ಸೃಜಿಸಿ ಜಿಲ್ಲಾಡಳಿತ ಹೆಸರು ಬದಲಾವಣೆ ಮಾಡಿ ಕೊಡುತ್ತದೆ. </p>.<p>ವಂಶವೃಕ್ಷ, ಮರಣ ಪ್ರಮಾಣ ಪತ್ರಗಳನ್ನು ಸ್ಥಳೀಯ ಮಟ್ಟದ ಅಧಿಕಾರಿಗಳೇ ಮುಂದೆ ನಿಂತು ಮಾಡಿಸಿಕೊಡುತ್ತಾರೆ. ಮರಣ ಪ್ರಮಾಣ ಪತ್ರ ಲಭ್ಯವಾಗದೇ ಹೋದರೆ ಸ್ಥಳೀಯ ಅಧಿಕಾರಿಗಳು ಪಂಚನಾಮೆ ನಡೆಸಿ, ದಾಖಲೆ ಒದಗಿಸಿ ಕೊಡಲಿದ್ದಾರೆ. </p>.<p><strong>ಏನು ಉಪಯೋಗ:</strong> ಜಮೀನು ಮೃತರ ಹೆಸರಿನಲ್ಲೇ ಇದ್ದರೆ ಮಾರಾಟ, ಖರೀದಿ, ಸಾಲ, ಕೃಷಿ ನಷ್ಟ ಪರಿಹಾರ ಪಡೆಯುವುದು ಅಸಾಧ್ಯ. ಒಂದು ಬಾರಿ ಖಾತೆ ಬದಲಾವಣೆಯಾದರೆ, ಈ ಕೆಲಸಗಳೆಲ್ಲವೂ ಸಲೀಸಲಾಗಲಿದೆ. </p>.<p>ಖಾತೆ ಬದಲಾವಣೆ ಮಾಡುವಾಗ ವಂಶವೃಕ್ಷದಲ್ಲಿನ ಪ್ರತಿಯೊಬ್ಬ ಸದಸ್ಯರ ಇ–ಕೆವೈಸಿ ಮಾಡಲಾಗುತ್ತದೆ. ಪ್ರತಿಯೊಬ್ಬರಿಂದಲೂ ಒಟಿಪಿ ಪಡೆದು ನಮೂದು ಮಾಡಲಾಗುತ್ತದೆ. ಹೆಣ್ಣುಮಕ್ಕಳನ್ನು ಆಸ್ತಿ ಹಕ್ಕಿನಿಂದ ಹೊರಗಿಡುವ ಹುನ್ನಾರಗಳು ಇದರಿಂದ ತಪ್ಪುತ್ತವೆ. ಅವರ ಆಸ್ತಿ ಹಕ್ಕು ರಕ್ಷಣೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಇನ್ನೊಂದು ಕಡೆ, ಜಿಲ್ಲಾಡಳಿತವೇ ಇ–ಪೌತಿ ಖಾತೆ ಅಭಿಯಾನ ಮಾಡುತ್ತಿರುವುದರಿಂದ ರೈತರು ಪ್ರತ್ಯೇಕವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅನಿವಾರ್ಯತೆ ದೂರವಾಗಿದೆ. ಜತೆಗೆ, ಲಂಚ ನೀಡಬೇಕಾದ ಸಂಕಷ್ಟವೂ ಇಲ್ಲವಾಗಿದೆ. </p>.<div><blockquote>ಇ–ಪೌತಿ ಆಂದೋಲನಕ್ಕೆ ವೇಗ ನೀಡುವುದು ಕೆಳ ಹಂತದ ಅಧಿಕಾರಿಗಳಲ್ಲಿ ಹುರುಪು ತುಂಬುವುದು ಗ್ರಾಮ ದತ್ತು ಕಾರ್ಯಕ್ರಮದ ಉದ್ದೇಶ. ಹೆಸರು ಬದಲಾವಣೆಗೆ ಕಾಯುತ್ತಿರುವ ಕುಟುಂಬಗಳು ಮುಂದೆ ಅರ್ಜಿ ಸಲ್ಲಿಸಿ ಆಂದೋಲನದ ಲಾಭ ಪಡೆಯಬೇಕು. </blockquote><span class="attribution">ಮೊಹಮದ್ ಝುಬೇರ ಹೆಚ್ಚುವರಿ ಜಿಲ್ಲಾಧಿಕಾರಿ ಬಳ್ಳಾರಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>