<p><strong>ಹೊಸಪೇಟೆ: </strong>ಅನುಮತಿಯಿಲ್ಲದೆ ಹೊಸ ವರ್ಷದ ಶುಭಕೋರುವ ಫ್ಲೆಕ್ಸ್ಗಳನ್ನು ತೆರವುಗೊಳಿಸಲು ಮುಂದಾದ ನಗರಸಭೆಯ ಆರೋಗ್ಯ ಅಧಿಕಾರಿ ವೆಂಕಟೇಶ್ ಅವರಿಗೆ ಮುಖಂಡ ಕವಿರಾಜ್ ಅರಸ್ ಅವರು ಬುಧವಾರ ನಗರದಲ್ಲಿ ಜೋರು ಧ್ವನಿಯಲ್ಲಿ ಆವಾಜ್ ಹಾಕಿದರು.</p>.<p>‘ಇಡೀ ಊರಲ್ಲಿ ಯಾರ್ಯಾರೋ ಫ್ಲೆಕ್ಸ್ ಹಾಕುತ್ತಾರೆ. ನಾನು ಹಾಕಿಸಿದರೆ ನಿಮಗೇನೂ ತೊಂದರೆ. ದೇವರಾಣೆ ನಾನು ನಗರಸಭೆ ಕಚೇರಿಗೆ ಬಂದರೆ ಬೆಂಕಿ ಹತ್ಕೊಳ್ಳುತ್ತೆ. ಅಧಿಕಾರಿಗಳು ಈ ರೀತಿ ಮಾಡುತ್ತಿರುವುದು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.</p>.<p>‘ಕವಿರಾಜ್ ಅವರು ಅನುಮತಿ ಪಡೆಯದೇ ಫ್ಲೆಕ್ಸ್ಗಳನ್ನು ಹಾಕಿಸಿದ್ದರು. ಅದು ಕೂಡ ಪ್ಲಾಸ್ಟಿಕ್ ಮೇಲೆ. ಅದನ್ನು ನಮ್ಮ ಸಿಬ್ಬಂದಿ ತೆಗೆಯಲು ಹೋಗಿದ್ದರು. ಈ ವೇಳೆ ಕವಿರಾಜ್ ಅವರು ಬಂದು ತಡೆಯಲು ಪ್ರಯತ್ನಿಸಿದ್ದರು. ಅವರಿಗೆ ವಿಷಯ ಮನವರಿಕೆ ಮಾಡಿಕೊಟ್ಟು. ಈ ಸಲ ಏನೋ ಹಾಕಿದ್ದೀರಿ. ಮುಂದೆ ಈ ರೀತಿ ಆಗದಂತೆ ನಡೆದುಕೊಳ್ಳಬೇಕು ಎಂದು ಹೇಳಿ ಸಮಾಧಾನ ಪಡಿಸಿ ಕಳುಹಿಸಲಾಯಿತು’ ಎಂದು ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ಅನುಮತಿಯಿಲ್ಲದೆ ಹೊಸ ವರ್ಷದ ಶುಭಕೋರುವ ಫ್ಲೆಕ್ಸ್ಗಳನ್ನು ತೆರವುಗೊಳಿಸಲು ಮುಂದಾದ ನಗರಸಭೆಯ ಆರೋಗ್ಯ ಅಧಿಕಾರಿ ವೆಂಕಟೇಶ್ ಅವರಿಗೆ ಮುಖಂಡ ಕವಿರಾಜ್ ಅರಸ್ ಅವರು ಬುಧವಾರ ನಗರದಲ್ಲಿ ಜೋರು ಧ್ವನಿಯಲ್ಲಿ ಆವಾಜ್ ಹಾಕಿದರು.</p>.<p>‘ಇಡೀ ಊರಲ್ಲಿ ಯಾರ್ಯಾರೋ ಫ್ಲೆಕ್ಸ್ ಹಾಕುತ್ತಾರೆ. ನಾನು ಹಾಕಿಸಿದರೆ ನಿಮಗೇನೂ ತೊಂದರೆ. ದೇವರಾಣೆ ನಾನು ನಗರಸಭೆ ಕಚೇರಿಗೆ ಬಂದರೆ ಬೆಂಕಿ ಹತ್ಕೊಳ್ಳುತ್ತೆ. ಅಧಿಕಾರಿಗಳು ಈ ರೀತಿ ಮಾಡುತ್ತಿರುವುದು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.</p>.<p>‘ಕವಿರಾಜ್ ಅವರು ಅನುಮತಿ ಪಡೆಯದೇ ಫ್ಲೆಕ್ಸ್ಗಳನ್ನು ಹಾಕಿಸಿದ್ದರು. ಅದು ಕೂಡ ಪ್ಲಾಸ್ಟಿಕ್ ಮೇಲೆ. ಅದನ್ನು ನಮ್ಮ ಸಿಬ್ಬಂದಿ ತೆಗೆಯಲು ಹೋಗಿದ್ದರು. ಈ ವೇಳೆ ಕವಿರಾಜ್ ಅವರು ಬಂದು ತಡೆಯಲು ಪ್ರಯತ್ನಿಸಿದ್ದರು. ಅವರಿಗೆ ವಿಷಯ ಮನವರಿಕೆ ಮಾಡಿಕೊಟ್ಟು. ಈ ಸಲ ಏನೋ ಹಾಕಿದ್ದೀರಿ. ಮುಂದೆ ಈ ರೀತಿ ಆಗದಂತೆ ನಡೆದುಕೊಳ್ಳಬೇಕು ಎಂದು ಹೇಳಿ ಸಮಾಧಾನ ಪಡಿಸಿ ಕಳುಹಿಸಲಾಯಿತು’ ಎಂದು ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>