ವೇದಿಕೆಯಿಂದ ಕೆಳಗಿಳಿದು ಬಂದ ವಿಜಯ್ ಪ್ರಕಾಶ್ ಕೂಡ ಅವರೊಂದಿಗೆ ಕೆಲಕಾಲ ಹೆಜ್ಜೆ ಹಾಕಿದರು. ನಂತರ ಅವರನ್ನು ವೇದಿಕೆಗೆ ಕರೆದೊಯ್ದರು. ಅಲ್ಲಿ ಸಹ ಸಚಿವರು, ಜಿಲ್ಲಾಧಿಕಾರಿ ಡಾನ್ಸ್ ಮಾಡಿದರು. ನಂತರ ಸಂಸದ ವಿ.ಎಸ್. ಉಗ್ರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಕೂಡ ವೇದಿಕೆ ಮೇಲೇರಿ ಅವರಿಗೆ ಸಾಥ್ ನೀಡಿದರು. ಅದನ್ನು ನೋಡಿದ ಜನ ಸಹ ಅವರಿದ್ದ ಸ್ಥಳದಲ್ಲಿಯೇ ಹುಚ್ಚೆದ್ದು ಕುಣಿದರು. ಈ ವೇಳೆ ಜನರ ಹರ್ಷೊದ್ಘಾರ, ಕೇಕೆ ಮುಗಿಲು ಮುಟ್ಟಿತ್ತು. ಅದರೊಂದಿಗೆ ಎರಡು ದಿನಗಳ ಅದ್ದೂರಿ ಹಂಪಿ ಉತ್ಸವಕ್ಕೆ ವರ್ಣರಂಜಿತ ತೆರೆ ಬಿತ್ತು.