ಬೆಳಿಗ್ಗೆ ಬ್ರಾಹ್ಮಿ ಮುಹೋರ್ತದಲ್ಲಿ ಕಳಸ-ಕನ್ನಡಿಗಳೊಂದಿಗೆ ಗಂಗೆ ತಂದು ಈಶ್ವರ ದೇವಸ್ಥಾನದಲ್ಲಿ ಅಭಿಷೇಕ ಸಹಸ್ರ ಬಿಲ್ವಾರ್ಚನೆ ನಂತರ ಕೊಂಚಗೇರಿ ಶಿವಪ್ಪ ತಾತ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಸಂಜೆ ಸಕಲ ವಾದ್ಯ ವೈಭವಗಳೊಡನೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಹಗ್ಗ ಹಿಡಿದು ರಥವನ್ನು ಎಳೆಯುತ್ತಿದ್ದಂತೆ ನೆರೆದ ಭಕ್ತಸಾಗರ ಹೂಹಣ್ಣು-ಉತ್ತುತ್ತಿ ರಥಕ್ಕೆ ಎಸೆದು ಭಕ್ತಿ ಮೆರೆದರು. ರಥವು ಈಶ್ವರ ದೇವಸ್ಥಾನದಿಂದ ನಾಗಪ್ಪನ ಕಟ್ಟೆ ವರೆಗೆ ಸಾಗಿ ಮತ್ತೆ ಸ್ವಸ್ಥಾನಕ್ಕೆ ಮರುಳಿತು.
ಭೈರಾಪುರ, ಕರೂರು, ದರೂರು, ಸಿರಿಗೇರಿ, ಶಾನವಾಸಪುರ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.