<p><strong>ಕುಡತಿನಿ</strong> <strong>(ಸಂಡೂರು):</strong> ಪಟ್ಟಣದ ಹೊರ ವಲಯದಲ್ಲಿನ ಕುಡತಿನಿಯಿಂದ ಕುರುಗೋಡು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಕಚ್ಚಾ ಬೂದಿ ಹಾಕಿದ್ದರಿಂದ ರೈತರ ಎತ್ತಿನಗಾಡಿ, ಬಸ್, ಬೈಕ್, ಆಟೊ ಸೇರಿದಂತೆ ಇತರೆ ವಾಹನಗಳ ಸವಾರರು ನಿತ್ಯ ದೂಳಿನ ಮಜ್ಜನಕ್ಕೆ ಬೇಸತ್ತಿದ್ದಾರೆ.</p>.<p>ರೈಲ್ವೆ ಇಲಾಖೆಯವರು ನೂತನ ರೈಲ್ವೆ ಸೇತುವೆಯ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಸಾರ್ವಜನಿಕರ ನಿತ್ಯದ ಸಂಚಾರಕ್ಕಾಗಿ ರೈಲ್ವೆ ಹಳಿಯ ಪಕ್ಕದಲ್ಲಿ ಪರ್ಯಾಯ ಮಣ್ಣಿನ ರಸ್ತೆಯನ್ನು ನಿರ್ಮಿಸಿಲಾಗಿದ್ದು, ಕೈಗಾರಿಗಳ ಭಾರಿ ವಾಹನಗಳ ಸಂಚಾರದಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ.</p>.<p>ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಗುಣಮಟ್ಟದ ಮಣ್ಣು ಹಾಕುವ ಬದಲು ಕೈಗಾರಿಕೆಯಲ್ಲಿನ ಕಚ್ಚಾ ಬೂದಿಯನ್ನು ಹಾಕಲಾಗಿದೆ. ವಾಹನಗಳ ಸಂಚಾರದಿಂದ ದೂಳು ಹಾರಿ ಎತ್ತಿನ ಗಾಡಿ, ಬೈಕ್, ಇತರೆ ವಾಹನಗಳ ಸವಾರರಿಗೆ ದಾರಿ ಕಾಣದಂತಾಗುತ್ತಿದೆ.</p>.<div><blockquote>ರಸ್ತೆ ಗುಂಡಿಗಳಿಗೆ ಹಾಕಿದ ಕಚ್ಚಾ ಬೂದಿಯನ್ನು ಶೀಘ್ರವಾಗಿ ತೆರವುಗೊಳಿಸಲಾಗುವುದು. ಸಂಬಂಧಪಟ್ಟ ಕೈಗಾರಿಕಾ ಮಾಲೀಕರ ಜತೆ ಚರ್ಚಿಸಿ ಸಮಸ್ಯೆ ಇತ್ಯಾರ್ಥಪಡಿಸಲಾಗುವುದು.</blockquote><span class="attribution">ಮಂಜುನಾಥ ಕುಡತಿನಿ, ಪಟ್ಟಣ ಪಂಚಾಯಿತಿ ಪ್ರಭಾರಿ ಮುಖ್ಯಾಧಿಕಾರಿ</span></div>.<p>ಅತಿಯಾದ ದೂಳು ರಸ್ತೆ ಬದಿಯ ರೈತರ ಜಮೀನುಗಳಲ್ಲಿನ ತೊಗರಿ, ಮೆಕ್ಕೆಜೋಳ, ಹತ್ತಿ, ಕಡಲೆ ಇತರೆ ಬೆಳೆಗಳಿಗೂ ಆವರಿಸಿದ್ದು, ಬೆಳೆ ನಷ್ಟದ ಆತಂಕ ಎದರಾಗಿದೆ. ಈ ಬೂದಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಗರಸು ಮಣ್ಣನ್ನು ಹಾಕುವಂತೆ ಜನರು ಒತ್ತಾಯಿಸಿದ್ದಾರೆ.</p>.<p>‘ರಸ್ತೆಯಲ್ಲಿನ ಗುಂಡಿಗಳಿಗೆ ಕಚ್ಚಾ ಬೂದಿಯನ್ನು ಹಾಕಿರುವುದು ಸರಿಯಲ್ಲ. ರೈತರು, ಕಾರ್ಮಿಕರು ಈ ರಸ್ತೆಯಲ್ಲಿ ಸಂಚಾರ ಮಾಡಲು ನಿತ್ಯ ಪರಿತಪಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗೆ ಹಾಕಿದ ಬೂದಿಯನ್ನು ಶೀಘ್ರವಾಗಿ ತೆರವುಗೊಳಿಸಿ, ಸಮಸ್ಯೆ ಪರಿಹರಿಸಬೇಕು’ ಎಂದು ಕುಡತಿನಿ ಪಟ್ಟಣದ ನಿವಾಸಿ ಎ.ಗಣೇಶ್ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಡತಿನಿ</strong> <strong>(ಸಂಡೂರು):</strong> ಪಟ್ಟಣದ ಹೊರ ವಲಯದಲ್ಲಿನ ಕುಡತಿನಿಯಿಂದ ಕುರುಗೋಡು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಕಚ್ಚಾ ಬೂದಿ ಹಾಕಿದ್ದರಿಂದ ರೈತರ ಎತ್ತಿನಗಾಡಿ, ಬಸ್, ಬೈಕ್, ಆಟೊ ಸೇರಿದಂತೆ ಇತರೆ ವಾಹನಗಳ ಸವಾರರು ನಿತ್ಯ ದೂಳಿನ ಮಜ್ಜನಕ್ಕೆ ಬೇಸತ್ತಿದ್ದಾರೆ.</p>.<p>ರೈಲ್ವೆ ಇಲಾಖೆಯವರು ನೂತನ ರೈಲ್ವೆ ಸೇತುವೆಯ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಸಾರ್ವಜನಿಕರ ನಿತ್ಯದ ಸಂಚಾರಕ್ಕಾಗಿ ರೈಲ್ವೆ ಹಳಿಯ ಪಕ್ಕದಲ್ಲಿ ಪರ್ಯಾಯ ಮಣ್ಣಿನ ರಸ್ತೆಯನ್ನು ನಿರ್ಮಿಸಿಲಾಗಿದ್ದು, ಕೈಗಾರಿಗಳ ಭಾರಿ ವಾಹನಗಳ ಸಂಚಾರದಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ.</p>.<p>ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಗುಣಮಟ್ಟದ ಮಣ್ಣು ಹಾಕುವ ಬದಲು ಕೈಗಾರಿಕೆಯಲ್ಲಿನ ಕಚ್ಚಾ ಬೂದಿಯನ್ನು ಹಾಕಲಾಗಿದೆ. ವಾಹನಗಳ ಸಂಚಾರದಿಂದ ದೂಳು ಹಾರಿ ಎತ್ತಿನ ಗಾಡಿ, ಬೈಕ್, ಇತರೆ ವಾಹನಗಳ ಸವಾರರಿಗೆ ದಾರಿ ಕಾಣದಂತಾಗುತ್ತಿದೆ.</p>.<div><blockquote>ರಸ್ತೆ ಗುಂಡಿಗಳಿಗೆ ಹಾಕಿದ ಕಚ್ಚಾ ಬೂದಿಯನ್ನು ಶೀಘ್ರವಾಗಿ ತೆರವುಗೊಳಿಸಲಾಗುವುದು. ಸಂಬಂಧಪಟ್ಟ ಕೈಗಾರಿಕಾ ಮಾಲೀಕರ ಜತೆ ಚರ್ಚಿಸಿ ಸಮಸ್ಯೆ ಇತ್ಯಾರ್ಥಪಡಿಸಲಾಗುವುದು.</blockquote><span class="attribution">ಮಂಜುನಾಥ ಕುಡತಿನಿ, ಪಟ್ಟಣ ಪಂಚಾಯಿತಿ ಪ್ರಭಾರಿ ಮುಖ್ಯಾಧಿಕಾರಿ</span></div>.<p>ಅತಿಯಾದ ದೂಳು ರಸ್ತೆ ಬದಿಯ ರೈತರ ಜಮೀನುಗಳಲ್ಲಿನ ತೊಗರಿ, ಮೆಕ್ಕೆಜೋಳ, ಹತ್ತಿ, ಕಡಲೆ ಇತರೆ ಬೆಳೆಗಳಿಗೂ ಆವರಿಸಿದ್ದು, ಬೆಳೆ ನಷ್ಟದ ಆತಂಕ ಎದರಾಗಿದೆ. ಈ ಬೂದಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಗರಸು ಮಣ್ಣನ್ನು ಹಾಕುವಂತೆ ಜನರು ಒತ್ತಾಯಿಸಿದ್ದಾರೆ.</p>.<p>‘ರಸ್ತೆಯಲ್ಲಿನ ಗುಂಡಿಗಳಿಗೆ ಕಚ್ಚಾ ಬೂದಿಯನ್ನು ಹಾಕಿರುವುದು ಸರಿಯಲ್ಲ. ರೈತರು, ಕಾರ್ಮಿಕರು ಈ ರಸ್ತೆಯಲ್ಲಿ ಸಂಚಾರ ಮಾಡಲು ನಿತ್ಯ ಪರಿತಪಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗೆ ಹಾಕಿದ ಬೂದಿಯನ್ನು ಶೀಘ್ರವಾಗಿ ತೆರವುಗೊಳಿಸಿ, ಸಮಸ್ಯೆ ಪರಿಹರಿಸಬೇಕು’ ಎಂದು ಕುಡತಿನಿ ಪಟ್ಟಣದ ನಿವಾಸಿ ಎ.ಗಣೇಶ್ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>