ಸರಪಳಿ ಪವಾಡ: ಸೋಮವಾರ ಸಂಜೆ ನಡೆದ ಸರಪಳಿ ಪವಾಡದ ಅಂಗವಾಗಿ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಸಲಾಯಿತು. ನಂತರ ಬೂದುಗುಪ್ಪ ಗ್ರಾಮದ ರಾಘವೇಂದ್ರ ರೆಡ್ಡಿ, ತೆಕ್ಕಲಕೋಟೆಯ ಲಿಂಗನಗೌಡ ಸರಪಳಿ ಹರಿದರು. ಸಾವಿರಾರು ಭಕ್ತರು ಸರಪಳಿ ಪವಾಡಕ್ಕೆ ಸಾಕ್ಷಿಯಾದರು. ‘ಚಾಂಗ್ ಭಲೋ, ಚಾಂಗ್ ಭಲೋ ಮಲ್ಲಯ್ಯ’ ಎಂದು ಘೋಷಣೆ ಕೂಗಿದರು.