<p><strong>ಹೊಸಕೋಟೆ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಿತ್ತಾರ ಆರ್ಟ್ ಕ್ಯಾಂಪ್ ಇಲ್ಲಿಯ ಕುವೆಂಪು ನಗರದ ಮೊದಲ ಮುಖ್ಯ ರಸ್ತೆಯ ಚಿತ್ತಾರ ಆರ್ಟ್ ಕ್ಯಾಂಪ್ ನಲ್ಲಿ ಮಕ್ಕಳಿಗಾಗಿ ಜೇಡಿಮಣ್ಣಿನಿಂದ ಗಣೇಶ ಮೂರ್ತಿ ತಯಾರಿಕಾ ತರಬೇತಿ ಶಿಬಿರ ಹಮ್ಮಿಕೊಂಡಿತ್ತು. </strong></p>.<p><strong>ಪರಿಸರಕ್ಕೆ ಅಪಾಯಕಾರಿಯಾದ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮೂರ್ತಿಗಳ ಬದಲು ಪರಿಸರಸ್ನೇಹಿ ಗಣಪನ ಮೂರ್ತಿ ತಯಾರಿಸಲು ಹಿತೇಶಗೌಡ ಮತ್ತು ಸಂಗಡಿಗರು ಚಿತ್ತಾರ ಆರ್ಟ್ ಕ್ಯಾಂಪ್ ಆಯೋಜಿಸಿದ್ದರು.</strong></p>.<p>ಮಕ್ಕಳಿಗೆ ಜೇಡಿಮಣ್ಣು ಕೊಟ್ಟು ಅವರ ಕೈಯಿಂದಲೇ ಗಣೇಶನ ವಿಗ್ರಹಗಳನ್ನು ಮಾಡಿಸಲಾಯಿತು. ಗಣೇಶ ಹಬ್ಬದ ದಿನ ಮನೆಗಳಲ್ಲಿ ಇದೇ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಮತ್ತು ವಿಸರ್ಜಿಸುವ ವಿಧಾನವನ್ನು ಮಕ್ಕಳಿಗೆ ತಿಳಿಸಿ ಕೊಡಲಾಯಿತು.</p>.<p>ಶಿಬಿರದಲ್ಲಿ 40 ಮಕ್ಕಳು ಭಾಗವಹಿಸಿದ್ದರು. ಜೇಡಿ ಮಣ್ಣಿನಲ್ಲಿ ವೈವಿಧ್ಯಮಯ ಗಣೇಶ ಮೂರ್ತಿಗಳು ಮಕ್ಕಳ ಕೈಯಲ್ಲಿ ಜೀವ ತೆಳೆದವು. ತಾವು ಕೈಯಾರೆ ತಯಾರಿಸಿದ್ದ ಮೂರ್ತಿಗಳನ್ನು ಮನೆಗೆ ಕೊಂಡೊಯ್ಯುವಾಗಲಂತೂ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.</p>.<p>ಸಾವಿರಾರು ರೂಪಾಯಿಗಳ ಪಿಒಪಿ ಗಣೇಶ ವಿಗ್ರಹಗಳ ವಿಸರ್ಜನೆಯಿಂದ ರಾಸಾಯನಿಕ ಬಣ್ಣ ಹಾಗೂ ಪಿಒಪಿ ನೀರಿನಲ್ಲಿ ಸುಲಭವಾಗಿ ಕರಗದೆ ಜಲಚರಗಳಿಗೆ ಹಾನಿಯುಂಟು ಮಾಡುತ್ತಿವೆ. ಪ್ರಕೃತಿಗೆ ಮಾರಕವಾದ ಬಣ್ಣಗಳು ಮತ್ತು ಪಿಒಪಿಯಿಂದ ಕೆರೆ, ಬಾವಿ, ಕುಂಟೆಗಳ ನೀರು ಮಲೀನವಾಗುತ್ತಿವೆ.</p>.<p>ಪರಿಸರ ಸ್ನೇಹಿ ಗಣಪನ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂಬ ಅರಿವನ್ನು ಮಕ್ಕಳಿಗೆ ತಿಳಿಸುವ ಅಶಯದಿಂದ ಐದು ವರ್ಷಗಳಿಂದ ಈ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಆಯೋಜಕ ಹಿತೇಶ ಗೌಡ ಹೇಳಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಿತ್ತಾರ ಆರ್ಟ್ ಕ್ಯಾಂಪ್ ಇಲ್ಲಿಯ ಕುವೆಂಪು ನಗರದ ಮೊದಲ ಮುಖ್ಯ ರಸ್ತೆಯ ಚಿತ್ತಾರ ಆರ್ಟ್ ಕ್ಯಾಂಪ್ ನಲ್ಲಿ ಮಕ್ಕಳಿಗಾಗಿ ಜೇಡಿಮಣ್ಣಿನಿಂದ ಗಣೇಶ ಮೂರ್ತಿ ತಯಾರಿಕಾ ತರಬೇತಿ ಶಿಬಿರ ಹಮ್ಮಿಕೊಂಡಿತ್ತು. </strong></p>.<p><strong>ಪರಿಸರಕ್ಕೆ ಅಪಾಯಕಾರಿಯಾದ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮೂರ್ತಿಗಳ ಬದಲು ಪರಿಸರಸ್ನೇಹಿ ಗಣಪನ ಮೂರ್ತಿ ತಯಾರಿಸಲು ಹಿತೇಶಗೌಡ ಮತ್ತು ಸಂಗಡಿಗರು ಚಿತ್ತಾರ ಆರ್ಟ್ ಕ್ಯಾಂಪ್ ಆಯೋಜಿಸಿದ್ದರು.</strong></p>.<p>ಮಕ್ಕಳಿಗೆ ಜೇಡಿಮಣ್ಣು ಕೊಟ್ಟು ಅವರ ಕೈಯಿಂದಲೇ ಗಣೇಶನ ವಿಗ್ರಹಗಳನ್ನು ಮಾಡಿಸಲಾಯಿತು. ಗಣೇಶ ಹಬ್ಬದ ದಿನ ಮನೆಗಳಲ್ಲಿ ಇದೇ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಮತ್ತು ವಿಸರ್ಜಿಸುವ ವಿಧಾನವನ್ನು ಮಕ್ಕಳಿಗೆ ತಿಳಿಸಿ ಕೊಡಲಾಯಿತು.</p>.<p>ಶಿಬಿರದಲ್ಲಿ 40 ಮಕ್ಕಳು ಭಾಗವಹಿಸಿದ್ದರು. ಜೇಡಿ ಮಣ್ಣಿನಲ್ಲಿ ವೈವಿಧ್ಯಮಯ ಗಣೇಶ ಮೂರ್ತಿಗಳು ಮಕ್ಕಳ ಕೈಯಲ್ಲಿ ಜೀವ ತೆಳೆದವು. ತಾವು ಕೈಯಾರೆ ತಯಾರಿಸಿದ್ದ ಮೂರ್ತಿಗಳನ್ನು ಮನೆಗೆ ಕೊಂಡೊಯ್ಯುವಾಗಲಂತೂ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.</p>.<p>ಸಾವಿರಾರು ರೂಪಾಯಿಗಳ ಪಿಒಪಿ ಗಣೇಶ ವಿಗ್ರಹಗಳ ವಿಸರ್ಜನೆಯಿಂದ ರಾಸಾಯನಿಕ ಬಣ್ಣ ಹಾಗೂ ಪಿಒಪಿ ನೀರಿನಲ್ಲಿ ಸುಲಭವಾಗಿ ಕರಗದೆ ಜಲಚರಗಳಿಗೆ ಹಾನಿಯುಂಟು ಮಾಡುತ್ತಿವೆ. ಪ್ರಕೃತಿಗೆ ಮಾರಕವಾದ ಬಣ್ಣಗಳು ಮತ್ತು ಪಿಒಪಿಯಿಂದ ಕೆರೆ, ಬಾವಿ, ಕುಂಟೆಗಳ ನೀರು ಮಲೀನವಾಗುತ್ತಿವೆ.</p>.<p>ಪರಿಸರ ಸ್ನೇಹಿ ಗಣಪನ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂಬ ಅರಿವನ್ನು ಮಕ್ಕಳಿಗೆ ತಿಳಿಸುವ ಅಶಯದಿಂದ ಐದು ವರ್ಷಗಳಿಂದ ಈ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಆಯೋಜಕ ಹಿತೇಶ ಗೌಡ ಹೇಳಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>