ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಂಬಂಧಿ ಯರ್ರಿಸ್ವಾಮಿ ಅವರ ಕಂಟೋನ್ಮೆಂಟ್ ಪ್ರದೇಶದ ಮನೆ, ನಗರದ ಗಾಂಧೀನಗರದಲ್ಲಿರುವ ಕೆಪಿಸಿಸಿ ಉಪಾಧ್ಯಕ್ಷ ಎನ್.ಸೂರ್ಯ ನಾರಾಯಣರೆಡ್ಡಿ ಅವರ ಕಚೇರಿ ಹಾಗೂ ನೆಹರು ಕಾಲೊನಿಯಲ್ಲಿರುವ ಮನೆ, ತಾಳೂರು ರಸ್ತೆಯಲ್ಲಿರುವ, ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಆಪ್ತ ನರಸಿಂಹ ರೆಡ್ಡಿ ಅವರ ಮನೆ ಮತ್ತು ಶಾಸಕ ಬಿ.ಶ್ರೀರಾಮುಲು ಆಪ್ತ ಸಹಾಯಕ ರಾಜು ಅವರ ಅಹಂಬಾವಿ ಪ್ರದೇಶದ ಮನೆಗೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದರು.