<p><strong>ಹೂವಿನಹಡಗಲಿ:</strong> ಇಲ್ಲಿ ಆಸ್ತಿ ಹೊಂದಿ ವಿದೇಶದಲ್ಲಿ ನೆಲೆಸಿರುವವರ ಹೆಸರಿನಲ್ಲಿ ನಕಲಿ ದಾಖಲಿ ಸೃಷ್ಟಿಸಿ ತಾಲ್ಲೂಕಿನ ಕೊಯಿಲಾರಗಟ್ಟಿ ಗ್ರಾಮದ 68.17 ಎಕರೆ ಜಮೀನನ್ನು ನೋಂದಣಿ ಮಾಡಿಸಿ, ಮೂಲ ಪಟ್ಟಾದಾರರಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.</p>.<p>ಆರೋಪಿಗಳಾದ ಬಳ್ಳಾರಿಯ ಕೆ. ಮೋಹನ್, ಬಾದನಹಟ್ಟಿಯ ಟಿ.ರಂಜಿತ್ ಕುಮಾರ್, ಸಿರುಗುಪ್ಪದ ರಾವಿ ತಿರುಮಲೇಶ, ಬಳ್ಳಾರಿಯ ಎಸ್.ವಿಜಯಕುಮಾರ್ ಹಾಗೂ ಹೂವಿನಹಡಗಲಿ ತಾಲ್ಲೂಕು ರಾಜವಾಳದ ಜಾಸ್ತಿ ಶ್ರೀನಿವಾಸರೆಡ್ಡಿ, ಪಟ್ಟಣವಾಸಿ ಲಲಿತಕುಮಾರ್ ಜೈನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.</p>.<p><strong>ಪ್ರಕರಣ ವಿವರ:</strong> ಸದ್ಯ ದುಬೈನಲ್ಲಿರುವ ಬೆಂಗಳೂರು ಮೂಲದ ಥಾಮಸ್ ವಿಜಯನ್, ಅಮೆರಿಕದಲ್ಲಿರುವ ರಾಜನ್ ಥಾಮಸ್ ಸಹೋದರರು ಈ ಹಿಂದೆ ತಾಲ್ಲೂಕಿನ ಕೊಯಿಲಾರಗಟ್ಟಿಯಲ್ಲಿ 97 ಎಕರೆ ಜಮೀನು ಖರೀದಿಸಿ, ಅದರ ಮಾಲೀಕತ್ವ ಹೊಂದಿದ್ದರು. ಇವರ ಹೆಸರಿನಲ್ಲಿ ಚುನಾವಣಾ ಗುರುತಿನ ಚೀಟಿ ಮತ್ತು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಪತ್ರದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ₹ 2 ಕೋಟಿ ಮೌಲ್ಯದ 68.17 ಎಕರೆ ಜಮೀನನ್ನು ಆರೋಪಿಗಳು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ನಂತರ ನಕಲಿ ಜಿಪಿಎ ಪತ್ರ ಆಧಾರದಲ್ಲಿ ಇತರರಿಗೂ ಜಮೀನು ಮಾರಾಟ ಮಾಡಿ ವಂಚಿಸಿದ್ದಾರೆ.</p><p>ವಿದೇಶದಲ್ಲಿರುವ ಥಾಮಸ್ ಸಹೋದರರ ವ್ಯವಸ್ಥಾಪಕ ಬೆಂಗಳೂರಿನ ಬಿಜು ಚಾಕೋ ಎಂಬುವವರು ಕಳೆದ ಮೇ ತಿಂಗಳಲ್ಲಿ ತಮ್ಮ ಮಾಲೀಕರ ಜಮೀನು ವೀಕ್ಷಣೆಗಾಗಿ ಕೊಯಿಲಾರಗಟ್ಟಿ ಗ್ರಾಮಕ್ಕೆ ಬಂದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ನಂತರ ಅವರು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ:</strong> ಇಲ್ಲಿ ಆಸ್ತಿ ಹೊಂದಿ ವಿದೇಶದಲ್ಲಿ ನೆಲೆಸಿರುವವರ ಹೆಸರಿನಲ್ಲಿ ನಕಲಿ ದಾಖಲಿ ಸೃಷ್ಟಿಸಿ ತಾಲ್ಲೂಕಿನ ಕೊಯಿಲಾರಗಟ್ಟಿ ಗ್ರಾಮದ 68.17 ಎಕರೆ ಜಮೀನನ್ನು ನೋಂದಣಿ ಮಾಡಿಸಿ, ಮೂಲ ಪಟ್ಟಾದಾರರಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.</p>.<p>ಆರೋಪಿಗಳಾದ ಬಳ್ಳಾರಿಯ ಕೆ. ಮೋಹನ್, ಬಾದನಹಟ್ಟಿಯ ಟಿ.ರಂಜಿತ್ ಕುಮಾರ್, ಸಿರುಗುಪ್ಪದ ರಾವಿ ತಿರುಮಲೇಶ, ಬಳ್ಳಾರಿಯ ಎಸ್.ವಿಜಯಕುಮಾರ್ ಹಾಗೂ ಹೂವಿನಹಡಗಲಿ ತಾಲ್ಲೂಕು ರಾಜವಾಳದ ಜಾಸ್ತಿ ಶ್ರೀನಿವಾಸರೆಡ್ಡಿ, ಪಟ್ಟಣವಾಸಿ ಲಲಿತಕುಮಾರ್ ಜೈನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.</p>.<p><strong>ಪ್ರಕರಣ ವಿವರ:</strong> ಸದ್ಯ ದುಬೈನಲ್ಲಿರುವ ಬೆಂಗಳೂರು ಮೂಲದ ಥಾಮಸ್ ವಿಜಯನ್, ಅಮೆರಿಕದಲ್ಲಿರುವ ರಾಜನ್ ಥಾಮಸ್ ಸಹೋದರರು ಈ ಹಿಂದೆ ತಾಲ್ಲೂಕಿನ ಕೊಯಿಲಾರಗಟ್ಟಿಯಲ್ಲಿ 97 ಎಕರೆ ಜಮೀನು ಖರೀದಿಸಿ, ಅದರ ಮಾಲೀಕತ್ವ ಹೊಂದಿದ್ದರು. ಇವರ ಹೆಸರಿನಲ್ಲಿ ಚುನಾವಣಾ ಗುರುತಿನ ಚೀಟಿ ಮತ್ತು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಪತ್ರದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ₹ 2 ಕೋಟಿ ಮೌಲ್ಯದ 68.17 ಎಕರೆ ಜಮೀನನ್ನು ಆರೋಪಿಗಳು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ನಂತರ ನಕಲಿ ಜಿಪಿಎ ಪತ್ರ ಆಧಾರದಲ್ಲಿ ಇತರರಿಗೂ ಜಮೀನು ಮಾರಾಟ ಮಾಡಿ ವಂಚಿಸಿದ್ದಾರೆ.</p><p>ವಿದೇಶದಲ್ಲಿರುವ ಥಾಮಸ್ ಸಹೋದರರ ವ್ಯವಸ್ಥಾಪಕ ಬೆಂಗಳೂರಿನ ಬಿಜು ಚಾಕೋ ಎಂಬುವವರು ಕಳೆದ ಮೇ ತಿಂಗಳಲ್ಲಿ ತಮ್ಮ ಮಾಲೀಕರ ಜಮೀನು ವೀಕ್ಷಣೆಗಾಗಿ ಕೊಯಿಲಾರಗಟ್ಟಿ ಗ್ರಾಮಕ್ಕೆ ಬಂದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ನಂತರ ಅವರು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>