‘ಈ ವರ್ಷವೂ ಬೆಳೆ ಬರುವ ಸಮಯಕ್ಕೆ ಕೊರೊನಾ ಪುನಃ ಆವರಿಸಿಕೊಂಡಿದೆ. ಈಗ ಒಂದು ಕೆ.ಜಿ.ಗೆ ₹ 5ಕ್ಕೆ ಕೇಳ್ತಾರೆ. ಕೊಡ್ತೀವಿ ಅಂದ್ರೂ ತೋಟಕ್ಕೆ ಬಂದು ಕಟಾವು ಮಾಡುವವರಿಲ್ಲ. ತೋಟಗಳಲ್ಲಿ ದ್ರಾಕ್ಷಿ ಹಣ್ಣಾಗಿದ್ದು, ನೊಣ ಬೀಳುತ್ತಿವೆ. ಮುಂದಿನ ಒಂದು ವಾರದಲ್ಲಿ ದ್ರಾಕ್ಷಿ ಕಟಾವು ಮಾಡದೇ ಇದ್ದರೆ, ಬೆಳೆದಿರುವ ಬೆಳೆ ಪೂರ್ತಿ ನಾಶವಾಗುತ್ತದೆ. ಲಕ್ಷಾಂತರ ರೂಪಾಯಿ ಸಾಲ ಹೊತ್ತುಕೊಳ್ಳಬೇಕಾಗುತ್ತದೆ. ಈ ಬೆಳೆಯಲ್ಲಿ ಬಂಡವಾಳ ಸಿಗದಿದ್ದರೆ ಮುಂದಿನ ಬೆಳೆಗೆ ಬಂಡವಾಳ ಹಾಕಲಿಕ್ಕೆ ಕಷ್ಟವಾಗುತ್ತದೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು. ಒಂದು ಹೆಕ್ಟೇರ್ಗೆ ಕನಿಷ್ಠ ₹ 1 ಲಕ್ಷ ಪರಿಹಾರ ಧನ ನೀಡಬೇಕು’ ಎಂದು ಒತ್ತಾಯಿಸಿದರು.