ಕೆಲ ದಿನಗಳಲ್ಲಿ ನದಿಯ ಆಳದಿಂದ ಮರಳನ್ನು ತೆಗೆದು ತೆಪ್ಪಗಳಲ್ಲಿ ತುಂಬಿ ಅಕ್ರಮವಾಗಿ ಸಾಗಿಸಲಾಗುತಿತ್ತು. ಖಚಿತ ಮಾಹಿತಿ ಮೇರೆಗೆ ಹಿರೇಹಡಗಲಿ ಪೊಲೀಸರು ದಾಳಿ ನಡೆಸುತ್ತಿದ್ದಂತೆ ದಂಧೆಕೋರರು ತೆಪ್ಪಗಳನ್ನು ನದಿ ತೀರದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅಂದಾಜು ₹ 20 ಸಾವಿರ ಬೆಲೆಯ ಎರಡು ಕಬ್ಬಿಣದ ತೆಪ್ಪಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.