<p><strong>ಆನೇಕಲ್</strong>: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ರೈಲ್ವೆ ಅಂಡರ್ಪಾಸ್ ನೀರಿನಿಂದ ತುಂಬಿದ್ದು, ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ.</p>.<p>ಆನೇಕಲ್ ತಾಲ್ಲೂಕಿನ ಅರವಂಟಿಕೆಪುರ, ಬಿದರಗೆರೆ, ಮಾರನಾಯಕನಹಳ್ಳಿ, ಹುಸ್ಕೂರು, ಹೀಲಲಿಗೆ ಸೇರಿದಂತೆ ಐದಾರು ಸ್ಥಳಗಳಲ್ಲಿ ರೈಲ್ವೆ ಅಂಡರ್ಪಾಸ್ಗಳಲ್ಲಿ ಮಳೆ ನೀರು ತುಂಬಿಕೊಂಡಿದೆ.</p>.<p>ಶನಿವಾರ ಬೆಳಗ್ಗೆ ಅರವಂಟಿಕೆಪುರ ರೈಲ್ವೆ ಅಂಡರ್ಪಾಸ್ನಲ್ಲಿ ಸಿಲುಕಿಕೊಂಡುಕಾರೊಂದನ್ನು ಟ್ರಾಕ್ಟರ್ ಮೂಲಕ ಹೊರ ತೆಗೆಯಲಾಯಿತು.ಹೀಲಲಿಗೆಯ ರೈಲ್ವೇ ಅಂಡರ್ಪಾಸ್ನಲ್ಲಿಯೂ ನೀರು ತುಂಬಿದ್ದು, ವಾಹನಗಳ ಸಂಚಾರ ಸ್ಥಗಿತವಾಗಿದೆ. ದೊಮ್ಮಸಂದ್ರ, ಮುತ್ತಾನಲ್ಲೂರು ಮತ್ತಿತರ ಕಡೆಗಳಿಗೆ ಚಂದಾಪುರದಿಂದ ಹೋಗಬೇಕಾದ ಸಾರ್ವಜನಿಕರು ಪರದಾಡಿದರು.</p>.<p>ಶಾಲೆಗೆ ಹೋಗಲುವಿದ್ಯಾರ್ಥಿಗಳು ಅರವಂಟಿಕೆಪುರ ರಸ್ತೆಯನ್ನು ಬಿಟ್ಟು ಕರ್ಪೂರು ಮೂಲಕ ಪರ್ಯಾಯ ಮಾರ್ಗಗಳಲ್ಲಿ ಓಡಾಡುತ್ತಿದ್ದಾರೆ. ಈ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹಾಗಾಗಿ ಅಂಡರ್ಪಾಸ್ಗಳಿರುವ ಹೀಲಲಿಗೆ, ಅರಂಟಿಕೆಪುರ ಮತ್ತು ಹುಸ್ಕೂರು ಬಳ ವಾಹನ ಸಂಚಾರ ಸ್ಥಗಿತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್</strong>: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ರೈಲ್ವೆ ಅಂಡರ್ಪಾಸ್ ನೀರಿನಿಂದ ತುಂಬಿದ್ದು, ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ.</p>.<p>ಆನೇಕಲ್ ತಾಲ್ಲೂಕಿನ ಅರವಂಟಿಕೆಪುರ, ಬಿದರಗೆರೆ, ಮಾರನಾಯಕನಹಳ್ಳಿ, ಹುಸ್ಕೂರು, ಹೀಲಲಿಗೆ ಸೇರಿದಂತೆ ಐದಾರು ಸ್ಥಳಗಳಲ್ಲಿ ರೈಲ್ವೆ ಅಂಡರ್ಪಾಸ್ಗಳಲ್ಲಿ ಮಳೆ ನೀರು ತುಂಬಿಕೊಂಡಿದೆ.</p>.<p>ಶನಿವಾರ ಬೆಳಗ್ಗೆ ಅರವಂಟಿಕೆಪುರ ರೈಲ್ವೆ ಅಂಡರ್ಪಾಸ್ನಲ್ಲಿ ಸಿಲುಕಿಕೊಂಡುಕಾರೊಂದನ್ನು ಟ್ರಾಕ್ಟರ್ ಮೂಲಕ ಹೊರ ತೆಗೆಯಲಾಯಿತು.ಹೀಲಲಿಗೆಯ ರೈಲ್ವೇ ಅಂಡರ್ಪಾಸ್ನಲ್ಲಿಯೂ ನೀರು ತುಂಬಿದ್ದು, ವಾಹನಗಳ ಸಂಚಾರ ಸ್ಥಗಿತವಾಗಿದೆ. ದೊಮ್ಮಸಂದ್ರ, ಮುತ್ತಾನಲ್ಲೂರು ಮತ್ತಿತರ ಕಡೆಗಳಿಗೆ ಚಂದಾಪುರದಿಂದ ಹೋಗಬೇಕಾದ ಸಾರ್ವಜನಿಕರು ಪರದಾಡಿದರು.</p>.<p>ಶಾಲೆಗೆ ಹೋಗಲುವಿದ್ಯಾರ್ಥಿಗಳು ಅರವಂಟಿಕೆಪುರ ರಸ್ತೆಯನ್ನು ಬಿಟ್ಟು ಕರ್ಪೂರು ಮೂಲಕ ಪರ್ಯಾಯ ಮಾರ್ಗಗಳಲ್ಲಿ ಓಡಾಡುತ್ತಿದ್ದಾರೆ. ಈ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹಾಗಾಗಿ ಅಂಡರ್ಪಾಸ್ಗಳಿರುವ ಹೀಲಲಿಗೆ, ಅರಂಟಿಕೆಪುರ ಮತ್ತು ಹುಸ್ಕೂರು ಬಳ ವಾಹನ ಸಂಚಾರ ಸ್ಥಗಿತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>