<p><strong>ಕುಡತಿನಿ (ಸಂಡೂರು):</strong> ‘ಕಮ್ಮ ಸಮುದಾಯದ ಜನರು ಶ್ರಮಜೀವಿಗಳಾಗಿದ್ದು, ಭೂಮಿತಾಯಿ ನಂಬಿ ಹಗಲಿರುಳು ಶ್ರಮವಹಿಸಿ ವ್ಯವಸಾಯ ಮಾಡುವ ಮೂಲಕ ಶ್ರೇಷ್ಠ ಜೀವನ ಸಾಗಿಸುತ್ತಿದ್ದಾರೆ’ ಎಂದು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಹೇಳಿದರು.</p>.<p>ಪಟ್ಟಣದ ಕುರುಗೋಡು ರಸ್ತೆಯಲ್ಲಿ ಕಮ್ಮ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ₹5.5ಕೋಟಿ ವೆಚ್ಚದ ಕಮ್ಮ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ, ಕಾರ್ತೀಕ ಮಾಸದ ವನ ಭೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ನಮ್ಮ ನೆಲ, ಜಲ, ಭಾಷೆಯನ್ನು ಮರೆಯಬಾರದು. ರಾಜ್ಯದ ಪ್ರತಿಯೊಬ್ಬರೂ ಕನ್ನಡಾಂಬೆಯ ಋಣ ತೀರಿಸಬೇಕು. ನಮ್ಮ ಭಾಷೆ, ಉಸಿರು ಕನ್ನಡ ಆಗಿರಬೇಕು. ಕಮ್ಮ ಭವನ ನಿರ್ಮಾಣಕ್ಕೆ ನನ್ನ ಸಹಕಾರವೂ ಇದ್ದು, ಇದು ಸಾಂಸ್ಕೃತಿಕ ಕಟ್ಟಡವಾಗಲಿ’ ಎಂದರು.</p>.<p>ಕುಡತಿನಿ ಸೇರಿದಂತೆ ಸುತ್ತಲಿನ ಎಲ್ಲ ಗ್ರಾಮಗಳ ಕಮ್ಮ ಸಮಾಜದ ಜನರು ತಮ್ಮ ಕುಟುಂಬದ ಸದಸ್ಯರೊಂದಿಗೆ ವನ ಭೋಜನ ಸವಿದರು.</p>.<p>ಕಮ್ಮ ಸಂಘದ ಗೌರವಾಧ್ಯಕ್ಷ ವೆಂಕಟರಮಣಪ್ಪ, ಉಪಾಧ್ಯಕ್ಷ ಮುಲ್ಲಂಗಿ ಆದೆಪ್ಪ, ಕಾರ್ಯದರ್ಶಿ ಹೆರೇಂದ್ರ ಪ್ರಸಾದ್, ವಿ. ರಾಜಶೇಖರ್, ಸುಜಾತ ಸತ್ಯಪ್ಪ, ಮುಖಂಡರಾದ ಮುಲ್ಲಂಗಿ ರವಿಂದ್ರಬಾಬು, ನಂದೀಶ್, ಕೋನಂಕಿ ರಾಮಪ್ಪ, ವಿಕ್ಕಿ, ಸುಧೀರ್, ರಾಜೇಶ್ವರಿ ಇದ್ದರು.</p>.<p> <strong>‘ಭವನಕ್ಕೆ ₹1 ಕೋಟಿ ಅನುದಾನ’</strong></p><p> ‘ಕಮ್ಮ ಸಮುದಾಯದವರು ಹೃದಯ ಶ್ರೀಮಂತಿಕೆ ಉಳ್ಳವರು. ಕ್ಷೇತ್ರದಲ್ಲಿನ ಕಮ್ಮ ಸಮುದಾಯದವರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಮ್ಮ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ನೀಡಲಾಗುವುದು. ಈ ಭವನವು ಮಹಿಳಾ ಶಕ್ತಿ ಕೇಂದ್ರವಾಗುವುದರ ಜೊತೆಗೆ ಸಾಮಾಜಿಕ ಶೈಕ್ಷಣಿಕ ಕೌಶಲ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಬೇಕು’ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಆಶಿಸಿದರು.</p>.<div><blockquote>ರಾಜ್ಯದಲ್ಲಿ ಕಮ್ಮ ಸಮುದಾಯದ ಸುಮಾರು 40 ಲಕ್ಷ ಜನರಿದ್ದು ಅವರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ನಿಗಮವನ್ನು ಶೀಘ್ರ ಸ್ಥಾಪಿಸಬೇಕು </blockquote><span class="attribution">–ವಿ. ರಾಮು ಕಮ್ಮ ಸಂಘದ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಡತಿನಿ (ಸಂಡೂರು):</strong> ‘ಕಮ್ಮ ಸಮುದಾಯದ ಜನರು ಶ್ರಮಜೀವಿಗಳಾಗಿದ್ದು, ಭೂಮಿತಾಯಿ ನಂಬಿ ಹಗಲಿರುಳು ಶ್ರಮವಹಿಸಿ ವ್ಯವಸಾಯ ಮಾಡುವ ಮೂಲಕ ಶ್ರೇಷ್ಠ ಜೀವನ ಸಾಗಿಸುತ್ತಿದ್ದಾರೆ’ ಎಂದು ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಹೇಳಿದರು.</p>.<p>ಪಟ್ಟಣದ ಕುರುಗೋಡು ರಸ್ತೆಯಲ್ಲಿ ಕಮ್ಮ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ₹5.5ಕೋಟಿ ವೆಚ್ಚದ ಕಮ್ಮ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ, ಕಾರ್ತೀಕ ಮಾಸದ ವನ ಭೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ನಮ್ಮ ನೆಲ, ಜಲ, ಭಾಷೆಯನ್ನು ಮರೆಯಬಾರದು. ರಾಜ್ಯದ ಪ್ರತಿಯೊಬ್ಬರೂ ಕನ್ನಡಾಂಬೆಯ ಋಣ ತೀರಿಸಬೇಕು. ನಮ್ಮ ಭಾಷೆ, ಉಸಿರು ಕನ್ನಡ ಆಗಿರಬೇಕು. ಕಮ್ಮ ಭವನ ನಿರ್ಮಾಣಕ್ಕೆ ನನ್ನ ಸಹಕಾರವೂ ಇದ್ದು, ಇದು ಸಾಂಸ್ಕೃತಿಕ ಕಟ್ಟಡವಾಗಲಿ’ ಎಂದರು.</p>.<p>ಕುಡತಿನಿ ಸೇರಿದಂತೆ ಸುತ್ತಲಿನ ಎಲ್ಲ ಗ್ರಾಮಗಳ ಕಮ್ಮ ಸಮಾಜದ ಜನರು ತಮ್ಮ ಕುಟುಂಬದ ಸದಸ್ಯರೊಂದಿಗೆ ವನ ಭೋಜನ ಸವಿದರು.</p>.<p>ಕಮ್ಮ ಸಂಘದ ಗೌರವಾಧ್ಯಕ್ಷ ವೆಂಕಟರಮಣಪ್ಪ, ಉಪಾಧ್ಯಕ್ಷ ಮುಲ್ಲಂಗಿ ಆದೆಪ್ಪ, ಕಾರ್ಯದರ್ಶಿ ಹೆರೇಂದ್ರ ಪ್ರಸಾದ್, ವಿ. ರಾಜಶೇಖರ್, ಸುಜಾತ ಸತ್ಯಪ್ಪ, ಮುಖಂಡರಾದ ಮುಲ್ಲಂಗಿ ರವಿಂದ್ರಬಾಬು, ನಂದೀಶ್, ಕೋನಂಕಿ ರಾಮಪ್ಪ, ವಿಕ್ಕಿ, ಸುಧೀರ್, ರಾಜೇಶ್ವರಿ ಇದ್ದರು.</p>.<p> <strong>‘ಭವನಕ್ಕೆ ₹1 ಕೋಟಿ ಅನುದಾನ’</strong></p><p> ‘ಕಮ್ಮ ಸಮುದಾಯದವರು ಹೃದಯ ಶ್ರೀಮಂತಿಕೆ ಉಳ್ಳವರು. ಕ್ಷೇತ್ರದಲ್ಲಿನ ಕಮ್ಮ ಸಮುದಾಯದವರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಮ್ಮ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ನೀಡಲಾಗುವುದು. ಈ ಭವನವು ಮಹಿಳಾ ಶಕ್ತಿ ಕೇಂದ್ರವಾಗುವುದರ ಜೊತೆಗೆ ಸಾಮಾಜಿಕ ಶೈಕ್ಷಣಿಕ ಕೌಶಲ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಬೇಕು’ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಆಶಿಸಿದರು.</p>.<div><blockquote>ರಾಜ್ಯದಲ್ಲಿ ಕಮ್ಮ ಸಮುದಾಯದ ಸುಮಾರು 40 ಲಕ್ಷ ಜನರಿದ್ದು ಅವರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ನಿಗಮವನ್ನು ಶೀಘ್ರ ಸ್ಥಾಪಿಸಬೇಕು </blockquote><span class="attribution">–ವಿ. ರಾಮು ಕಮ್ಮ ಸಂಘದ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>