ಲಾರಿ ಚಾಲಕ ಅಂಥೋಣಿಸ್ವಾಮಿ (45) ಮೃತರು. ದಸರಾ ಉತ್ಸವಕ್ಕೆ ತಮಿಳುನಾಡಿನ ತಿರುಚಿಯಿಂದ ಆನೆಯನ್ನು ತರಲಾಗಿತ್ತು. ಉತ್ಸವ ಮುಗಿಸಿ ವಾಪಸ್ ಕೊಂಡೊಯ್ಯತ್ತಿದ್ದಾಗ ಶಾನಮಾವು ಅರಣ್ಯ ಪ್ರದೇಶದಲ್ಲಿ ಚಾಲಕ ಅಂಥೋಣಿಸ್ವಾಮಿ ರಸ್ತೆ ಬದಿಗೆ ಲಾರಿ ನಿಲ್ಲಿಸಿ ಅದರ ಮುಂದೆಯೇ ಮೂತ್ರ ವಿಸರ್ಜನೆಗೆ ನಿಂತಿದ್ದರು. ಹ್ಯಾಂಡ್ ಬ್ರೇಕ್ ಹಾಕದ ಕಾರಣ ಲಾರಿಯು ದಿಢೀರನೇ ಮುಂದೆಗೆ ಚಲಿಸಿದೆ. ಲಾರಿನಡಿಗೆ ಸಿಲುಕಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆನೆಯನ್ನು ಕ್ರೇನ್ ಮೂಲಕ ಸಂರಕ್ಷಿಸಲಾಯಿತು.