<p><strong>ತೆಕ್ಕಲಕೋಟೆ</strong>: ಸಮೀಪದ ಮಣ್ಣೂರು ಸೂಗೂರು ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಬೇರೊಬ್ಬರ ಹೆಸರಿಗೆ ಪಹಣಿ ಬದಲಿಸಿದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.</p>.<p>2 ಎಕರೆ ಜಮೀನನ್ನು ಗ್ರಾಮ ಆಡಳಿತಾಧಿಕಾರಿ ಹಾಗೂ ತೆಕ್ಕಲಕೋಟೆಯ ಕಂದಾಯ ನಿರೀಕ್ಷಕ ಸೇರಿ ಪಹಣಿ ತಿದ್ದುಪಡಿ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತುಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br><br><strong>ಬಾಡಿಗೆ ಕಾರು ಮಾರಾಟ: ದೂರು ದಾಖಲು</strong></p><p><strong>ಬಳ್ಳಾರಿ</strong>: ಕಾರುಗಳನ್ನು ಬಾಡಿಗೆ ಪಡೆದುಕೊಂಡು ಬೇರೆ ಊರುಗಳಲ್ಲಿ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರದ ಬಸವನಕುಂಟೆಯ ಜಾಹಿದ್ ಬಾಷಾ ವಿರುದ್ಧ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br><br>ಬಳ್ಳಾರಿಯ 50-60 ಜನರಿಂದ ಕಾರು ಬಾಡಿ ಪಡೆದ ಜಾಹಿದ್, ಸಿಂಧನೂರು, ರಾಯಚೂರಿನಲ್ಲಿ ಅಡಮಾನ ಹಾಗೂ ಮಾರಾಟ ಮಾಡಿದ್ದಾನೆ ಎಂದು ಸೈಯ್ಯದ್ ಸದ್ರು ದೂರಿನಲ್ಲಿ ತಿಳಿಸಿದ್ದಾರೆ.</p>.<p><strong>ಬಿಸಿಯೂಟ ಸಾಮಗ್ರಿ ಕಳವು: ಪ್ರಕರಣ ದಾಖಲು</strong></p>.<p><strong>ತೆಕ್ಕಲಕೋಟೆ</strong>: ಸಮೀಪದ ಶಾನವಾಸಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಹಾರ ಸಾಮಗ್ರಿ ಹಾಗೂ ಇನ್ವರ್ಟರ್ ಕಳವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ದೂರು ನೀಡಿದ್ದಾರೆ.</p>.<p>₹15 ಸಾವಿರ ಮೌಲ್ಯದ ಇನ್ವರ್ಟರ್ ಬ್ಯಾಟರಿ ಹಾಗೂ ಒಟ್ಟು ₹24,900 ಮೌಲ್ಯದ ಆಹಾರ ಸಾಮಗ್ರಿಗಳು ಕಳವಾಗಿರುವ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ</strong>: ಸಮೀಪದ ಮಣ್ಣೂರು ಸೂಗೂರು ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಬೇರೊಬ್ಬರ ಹೆಸರಿಗೆ ಪಹಣಿ ಬದಲಿಸಿದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.</p>.<p>2 ಎಕರೆ ಜಮೀನನ್ನು ಗ್ರಾಮ ಆಡಳಿತಾಧಿಕಾರಿ ಹಾಗೂ ತೆಕ್ಕಲಕೋಟೆಯ ಕಂದಾಯ ನಿರೀಕ್ಷಕ ಸೇರಿ ಪಹಣಿ ತಿದ್ದುಪಡಿ ಮಾಡಿದ್ದಾರೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತುಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br><br><strong>ಬಾಡಿಗೆ ಕಾರು ಮಾರಾಟ: ದೂರು ದಾಖಲು</strong></p><p><strong>ಬಳ್ಳಾರಿ</strong>: ಕಾರುಗಳನ್ನು ಬಾಡಿಗೆ ಪಡೆದುಕೊಂಡು ಬೇರೆ ಊರುಗಳಲ್ಲಿ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರದ ಬಸವನಕುಂಟೆಯ ಜಾಹಿದ್ ಬಾಷಾ ವಿರುದ್ಧ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<br><br>ಬಳ್ಳಾರಿಯ 50-60 ಜನರಿಂದ ಕಾರು ಬಾಡಿ ಪಡೆದ ಜಾಹಿದ್, ಸಿಂಧನೂರು, ರಾಯಚೂರಿನಲ್ಲಿ ಅಡಮಾನ ಹಾಗೂ ಮಾರಾಟ ಮಾಡಿದ್ದಾನೆ ಎಂದು ಸೈಯ್ಯದ್ ಸದ್ರು ದೂರಿನಲ್ಲಿ ತಿಳಿಸಿದ್ದಾರೆ.</p>.<p><strong>ಬಿಸಿಯೂಟ ಸಾಮಗ್ರಿ ಕಳವು: ಪ್ರಕರಣ ದಾಖಲು</strong></p>.<p><strong>ತೆಕ್ಕಲಕೋಟೆ</strong>: ಸಮೀಪದ ಶಾನವಾಸಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಹಾರ ಸಾಮಗ್ರಿ ಹಾಗೂ ಇನ್ವರ್ಟರ್ ಕಳವಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ದೂರು ನೀಡಿದ್ದಾರೆ.</p>.<p>₹15 ಸಾವಿರ ಮೌಲ್ಯದ ಇನ್ವರ್ಟರ್ ಬ್ಯಾಟರಿ ಹಾಗೂ ಒಟ್ಟು ₹24,900 ಮೌಲ್ಯದ ಆಹಾರ ಸಾಮಗ್ರಿಗಳು ಕಳವಾಗಿರುವ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>