<p><strong>ಆನೇಕಲ್: </strong>ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಗೊಲ್ಲರಗುಂಟೆಯಲ್ಲಿ ಶನಿವಾರ<strong> </strong>ಪೋಷಕರ ನಿರ್ಲಕ್ಷ್ಯದಿಂದಾಗಿ ತಾಯಿಯ ಗರ್ಭದಲ್ಲಿದ್ದ ಮೂರು ಶಿಶುಗಳು ಮೃತಪಟ್ಟಿವೆ. </p>.<p>ಬನ್ನೇರುಘಟ್ಟದ ಮಂಜುಳ ಆರು ತಿಂಗಳ ಗರ್ಭಿಣಿಯಾಗಿದ್ದರು. ಶನಿವಾರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮನೆಯಲ್ಲಿಯೇ ಒಂದು ಮಗು ಮೃತಪಟ್ಟಿದೆ. ತಕ್ಷಣ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಲಾಗಿದೆ. ಆದರೆ ಆನೇಕಲ್ಗೆ ಬರುವ ವೇಳೆಗಾಗಲೇ ಉಳಿದ ಎರಡು ಶಿಶುಗಳು ಸಹ ಸಾವನ್ನಪ್ಪಿದೆ.</p>.<p>ತಾಯಿ ಕಾರ್ಡ್ ಮಾಡಿಸಿದ್ದ ಮಂಜುಳ ಆರು ತಿಂಗಳಿನಿಂದ ಒಂದು ಬಾರಿಯೂ ಆಸ್ಪತ್ರೆಗೆ ಹೋಗಿರಲಿಲ್ಲ. ಆಶಾ ಕಾರ್ಯಕರ್ತರು ಮಾಹಿತಿ ಪಡೆಯಲು ಹಲವಾರು ಬಾರಿ ಪ್ರಯತ್ನಿಸಿದ್ದರೂ ಮಂಜುಳ ಸಿಕ್ಕಿರಲಿಲ್ಲ ಎಂಬ ಮಾಹಿತಿ ದೊರೆತಿದೆ.</p>.<p>ಮೂರು ಶಿಶುಗಳಿಗೆ ಒಮ್ಮೊಮ್ಮೆ ತಾಯಿಯ ಗರ್ಭದಲ್ಲಿ ಜಾಗ ಸರಿಯಾಗಿ ದೊರೆಯದ ಕಾರಣ ಮೃತಪಟ್ಟಿರಬಹುದು. ಆದರೆ ತಾಯಿ ಒಮ್ಮೆಯೂ ಆಸ್ಪತ್ರೆಗೆ ಹೋಗದಿರುವುದೇ ಮುಖ್ಯ ಕಾರಣ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಗೊಲ್ಲರಗುಂಟೆಯಲ್ಲಿ ಶನಿವಾರ<strong> </strong>ಪೋಷಕರ ನಿರ್ಲಕ್ಷ್ಯದಿಂದಾಗಿ ತಾಯಿಯ ಗರ್ಭದಲ್ಲಿದ್ದ ಮೂರು ಶಿಶುಗಳು ಮೃತಪಟ್ಟಿವೆ. </p>.<p>ಬನ್ನೇರುಘಟ್ಟದ ಮಂಜುಳ ಆರು ತಿಂಗಳ ಗರ್ಭಿಣಿಯಾಗಿದ್ದರು. ಶನಿವಾರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಮನೆಯಲ್ಲಿಯೇ ಒಂದು ಮಗು ಮೃತಪಟ್ಟಿದೆ. ತಕ್ಷಣ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಲಾಗಿದೆ. ಆದರೆ ಆನೇಕಲ್ಗೆ ಬರುವ ವೇಳೆಗಾಗಲೇ ಉಳಿದ ಎರಡು ಶಿಶುಗಳು ಸಹ ಸಾವನ್ನಪ್ಪಿದೆ.</p>.<p>ತಾಯಿ ಕಾರ್ಡ್ ಮಾಡಿಸಿದ್ದ ಮಂಜುಳ ಆರು ತಿಂಗಳಿನಿಂದ ಒಂದು ಬಾರಿಯೂ ಆಸ್ಪತ್ರೆಗೆ ಹೋಗಿರಲಿಲ್ಲ. ಆಶಾ ಕಾರ್ಯಕರ್ತರು ಮಾಹಿತಿ ಪಡೆಯಲು ಹಲವಾರು ಬಾರಿ ಪ್ರಯತ್ನಿಸಿದ್ದರೂ ಮಂಜುಳ ಸಿಕ್ಕಿರಲಿಲ್ಲ ಎಂಬ ಮಾಹಿತಿ ದೊರೆತಿದೆ.</p>.<p>ಮೂರು ಶಿಶುಗಳಿಗೆ ಒಮ್ಮೊಮ್ಮೆ ತಾಯಿಯ ಗರ್ಭದಲ್ಲಿ ಜಾಗ ಸರಿಯಾಗಿ ದೊರೆಯದ ಕಾರಣ ಮೃತಪಟ್ಟಿರಬಹುದು. ಆದರೆ ತಾಯಿ ಒಮ್ಮೆಯೂ ಆಸ್ಪತ್ರೆಗೆ ಹೋಗದಿರುವುದೇ ಮುಖ್ಯ ಕಾರಣ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>