ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿಯಲ್ಲಿ ನಾಲ್ಕು ಕಡೆ ಐ.ಟಿ‌ ದಾಳಿ

Published : 21 ಏಪ್ರಿಲ್ 2019, 10:06 IST
ಫಾಲೋ ಮಾಡಿ
Comments

ಬಳ್ಳಾರಿ:ನಗರದಲ್ಲಿ ಭಾನುವಾರ ಕಾಂಗ್ರೆಸ್ಸಿನ ಇಬ್ಬರು ಹಾಗೂ ‌ಬಿಜೆಪಿ ಇಬ್ಬರು ಮುಖಂಡರ ಮನೆ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ‌ ಇಲಾಖೆ ಅಧಿಕಾರಿಗಳು ದಾಳಿ ಕಾರ್ಯಾಚರಣೆ ನಡೆಸಿದರು.

‌ಗ್ರಾಮೀಣ ಶಾಸಕ‌ ಬಿ.ನಾಗೇಂದ್ರ ಸಂಬಂಧಿ ಯರ್ರಿಸ್ವಾಮಿ ಅವರ ಕಂಟೋನ್ಮೆಂಟ್ ಪ್ರದೇಶದ‌ ಮನೆ, ನಗರದ ಗಾಂಧೀನಗರದಲ್ಲಿರುವ ಕೆಪಿಸಿಸಿ ಉಪಾಧ್ಯಕ್ಷ ಎನ್‌.ಸೂರ್ಯ ನಾರಾಯಣರೆಡ್ಡಿ ಅವರ ಕಚೇರಿ ಹಾಗೂ ನೆಹರು ಕಾಲೊನಿಯಲ್ಲಿರುವ ಮನೆ, ತಾಳೂರು ರಸ್ತೆಯಲ್ಲಿರುವ, ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಆಪ್ತ ನರಸಿಂಹ ರೆಡ್ಡಿ ಅವರ ಮನೆ ಮತ್ತು ಶಾಸಕ ಬಿ.ಶ್ರೀರಾಮುಲು ಆಪ್ತ ಸಹಾಯಕ ‌ರಾಜು ಅವರ ಅಹಂಬಾವಿ‌ ಪ್ರದೇಶದ ‌ಮನೆಗೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಈ ಅಧಿಕಾರಿಗಳೊಂದಿಗೆ ಚುನಾವಣೆ ಕಾರ್ಯಕ್ಕೆ‌ ನಿಯೋಜಿತರಾದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT