ದಶಕಗಳ ಕಾಲ ಬಯಲು ಸೀಮಗೆ ಶಾಶ್ವತ ಜಲಮೂಲ ರಕ್ಷಣೆಗೆಂದು ಅನುಷ್ಟಾನಗೊಂಡ ಎತ್ತಿನಹೊಳೆ ಯೋಜನೆಯಿಂದ ಕೆರೆಗಳಿಗೆ ಹರಿಸುವ ನೀರು ಪೂರೈಕೆ ಯೋಜನೆ ತುಮಕೂರು ಜಿಲ್ಲೆಗಡಿ ದಾಟಿಲ್ಲ. ಇದರ ನಡುವೆ ಎತ್ತಿನಹೊಳೆ ವಿಳಂಬವಾಗಬಹುದು ಎಂಬ ಕಾರಣಕ್ಕಾಗಿ ಬೆಂಗಳೂರು ನಗರದ ಹೆಬ್ಬಾಳ ಮತ್ತು ನಾಗವಾರ ಕೆರೆ ತ್ಯಾಜ್ಯ ನೀರು ಸಂಸ್ಕರಿಸಿ ಚಿಕ್ಕಬಳ್ಳಾಪುರ, ದೇವನಹಳ್ಳಿ ತಾಲ್ಲೂಕಿಗೆ ಹರಿಸುವ ಯೋಜನೆ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ.