ಬಿಜೆಪಿ ಪಕ್ಷದ ಸುಳ್ಳು ಸ್ಕೀಂಗಳಿಂದ ಮಹಿಳೆಯರು, ಅಸಹಾಯಕರು, ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು ತತ್ತರಗೊಂಡಿದ್ದಾರೆ. ಬಡವರ ಬದುಕಿಗೆ ಭದ್ರ ಬುನಾದಿ ಹಾಕದೇ ಕೇವಲ ಧರ್ಮ ಮತ್ತು ದೇಶಭಕ್ತಿಯ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ, ಬಣ್ಣದ ಮಾತುಗಳ ಮೂಲಕ ಬಡ ಕುಟುಂಬಗಳ ಮಕ್ಕಳನ್ನೇ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಾರೆ ಎಂದರು.