ಈ ಬಗ್ಗೆ ಮಾಹಿತಿ ನೀಡಿರುವ ಯುವ ಸಂಚಲನ ಅಧ್ಯಕ್ಷ ಚಿದಾನಂದ್, ಮಾಕಳಿ ಬೆಟ್ಟ ಸೇರಿದಂತೆ ಈ ಭಾಗದಲ್ಲಿ ಬರುವ ಘಾಟಿ ಕ್ಷೇತ್ರದಲ್ಲಿನ ಬೆಟ್ಟಗಳ ಸಾಲು ಸರಿಸೃಪಗಳ ವಾಸಕ್ಕೆ ಹೆಸರಾಗಿದೆ. ಅದರಲ್ಲೂ ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಇರುವ ಗುಂಡಂಮಗೆರೆ ಕೆರೆಯಲ್ಲಿ ವರ್ಷವಿಡೀ ನೀರು ನಿಂತಿರುವುದರಿಂದ ಈ ಕೆರೆಯ ಸುತ್ತ ಹಲವಾರು ಪ್ರಾಣಿ, ಪಕ್ಷಿಗಳು ಜೀವಿಸುತ್ತಿವೆ. ಹೀಗಾಗಿ ಕಳ್ಳಬೇಟೆಗಾರರ ಹಾವಳಿ ಮಿತಿ ಮೀರಿದೆ. ಅರಣ್ಯ ಇಲಾಖೆಯವರು ಈ ಭಾಗದಲ್ಲಿ ರಾತ್ರಿ ವೇಳೆ ಗಸ್ತು ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.