‘ಕವಿರಾಜ್ ಅವರು ಅನುಮತಿ ಪಡೆಯದೇ ಫ್ಲೆಕ್ಸ್ಗಳನ್ನು ಹಾಕಿಸಿದ್ದರು. ಅದು ಕೂಡ ಪ್ಲಾಸ್ಟಿಕ್ ಮೇಲೆ. ಅದನ್ನು ನಮ್ಮ ಸಿಬ್ಬಂದಿ ತೆಗೆಯಲು ಹೋಗಿದ್ದರು. ಈ ವೇಳೆ ಕವಿರಾಜ್ ಅವರು ಬಂದು ತಡೆಯಲು ಪ್ರಯತ್ನಿಸಿದ್ದರು. ಅವರಿಗೆ ವಿಷಯ ಮನವರಿಕೆ ಮಾಡಿಕೊಟ್ಟು. ಈ ಸಲ ಏನೋ ಹಾಕಿದ್ದೀರಿ. ಮುಂದೆ ಈ ರೀತಿ ಆಗದಂತೆ ನಡೆದುಕೊಳ್ಳಬೇಕು ಎಂದು ಹೇಳಿ ಸಮಾಧಾನ ಪಡಿಸಿ ಕಳುಹಿಸಲಾಯಿತು’ ಎಂದು ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.