ದೇಶದಲ್ಲಿ ಪೌರತ್ವ ಕಾಯಿದೆ (ಸಿಎಎ),ಎನ್ಆರ್ಸಿ ಪರ-ವಿರೋಧ ಹೋರಾಟಗಳಿಂದಾಗಿ ಆತಂಕಗೊಂಡಿರುವ ಜನ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಆರ್ಥಿಕ ಗಣತಿ ಸಮೀಕ್ಷೆಗಾಗಿ ಮಾಹಿತಿ ಸಂಗ್ರಹಿಸುವ ಸಲುವಾಗಿಯೇ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ಎಲ್ಲಾ ಮಾಹಿತಿಯನ್ನು ಕಾಗದ ರಹಿತವಾಗಿ ಆನ್ ಲೈನ್ ಮೂಲಕ ಸಂಗ್ರಹಿಸಲಾಗುತ್ತಿದೆ. ಆರ್ಥಿಕ ಗಣತಿಯಲ್ಲಿ ಮನೆ ಮಾಲೀಕರಿಂದ ಮೊದಲುಗೊಂಡು ಕುಟುಂಬದವರ ಸಂಖ್ಯೆ, ಮಕ್ಕಳ ಸಂಖ್ಯೆ, ಮನೆ ಮಾಲೀಕರ ಮೊಬೈಲ್ ಸಂಖ್ಯೆ, ಸ್ವಂತ ಮನೆ, ಉದ್ಯೋಗ, ಜಾತಿ, ಧರ್ಮ ಸೇರಿದಂತೆ ಇತರ ಮಾಹಿತಿ ಸಂಗ್ರಹಿಸಬೇಕು. ಎಲ್ಲಾ ಮಾಹಿತಿಯನ್ನು ಮೊಬೈಲ್ನಲ್ಲಿ ಸಂಗ್ರಹ ಮಾಡಿದ ನಂತರ ಮಾಹಿತಿ ನೀಡಿದವರಿಗೆ ತೋರಿಸಿಯೇ ಅಂತಿಮಗೊಳಿಸಲಾಗುತ್ತದೆ. ಈ ಗಣತಿಯು ಪ್ರತಿ ವರ್ಷವು ನಡೆಯುತ್ತ ಬಂದಿದೆ. ಈ ಬಗ್ಗೆ ಬಹುತೇಕ ಜನರಿಗೆ ಸರಿಯಾದ ಮಾಹಿತಿಯೇ ಇಲ್ಲದಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಜ.9 ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿಎಸ್ಸಿಇ (ಸಾಮಾನ್ಯ ಸೇವಾ ಕೇಂದ್ರಗಳ) ಜಿಲ್ಲಾ ಮೇಲ್ವಿಚಾರಕ ಮಹೇಶ್ ತಿಳಿಸಿದ್ದಾರೆ.