<p><strong>ಬಳ್ಳಾರಿ:</strong> ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಪಥಸಂಚಲನವು ಭಾನುವಾರ ನಗರದಲ್ಲಿ ವೈಭವಯುತವಾಗಿ ಜರುಗಿತು. ಗಣವೇಷ ಧರಿಸಿ ಪಥ ಸಂಚಲನ ನಡೆಸಿದ ನೂರಾರು ಕಾರ್ಯಕರ್ತರು, ಮಕ್ಕಳು ಗಮನ ಸೆಳೆದರು. </p>.<p>ಆರ್ಎಸ್ಎಸ್ ಸ್ಥಾಪನೆಗೊಂಡು 100 ವರ್ಷಗಳು ಪೂರೈಸಿವೆ. ಈ ಹಿನ್ನೆಲೆಯಲ್ಲಿ ಗಣವೇಷಧಾರಿಗಳ ಪಥಸಂಚಲನ ನಡೆಯಿತು.</p>.<p>ಪಥಸಂಚಲನದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ‘ಸಂಘ ಶತಮಾನೋತ್ಸವ ಸಂಭ್ರದಲ್ಲಿದೆ. ಅದಕ್ಕಾಗಿ ನಾವು ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿದೆವು’ ಎಂದು ಹೇಳಿದರು. </p>.<p>ನಗರದ ಪವನ್ ಹೋಟೆಲ್ ಹಿಂಭಾಗದಿಂದ ಆರಂಭವಾದಿ ಪಥ ಸಂಚಲನವು ಶ್ರೀರಾಂಪುರ ಕಾಲೊನಿಯ ಮುಖ್ಯ ರಸ್ತೆ, ರೂಪನಗುಡಿ ರಸ್ತೆ, ಕಣೇಕಲ್ಲು ಬಸ್ ನಿಲ್ದಾಣ, ರಾಘವೇಂದ್ರ ಟಾಕೀಸ್ ರಸ್ತೆ, ಅಂಗಡಿ ಮಾರಪ್ಪ ಕಾಂಪೌಂಡ್ ಮಾರ್ಗವಾಗಿ ಸಂಚರಿಸಿತು. </p>.<p>ಯುವಕರು, ಹಿರಿಯರು, ಚಿಕ್ಕ ಮಕ್ಕಳೂ ಉತ್ಸಾಹದಿಂದ ಪಥಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು. ಪಥ ಸಂಚಲನಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. </p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ, ಪಾಲಿಕೆ ಸದಸ್ಯರು ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಪಥಸಂಚಲನವು ಭಾನುವಾರ ನಗರದಲ್ಲಿ ವೈಭವಯುತವಾಗಿ ಜರುಗಿತು. ಗಣವೇಷ ಧರಿಸಿ ಪಥ ಸಂಚಲನ ನಡೆಸಿದ ನೂರಾರು ಕಾರ್ಯಕರ್ತರು, ಮಕ್ಕಳು ಗಮನ ಸೆಳೆದರು. </p>.<p>ಆರ್ಎಸ್ಎಸ್ ಸ್ಥಾಪನೆಗೊಂಡು 100 ವರ್ಷಗಳು ಪೂರೈಸಿವೆ. ಈ ಹಿನ್ನೆಲೆಯಲ್ಲಿ ಗಣವೇಷಧಾರಿಗಳ ಪಥಸಂಚಲನ ನಡೆಯಿತು.</p>.<p>ಪಥಸಂಚಲನದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ‘ಸಂಘ ಶತಮಾನೋತ್ಸವ ಸಂಭ್ರದಲ್ಲಿದೆ. ಅದಕ್ಕಾಗಿ ನಾವು ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿದೆವು’ ಎಂದು ಹೇಳಿದರು. </p>.<p>ನಗರದ ಪವನ್ ಹೋಟೆಲ್ ಹಿಂಭಾಗದಿಂದ ಆರಂಭವಾದಿ ಪಥ ಸಂಚಲನವು ಶ್ರೀರಾಂಪುರ ಕಾಲೊನಿಯ ಮುಖ್ಯ ರಸ್ತೆ, ರೂಪನಗುಡಿ ರಸ್ತೆ, ಕಣೇಕಲ್ಲು ಬಸ್ ನಿಲ್ದಾಣ, ರಾಘವೇಂದ್ರ ಟಾಕೀಸ್ ರಸ್ತೆ, ಅಂಗಡಿ ಮಾರಪ್ಪ ಕಾಂಪೌಂಡ್ ಮಾರ್ಗವಾಗಿ ಸಂಚರಿಸಿತು. </p>.<p>ಯುವಕರು, ಹಿರಿಯರು, ಚಿಕ್ಕ ಮಕ್ಕಳೂ ಉತ್ಸಾಹದಿಂದ ಪಥಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು. ಪಥ ಸಂಚಲನಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. </p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ, ಪಾಲಿಕೆ ಸದಸ್ಯರು ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>