<p><strong>ಹೊಸಕೋಟೆ</strong>: ನಗರದ ಕಾವೇರಿ ನಗರ ಮತ್ತು ಎಸ್ಎಸ್ಎಂ ಬಡಾವಣೆ ನಿವಾಸಿಗಳು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಪ್ರತಿ ಭಾನುವಾರ ಕಾವೇರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಕಟ್ಟಿಕೊಂಡು ಕಾವೇರಿ ನಗರದ ಮುಖ್ಯ, ಅಡ್ಡರಸ್ತೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ.</p>.<p>ಕಾವೇರಿ ನಗರದ 5ನೇ ಮುಖ್ಯ ರಸ್ತೆಯ 4ನೇ ಅಡ್ಡರಸ್ತೆಯಲ್ಲಿ ನಗರ ಗ್ರಂಥಾಲಯ ಸುತ್ತಮುತ್ತ, ರಸ್ತೆಯ ಇಬ್ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿದರು. ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಎಲ್ಲಂದರಲ್ಲಿ ಕಸ ಹಾಕಿದರೆ ₹1ಸಾವಿರ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದು ಕಸ ಹಾಕಿದವರ ಫೋಟೊ ಎಲ್ಲೆಡೆ ಹಾಕಲಾಗುವುದು ಮತ್ತು ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಅಲ್ಲಲ್ಲಿ ಬೋರ್ಡ್ ನೇತುಹಾಕಿದ್ದಾರೆ. ಆ ಮೂಲಕ ಸಾರ್ವಜನಿಕರಿಗೂ ಅರಿವು ಮತ್ತು ಎಚ್ಚರಿಕೆಯ ಸಂದೇಶವನ್ನು ನೀಡುವ ಕೆಲಸವನ್ನು ಕಾವೇರಿ ನಗರದ ನಿವಾಸಿಗಳು ಮಾಡುತ್ತಿದ್ದಾರೆ.</p>.<p>ಕಾವೇರಿ ನಗರದ ನಿವಾಸಿ ಮತ್ತು ನಗರ ಸಭೆ ಸದಸ್ಯ ಎಂ. ವಿ. ಸೋಮಶೇಖರ್, ಕಾವೇರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಡಾ. ತಮ್ಮಾರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ವಿ ಕೆ ವೆಂಕಟೇಶ್, ಕಾವೇರಿ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.</p>.<p>ನಮ್ಮ ಮನೆ ಬಳಿ ಕಸ ಇದ್ದರೆ ಅದರಿಂದ ನಮಗೆ ಕಾಯಿಲೆ ಬರುತ್ತದೆ. ಬಡಾವಣೆಯ ನಿವಾಸಿಗಳೆಲ್ಲ ಸೇರಿ ಕಳೆದ ಹತ್ತು ವರ್ಷಗಳಿಂದ ಪ್ರತಿ ಭಾನುವಾರ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆಗಾಗಿ ನಮ್ಮನ್ನು ನಾವೇ ಮಿಸಲಿಟ್ಟುಕೊಂಡಿದ್ದೇವೆ ಎಂದು <strong>ಕಾವೇರಿ ನಗರದ ನಿವಾಸಿ ಎಂ. ವಿ. ಸೋಮಶೇಖರ್ ಹೇಳಿದರು. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ</strong>: ನಗರದ ಕಾವೇರಿ ನಗರ ಮತ್ತು ಎಸ್ಎಸ್ಎಂ ಬಡಾವಣೆ ನಿವಾಸಿಗಳು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಪ್ರತಿ ಭಾನುವಾರ ಕಾವೇರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಕಟ್ಟಿಕೊಂಡು ಕಾವೇರಿ ನಗರದ ಮುಖ್ಯ, ಅಡ್ಡರಸ್ತೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ.</p>.<p>ಕಾವೇರಿ ನಗರದ 5ನೇ ಮುಖ್ಯ ರಸ್ತೆಯ 4ನೇ ಅಡ್ಡರಸ್ತೆಯಲ್ಲಿ ನಗರ ಗ್ರಂಥಾಲಯ ಸುತ್ತಮುತ್ತ, ರಸ್ತೆಯ ಇಬ್ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿದರು. ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಎಲ್ಲಂದರಲ್ಲಿ ಕಸ ಹಾಕಿದರೆ ₹1ಸಾವಿರ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದು ಕಸ ಹಾಕಿದವರ ಫೋಟೊ ಎಲ್ಲೆಡೆ ಹಾಕಲಾಗುವುದು ಮತ್ತು ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಅಲ್ಲಲ್ಲಿ ಬೋರ್ಡ್ ನೇತುಹಾಕಿದ್ದಾರೆ. ಆ ಮೂಲಕ ಸಾರ್ವಜನಿಕರಿಗೂ ಅರಿವು ಮತ್ತು ಎಚ್ಚರಿಕೆಯ ಸಂದೇಶವನ್ನು ನೀಡುವ ಕೆಲಸವನ್ನು ಕಾವೇರಿ ನಗರದ ನಿವಾಸಿಗಳು ಮಾಡುತ್ತಿದ್ದಾರೆ.</p>.<p>ಕಾವೇರಿ ನಗರದ ನಿವಾಸಿ ಮತ್ತು ನಗರ ಸಭೆ ಸದಸ್ಯ ಎಂ. ವಿ. ಸೋಮಶೇಖರ್, ಕಾವೇರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಡಾ. ತಮ್ಮಾರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ವಿ ಕೆ ವೆಂಕಟೇಶ್, ಕಾವೇರಿ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.</p>.<p>ನಮ್ಮ ಮನೆ ಬಳಿ ಕಸ ಇದ್ದರೆ ಅದರಿಂದ ನಮಗೆ ಕಾಯಿಲೆ ಬರುತ್ತದೆ. ಬಡಾವಣೆಯ ನಿವಾಸಿಗಳೆಲ್ಲ ಸೇರಿ ಕಳೆದ ಹತ್ತು ವರ್ಷಗಳಿಂದ ಪ್ರತಿ ಭಾನುವಾರ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆಗಾಗಿ ನಮ್ಮನ್ನು ನಾವೇ ಮಿಸಲಿಟ್ಟುಕೊಂಡಿದ್ದೇವೆ ಎಂದು <strong>ಕಾವೇರಿ ನಗರದ ನಿವಾಸಿ ಎಂ. ವಿ. ಸೋಮಶೇಖರ್ ಹೇಳಿದರು. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>