ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವಾದ: ಮೂರು ಕುಟುಂಬಗಳ ಸದಸ್ಯರ ಬಡಿದಾಟ

Last Updated 20 ಆಗಸ್ಟ್ 2020, 9:14 IST
ಅಕ್ಷರ ಗಾತ್ರ

ಬಳ್ಳಾರಿ: ತಾಲ್ಲೂಕಿನ ಯರಗುಡಿ ಗ್ರಾಮದಲ್ಲಿ ಆಸ್ತಿ ವಿವಾದ ತಾರಕಕ್ಕೇರಿ ಮೂವರು ಸಹೋದರರ ಕುಟುಂಬಗಳ ಸದಸ್ಯರು ಗುರುವಾರ ಬಡಿಗೆಗಳನ್ನು ಹಿಡಿದು ಬಡಿದಾಟ ನಡೆಸಿದ್ದಾರೆ.

ಮೂವರು ಅಣ್ಣ ತಮ್ಮಂದಿರಲ್ಲಿ ಇಬ್ಬರು ಮತ್ತು ಒಬ್ಬರು ಸಹೋದರರ ನಡುವೆ ವಿವಾದ ಹಲವು ವರ್ಷಗಳಿಂದ ಇತ್ಯರ್ಥವಾಗದೇ ಆಗಾಗ ಜಗಳ ನಡೆಯುತ್ತಿತ್ತು. ಗುರುವಾರ ಕಲಹ ವಿಕೋಪಕ್ಕೇರಿ ಎರಡು ಗುಂಪುಗಳ ಮಂದಿ ಬಡಿಗೆಗಳೊಂದಿಗೆ ಹೊಡೆದಾಟ ನಡೆಸಿದ ವೀಡಿಯೊವೈರಲ್ ಆಗಿದೆ.

ಹೊನ್ನಾರೆಡ್ಡಿ, ಕೃಷ್ಣಾ ರೆಡ್ಡಿ ಮತ್ತು ಶೇಷರೆಡ್ಡಿ ಕುಟುಂಬಗಳ ಸದಸ್ಯರ ಮಧ್ಯೆ ಈ ಬಡಿದಾಡ ನಡೆದಿದ್ದು, ಮೂವರ ಪೈಕಿ ಇಬ್ಬರು ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈಗ ಹೊನ್ನಾರೆಡ್ಡಿ ಮಾತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT