ದೇವನಹಳ್ಳಿ: ಬ್ಯಾಂಕಾಕ್ನಿಂದ ಹತ್ತು ಜೀವಂತ ಅನಕೊಂಡ (ದೊಡ್ಡ ಗಾತ್ರದ ಹೆಬ್ಬಾವು) ಮರಿಗಳನ್ನು ಕಳ್ಳತನದಿಂದ ತಂದಿದ್ದ ಪ್ರಯಾಣಿಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ.
ವಿಮಾನ ನಿಲ್ದಾಣದಿಂದ ಹೊರ ಹೋಗುವ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನ ಸೂಟ್ಕೇಸ್ ಪರಿಶೀಲಿಸಿದಾಗ ಬಿಳಿ ಚೀಲದಲ್ಲಿ ತಂದಿದ್ದ ಹತ್ತು ಜೀವಂತ ಹಾವು ಪತ್ತೆಯಾಗಿವೆ.
ಪ್ರಯಾಣಿಕನನ್ನು ಬಂಧಿಸಿ, ಹಾವಿನ ಮರಿಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯ ಜೀವಿಗಳ ಕಳ್ಳಸಾಗಣೆ ನಿಷೇಧ ಕಾಯಿದೆ ಮತ್ತು ಕಸ್ಟಮ್ಸ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.