<p><strong>ಬಳ್ಳಾರಿ</strong>: ಅಪ್ರಾಪ್ತ ವಯಸ್ಕನಾಗಿದ್ದ ಮಗನಿಗೆ ಬೈಕ್ ಕೊಟ್ಟು, ಚಾಲನೆಗೆ ಅನುವು ಮಾಡಿಕೊಟ್ಟ ತಂದೆಗೆ ಬಳ್ಳಾರಿಯ 3ನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮಂಗಳವಾರ ₹25 ಸಾವಿರ ದಂಡ ವಿಧಿಸಿದೆ. </p>.<p>ಬಳ್ಳಾರಿಯ ಸಂಚಾರ ಠಾಣೆಯಲ್ಲಿ 2023ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ನೀಡಿ, ಚಾಲನೆಗೆ ಅವಕಾಶ ಮಾಡಿಕೊಟ್ಟಿದ್ದಾಗಿ ಮಂಗನಹಳ್ಳಿ ನಿವಾಸಿ ನಿಂಗರಾಜು ತಪ್ಪೊಪ್ಪಿಕೊಂಡಿದ್ದರು. ಇದರ ಆಧಾರದಲ್ಲಿ ನ್ಯಾಯಾಧೀಶ ಮುದುಕಪ್ಪ ಓದನ್ ದಂಡ ವಿಧಿಸಿ ಆದೇಶಿಸಿದ್ದಾರೆ. </p>.<p>ಸಹಾಯಕ ಸರ್ಕಾರಿ ಅಭಿಯೋಜಕ ಮುರ್ತುಜಾ ಸಾಬ ಸರ್ಕಾರದ ಪರ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಅಪ್ರಾಪ್ತ ವಯಸ್ಕನಾಗಿದ್ದ ಮಗನಿಗೆ ಬೈಕ್ ಕೊಟ್ಟು, ಚಾಲನೆಗೆ ಅನುವು ಮಾಡಿಕೊಟ್ಟ ತಂದೆಗೆ ಬಳ್ಳಾರಿಯ 3ನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮಂಗಳವಾರ ₹25 ಸಾವಿರ ದಂಡ ವಿಧಿಸಿದೆ. </p>.<p>ಬಳ್ಳಾರಿಯ ಸಂಚಾರ ಠಾಣೆಯಲ್ಲಿ 2023ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ನೀಡಿ, ಚಾಲನೆಗೆ ಅವಕಾಶ ಮಾಡಿಕೊಟ್ಟಿದ್ದಾಗಿ ಮಂಗನಹಳ್ಳಿ ನಿವಾಸಿ ನಿಂಗರಾಜು ತಪ್ಪೊಪ್ಪಿಕೊಂಡಿದ್ದರು. ಇದರ ಆಧಾರದಲ್ಲಿ ನ್ಯಾಯಾಧೀಶ ಮುದುಕಪ್ಪ ಓದನ್ ದಂಡ ವಿಧಿಸಿ ಆದೇಶಿಸಿದ್ದಾರೆ. </p>.<p>ಸಹಾಯಕ ಸರ್ಕಾರಿ ಅಭಿಯೋಜಕ ಮುರ್ತುಜಾ ಸಾಬ ಸರ್ಕಾರದ ಪರ ವಾದ ಮಂಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>